ಪ್ರೌಢಶಾಲಾ ಶಿಕ್ಷಕರ ವಿಜ್ಞಾನ ಕಮ್ಮಟದ ಉದ್ಘಾಟನೆ

020301ಮೆಡಿಕಲ್, ಇಂಜಿನಿಯರಿಂಗ್ ಕ್ಷೇತ್ರ ಹೊರತುಪಡಿಸಿ ಅಧ್ಯಯನಕ್ಕೆ ವಿಜ್ಞಾನದಲ್ಲಿ ಅನೇಕ ವಿಷಯಗಳಿವೆ. ನಾವೆಲ್ಲ ಗಮನಹರಿಸಬೇಕಾಗಿದೆ ಎಂದು ಕಲಬುರಗಿಯ ಖ್ಯಾತವೈದ್ಯ ವಿಜ್ಞಾನಿಯಾದ ನಾಡೋಜ ಡಾ. ಪಿ.ಎಸ್.ಶಂಕರ್ ಅವರು ತಿಳಿಸಿದರು.
ಕನ್ನಡ ವಿಶ್ವವಿದ್ಯಾಲಯ ವಿಜ್ಞಾನಗಳ ನಿಕಾಯವು ಬಳ್ಳಾರಿಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ೧೮ ಜನವರಿ ೨೦೧೬ರಿಂದ ೨೦ ಜನವರಿ ೨೦೧೬ರ ವರೆಗೆ ಭುವನವಿಜಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಪ್ರೌಢಶಾಲಾ ಶಿಕ್ಷಕರ ವಿಜ್ಞಾನ ಕಮ್ಮಟವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಶಿಕ್ಷಕರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಶಿಕ್ಷಕರು ಜೀವನ ಪೂರ್ತಿ ವಿದ್ಯಾರ್ಥಿಗಳೇ. ಪಠ್ಯಕ್ರಮದಲ್ಲಿರುವ ವಿಜ್ಞಾನವನ್ನು ವಿದ್ಯಾರ್ಥಿಗಳ ಜೀವನಕ್ಕೆ ಅನುಕೂಲವಾಗುವ ಹಾಗೆ ಅನುಭವದ ಹಿನ್ನೆಲೆಯಲ್ಲಿ ಅರ್ಥವಾಗುವ ರೀತಿಯಲ್ಲಿ ಕಲಿಸಬೇಕು ಎಂಬ ಹಿನ್ನೆಲೆಯಲ್ಲಿ ವಿಜ್ಞಾನ ಶಿಕ್ಷಕರಿಗಾಗಿ ಈ ಕಮ್ಮಟ ಹಮ್ಮಿಕೊಂಡಿರುವುದು ಶ್ಲಾಘನೀಯವಾಗಿದೆ. ಇಂದು ವಿದ್ಯಾರ್ಥಿಗಳಲ್ಲಿ ವಿಜ್ಞಾನ ಕಲಿಯುವ ಉತ್ಸಾಹ ಕಡಿಮೆಯಾಗುತ್ತಿದೆ. ಅವರು ಕೇವಲ ಪ್ರಶ್ನೆ ಉತ್ತರಗಳ ನೋಟ್ಸ್ ಮೇಲೆ ಅವಲಂಬಿತರಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ವಿಜ್ಞಾನದ ಕೆಲವು ಪಾರಿಭಾಷಿಕ ಪದಗಳನ್ನು ಕಲಿಸಲು ಶಿಕ್ಷಕರಿಗೆ ನಿಜವಾಗಿಯೂ ಕಷ್ಟವಾಗುತ್ತದೆ. ಆದ್ದರಿಂದ ಏಕರೂಪದ ಅರ್ಥ ಹೊಂದಿರುವಂತಹ ವಿಜ್ಞಾನದ ಪಾರಿಭಾಷಿಕ ಪದಕೋಶವನ್ನು ಕನ್ನಡ ವಿಶ್ವವಿದ್ಯಾಲಯ ವಿಜ್ಞಾನಗಳ ನಿಕಾಯದ ಮೂಲಕ ಹೊರ ತರುವಂತೆ ಮಾನ್ಯಕುಲಪತಿಯವರಿಗೆ ಮನವಿ ಮಾಡಿದರು. ಈ ಹಿಂದೆ ಸಂಶೋಧನೆ ಮಾಡಿದ ಪಾಶ್ಚಾತ್ಯ ವಿಜ್ಞಾನಿಗಳು ತಮ್ಮ ಶೋಧಗಳಿಗೆ ಮಾತೃ ಭಾಷೆಯಲ್ಲಿ ವಿವರಣೆ ನೀಡಿದ್ದಾರೆ. ನಮ್ಮಲ್ಲಿಯು ವಿಜ್ಞಾನವನ್ನು ಕನ್ನಡದಲ್ಲೇ ಕಲಿಸುವ ಸರಳವಾದ ಕ್ರಮ ಬೇಕಾಗಿದೆ ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಮಾನ್ಯಕುಲಪತಿಯವರಾದ ಡಾ. ಮಲ್ಲಿಕಾ ಎಸ್. ಘಂಟಿಯವರು ತಳಮಟ್ಟದಿಂದಲೇ ವೈಜ್ಞಾನಿಕವಾದಂತಹ ಆಲೋಚನೆಗಳ ದೃಷ್ಟಿಯಿಂದ ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದ ಶಿಕ್ಷಕರಿಗಾಗಿ ಈ ಶಿಬಿರವನ್ನು ಏರ್ಪಡಿಸಲಾಗಿದೆ. ಜೊತೆಗೆ ವಿಜ್ಞಾನ ಬೋಧಿಸುವ ಶಿಕ್ಷಕರು ಬರಹಗಾರರೂ ಆಗಬೇಕೆಂಬ ಆಶಯವಿದೆ. ಪ್ರಸ್ತುತದಲ್ಲಿ ಸಮಾಜ ಮತ್ತು ಪಾಲಕರು ಮಕ್ಕಳಿಂದ ಏನು ಬಯಸುತ್ತಿದ್ದಾರೆ ಎಂಬುದಕಷ್ಟೇ ಸಂಕುಚಿತವಾಗಿ ಶಿಕ್ಷಣ ಕ್ಷೇತ್ರ ತನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆ. ಕಲಿಸುವ ಕಲಿಯುವ ಕಡೆಯಲ್ಲಿ ವ್ಯಾಪಾರಿ ಮನೋಭಾವ ಇದೆ. ಮಕ್ಕಳ ಮನಃಸ್ಥಿತಿಯನ್ನು ಅರಿತುಕೊಂಡು ಮಕ್ಕಳ ಭಾಷೆಯಲ್ಲಿ ಶಿಕ್ಷಕರು ವಿಜ್ಞಾನ ಬೋಧಿಸಿದರೆ ಕುತೂಹಲ ಬೆಳೆಯಲು ಸಾಧ್ಯವಾಗುತ್ತದೆ. ವಿಜ್ಞಾನದಲ್ಲಿರುವ ಭಾಷಿಕ ಸಮಸ್ಯೆಯನ್ನು ನಿವಾರಿಸಿದರೆ, ಮಕ್ಕಳಲ್ಲಿ ಕಲಿಕೆಯ ಉತ್ಸಾಹ ಗರಿಗೆದರಬಹುದು. ಸ್ಥಳೀಯ ಭಾಷೆಯಲ್ಲಿ ಮಕ್ಕಳಿಗೆ ಜ್ಞಾನದ ಅರಿವುಕೊಟ್ಟರೆ ಮಕ್ಕಳಿಗೆ ತಾನೇ ತಾನಾಗಿ ಪಠ್ಯಕ್ರಮ ಅರ್ಥವಾಗುತ್ತದೆ. ಮಕ್ಕಳಲ್ಲಿ ತಾವು ವಿಜ್ಞಾನಿಯಾಗಬೇಕು ಎಂಬ ಭಾವನೆ ಮೂಡಲು ಸಾಧ್ಯವಾಗುತ್ತದೆ ಎಂದು ನುಡಿದರು.
ಸಂಪನ್ಮೂಲ ವ್ಯಕ್ತಿ ಹಾಗೂ ಕಮ್ಮಟದ ನಿರ್ದೇಶಕರಾದ ಡಾ. ಸುರೇಶ ಕುಲಕರ್ಣಿ ಅವರು ಪ್ರಾಸ್ತಾವಿಕ ನುಡಿಯುತ್ತ ವಿಜ್ಞಾನದಲ್ಲಿ ಪ್ರಶ್ನೋತ್ತರ ಬಿಟ್ಟು ಮಕ್ಕಳಿಗೆ ನಾವೇನು ಕಲಿಸುತ್ತಿಲ್ಲ. ವಿಜ್ಞಾನ ಎಂದರೆ ಪರಸ್ಪರ ಮಾತಾಡಬೇಕು. ಮಕ್ಕಳ ಪ್ರಶ್ನೆಗೆ ಶಿಕ್ಷಕರಲ್ಲಿ ಉತ್ತರ ಇದ್ದರೆ ಮಾತ್ರ ಸಂವಹನ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ವಿಜ್ಞಾನಗಳ ನಿಕಾಯದ ಸಂಯೋಜನಾಧಿಕಾರಿಯಾದ ಡಾ. ಎಂ. ಉಷಾ ಅವರು ಎಲ್ಲರನ್ನು ಸ್ವಾಗತಿಸುತ್ತ, ವಿಜ್ಞಾನದ ಬಗ್ಗೆ ಓದು ಕಡಿಮೆಯಾಗುತ್ತಿದೆ. ಬಹುಶಃ ಭಾಷಿಕ ಸಮಸ್ಯೆ ಹಾಗೂ ಸಾಮಾಜಿಕ ಸಮಸ್ಯೆಗಳಿರಬಹುದು. ಇನ್ನೊಂದು ಕಡೆ ನಗರ ಪ್ರದೇಶದಲ್ಲಿ ತಾಂತ್ರಿಕತೆಯನ್ನೇ ವಿಜ್ಞಾನ ಎಂದು ಭಾವಿಸುತ್ತಿರುವುದು ಕಾರಣವಾಗಿರಬಹುದು. ಈ ಹಿನ್ನೆಲೆಯಲ್ಲಿ ಕನ್ನಡ ವಿಶ್ವವಿದ್ಯಾಲಯದ ಹೊರಗೆ ಇರುವ ವಿಜ್ಞಾನಾಸಕ್ತರನ್ನು ಹಾಗು ಪಠ್ಯಕ್ರಮವನ್ನು ಆಧರಿಸಿ ಈ ಕಮ್ಮಟ ನಡೆಸಲಾಗುತ್ತಿದೆ ಎಂದರು.
ಸಂಗೀತ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಸಂಶೋಧನಾ ವಿದ್ಯಾಥಿಯಾದ ನರಸಿಂಹಮೂರ್ತಿ ನಿರೂಪಿಸಿ, ವಂದಿಸಿದರು. ಕುಲಸಚಿವರಾದ ಡಾ. ಡಿ. ಪಾಂಡುರಂಗಬಾಬು ಅವರು ಹಾಗೂ ಸಸ್ಯ ವಿಜ್ಞಾನ ತಜ್ಞರಾದ ಡಾ. ಸಿ.ಡಿ.ಪಾಟೀಲ, ಗಣಿತ ಮತ್ತು ಭೌತವಿಜ್ಞಾನ ತಜ್ಞರಾದ ಶ್ರೀ ವಿಶ್ವನಾಥ ನಾಗಠಾಣ, ಆಯುರ್ವೇದ ವೈದ್ಯ ತಜ್ಞರಾದ ಡಾ. ಚಂದ್ರು ಹಾಗೂ ಡೀನರು ಉಪಸ್ಥಿತರಿದ್ದರು. ೭೫ ಶಿಕ್ಷಕರು ಕಮ್ಮಟಾರ್ಥಿಗಳಾಗಿ ಭಾಗವಹಿಸಿದ್ದರು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s