ಲೇಖಕ: kannadauniversity

ದಲಿತ ಅಧ್ಯಯನ ಪೀಠ : ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರಮಹಾಪರಿನಿರ್ವಾಣ ದಿನಾಚರಣೆ ಸಮಾರಂಭ

ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನಾಚರಣೆ ಸಮಾರಂಭ

ಪತ್ರಿಕಾ ವರದಿ-೦೬.೧೨.೨೦೨೧

ಕನ್ನಡ ವಿಶ್ವವಿದ್ಯಾಲಯದ ದಲಿತ ಅಧ್ಯಯನ ಪೀಠದಿಂದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನಾಚರಣೆಯ ಅಂಗವಾಗಿ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಯವರಾದ ಡಾ. ಸ.ಚಿ. ರಮೇಶ ಅವರ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ವೇದಿಕೆಯಲ್ಲಿ ಕುಲಸಚಿವರಾದ ಡಾ.ಎ. ಸುಬ್ಬಣ್ಣ ರೈ ಅವರು ಹಾಗೂ ದಲಿತ ಅಧ್ಯಯನ ಪೀಠದ ಸಂಚಾಲಕರಾದ ಡಾ. ವೆಂಕಟಗಿರಿ ದಳವಾಯಿ ಅವರು ಇದ್ದರು.

ಓದು ಮತ್ತು ಸಾಧನೆಯಿಂದ ಮಾತ್ರ ಗುರುಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಲು ಸಾಧ್ಯ:ಡಾ ಸ. ಚಿ. ರಮೇಶ, ಮಾನ್ಯ ಕುಲಪತಿಗಳು

ಗುರು ಎಂಬುವನು ದೇವರಗಿಂತ ದೊಡ್ಡವನು. ಕೆಲವೊಮ್ಮೆ ದೇವರು ನಮ್ಮನ್ನು ಕೈ ಹಿಡಿಯದಿದ್ದರೂ ಸಹ ಗುರು ಕಲಿಸಿದ ವಿದ್ಯೆ ಮಾತ್ರ ನಮ್ಮನ್ನು ಕೈ ಬಿಡುವುದುದಿಲ್ಲ. ಗುರು ಆದವನು ಸದಾ ವಿದ್ಯಾರ್ಥಿಗಳ ಬೆನ್ನ ಹಿಂದೆ ನಿಂತು ಮಾರ್ಗದರ್ಶನ ಮಾಡುತ್ತಾ ಸಾರ್ಥಕತೆ ಮೆರೆಯುತ್ತಾರೆ. ಆದರೆ ಅಂತಹ ನಿಸ್ವಾರ್ಥ ಸೇವೆ ಸಲ್ಲಿಸುವ ಗುರುಗಳಿಗೆ ವಿದ್ಯಾರ್ಥಿಗಳು ಅವರ ಓದು ಮತ್ತು ಸಾಧನೆಯಿಂದ ಮಾತ್ರ ಕೃತಜ್ಞತೆಗಳನ್ನು ಸಲ್ಲಿಸಲು ಸಾಧ್ಯ. ಅದಕ್ಕಾಗಿ ವಿದ್ಯಾರ್ಥಿಗಳು ಸಾಧನೆ ಹಾದಿಯಲ್ಲಿ ಸಾಗಬೇಕು. ವಿದ್ಯಾರ್ಥಿಗಳು ಕಾಲಹರಣ ಮಾಡದೆ ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕೆಂದು ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ ಸ. ಚಿ. ರಮೇಶ್ ಅವರು ಹೇಳಿದರು.

ಕನ್ನಡ ವಿಶ್ವವಿದ್ಯಾಲಯದ ಭಾಷಾ ನಿಕಾಯದ ಎಂ.ಎ.ಪಿಎಚ್.ಡಿ ಕನ್ನಡ ಸಾಹಿತ್ಯ ಸಂಯೋಜಿತ ಪದವಿಗೆ ಪ್ರವೇಶ ಪಡೆದ ೨೦೨೧ನೇ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಸಸಿಗೆ ನೀರೆರೆಯವ ಮೂಲಕ ಉದ್ಘಾಟಿಸಿ ಅಧ್ಯಕ್ಷಿಯ ಮಾತುಗಳನ್ನಾಡಿದ ಕುಲಪತಿಗಳಾದ ಡಾ. ಸ. ಚಿ ರಮೇಶ್ ಅವರು ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲೂ ಹೊಸ ಹೊಸ ವಿಭಿನ್ನ ಆಚಾರ, ವಿಚಾರ, ಚಿಂತನೆಗಳಿರುತ್ತವೆ. ಆದರೆ ಅವು ಮುಖ್ಯಭೂಮಿಕೆಗೆ ಬರಬೇಕಾದರೆ ಶಿಕ್ಷಣ ಅನಿವಾರ್ಯ. ಅಂತಹ ಮೌಲ್ಯಯುತ ಶಿಕ್ಷಣವನ್ನು ಬೌದ್ಧಿಕ ಜ್ಞಾನವನ್ನ ವಿಶ್ವವಿದ್ಯಾಲಯ ಪ್ರಾರಂಭದಿಂದಲೂ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಧಾರೆ ಎರೆಯತ್ತಿದೆ. ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಬೌದ್ಧಿಕ ಜ್ಞಾನ ಸಂಪತ್ತನ್ನು ಸದುಪಯೋಗಪಡಿಸಿಕೊಂಡು ಸಾಧನೆಯ ಹಾದಿಯಲ್ಲಿ ಸಾಗಬೇಕು ಎಂದು ಹೇಳಿದರು. ಹಿರಿಯ ವಿದ್ಯಾರ್ಥಿಗಳು ಹೊಸ ಕಿರಿಯ ವಿದ್ಯಾರ್ಥಿಗಳ ಸ್ವಾಗತ ಮಾಡಲು ನಡೆಸಿದ ತಯಾರಿ, ಅಲಂಕಾರ, ಅಚ್ಚು ಕಟ್ಟಿನ ನಿರ್ವಹಣೆ ತಮ್ಮ ಬಾಲ್ಯದ ಕಾಲೇಜು ಬದುಕಿನ ನೆನಪುಗಳು ಮರುಕಳಿಸುವಂತಿತ್ತು ಎಂದು ಸಂತಸಪಟ್ಟರು. ಹಾಗೆಯೇ ವಿಶ್ವವಿದ್ಯಾಲಯಕ್ಕೆ ಪ್ರವೇಶ ಪಡೆಯುವ ಬಹುತೇಕ ವಿದ್ಯಾರ್ಥಿಗಳು ನಾವು ಹಿಂದೆ ಕಲಿಸಿದ ವಿದ್ಯಾರ್ಥಿಗಳ ವಿದ್ಯಾರ್ಥಿಗಳೇ ಹೆಚ್ಚಾಗಿದ್ದು ಒಂದು ತರಹ ಅಜ್ಜ ತನ್ನ ಮೊಮ್ಮಕ್ಕಳ್ಳನ್ನು ಹೆಗಲ ಮೇಲೆ ಕೂರಿಸಿಕೊಂಡು ಜಗತ್ತು ತೋರಿಸುವ ಹಾಗೇ ನಾವು ಇಂದು ನಮ್ಮ ಹಳೆಯ ಶಿಷ್ಯರ ಶಿಷ್ಯರನ್ನು ಕಲಿಸುತ್ತಿರುವುದು ಅತ್ಯಂತ ಸಂತೋಷದ ವಿಚಾರ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಇನ್ನು ಕಾರ್ಯಕ್ರಮ ಮುಖ್ಯ ಅತಿಥಿಗಳಾದ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಎ. ಸುಬ್ಬಣ್ಣ ರೈ ಅವರು ಮಾತನಾಡಿ ಬೇರೆ ಬೇರೆ ವಿಶ್ವವಿದ್ಯಾಲಯಗಳಿಗಿಂತ ನಮ್ಮ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಮುಕ್ತವಾಗಿ ಅಧ್ಯಯನ ಮಾಡಲು ಅನುಕೂಲವಾಗುವಂತ ವಾತಾವರಣ ನಮ್ಮ ವಿಶ್ವವಿದ್ಯಾಲಯದಲ್ಲಿದೆ. ವಿದ್ಯಾರ್ಥಿಗಳ ಬೌದ್ಧಿಕ ಜ್ಞಾನವನ್ನೂ ವೃದ್ಧಿಸಲು ಏಳು ನಿಕಾಯದ ಬೋಧಕರಿಂದ ವಸ್ತು ವಿಷಯವನ್ನು, ಬೋಧಿಸಲಾಗುತ್ತದೆ ಇದರಿಂದ ವಿದ್ಯಾರ್ಥಿಗಳು ಸಂಶೋಧನೆ ಹಾದಿಯಲ್ಲಿ ಸಾಗಲು ಅನುಕೂಲವಾಗತ್ತವೆ ಎಂದು ಹೇಳಿದರು.

ಇನ್ನು ಕಾರ್ಯಕ್ರಮದಲ್ಲಿ ಕನ್ನಡ ವಿಶ್ವವಿದ್ಯಾಲಯ ಭಾಷಾ ನಿಕಾಯದ ಡೀನ್‌ಗಳಾದ ಡಾ. ವೀರೇಶ ಬಡಿಗೇರ ಅವರು ಮಾತನಾಡಿ ಕನ್ನಡ ವಿಶ್ವವಿದ್ಯಾಲಯಕ್ಕೆ ಡಾ. ಚಂದ್ರಶೇಖರ್ ಕಂಬಾರ ಅವರು ಸಾಂಸ್ಕೃತಿಕ ಮತ್ತು ಬೌದ್ಧಿಕ ಜ್ಞಾನದ ಜೀವಂತಿಕೆಯನ್ನು ತುಂಬಿದ ಪ್ರತಿಫಲವಾಗಿ ಇಂದು ನಾವು ಸಾಂಸ್ಕೃತಿಕವಾಗಿ ಬೆರೆಯುತ್ತಿದ್ದೆವೆ. ಆದರೆ ಇಂದಿನ ಸಾಹಿತ್ಯ ಸಂಶೋಧನಾ ವಿದ್ಯಾರ್ಥಿಗಳು ಆತ್ಮ ವಿಶ್ವಾಸವಿಲ್ಲದ ಅಕ್ಷರಸ್ಥರಾಗುತ್ತಿದ್ದಾರೆ ಎಂಬ ಕಂಬಾರ ಅವರ ಮಾತನ್ನು ಒತ್ತಿ ಹೇಳಿ ವಿದ್ಯಾರ್ಥಿಗಳು ಕೇವಲ ಅಕ್ಷರ ಜ್ಞಾನದ ಜೊತೆಗೆ ಆತ್ಮ ವಿಶ್ವಾಸ ಬೆಳೆಸಿಕೊಳ್ಳಬೇಕು. ಮುಖ್ಯವಾಗಿ ಸಂಶೋಧನೆ ಎಂದರೆ ಕೇವಲ ಪ್ರಬಂಧ ಮಂಡಿಸಿ, ಪುಸ್ತಕ ರೂಪದಲ್ಲಿ ವಿಶ್ವವಿದ್ಯಾಲಯಕ್ಕೆ ಸಲ್ಲಿಸುವ ಬದಲು ಸಾಹಿತ್ಯ ಸಂಶೋಧನೆಯ ನಿಜವಾದ ಆಶಯವನ್ನು ಅರಿತು ಸಮಾಜಕ್ಕೆ ಅರ್ಥೈಸುವುದೆ ನಿಜವಾದ ಸಂಶೋಧನೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನು ಎಂ.ಎ. ಪಿಎಚ್.ಡಿ ಕನ್ನಡ ಸಾಹಿತ್ಯ ಸಂಯೋಜಿತ ಪದವಿಯ ಸಂಚಾಲಕರಾದ ಡಾ. ಅಮರೇಶ ನುಗಡೋಣಿ ಅವರು ಮಾತನಾಡಿ ಕನ್ನಡ ವಿಶ್ವವಿದ್ಯಾಲಯವು ಪ್ರಾರಂಭದ ಸ್ಥಾಪನಾದಿನಗಳಿಂದಲೂ ಕಾಡಿನಂತಿದ್ದ ಈ ಪಾಳು ಭೂಮಿಯಲ್ಲಿ ತಾತ್ವಿಕ ಸಂಶೋಧನೆಯ ಶಿಕ್ಷಣ ಕ್ರಾಂತಿಯನ್ನು ಮಾಡುತ್ತಿದೆ. ಇಂತಹ ವಿಶ್ವವಿದ್ಯಾಲಯದಲ್ಲಿ ಕಲಿಯುತ್ತಿರುವ, ಕಲಿಸುತ್ತಿರುವ ನಾವೆಲ್ಲಾ ಧನ್ಯರು. ವಿಶ್ವವಿದ್ಯಾಲಯ ನಾಡು ನುಡಿ ಸಾಹಿತ್ಯ ಸಂಸ್ಕೃತಿಗೆ ತನ್ನದೆ ವಿಶೇಷ ಕೊಡುತ್ತಿರುವುದನ್ನು ಹೆಮ್ಮೆಯಿಂದ ಹೇಳಬೇಕು ಎಂದು ಹೇಳಿದರು. ಹಾಗೂ ವಿದ್ಯಾರ್ಥಿಗಳು ಕೇವಲ ಪದವಿ ಮತ್ತು ಅಂಕಗಳಿಗಿಂತ ಜ್ಞಾನದ ಕಡೆಗೆ ಹೆಚ್ಚು ಗಮನ ಹರಿಸಬೇಕೆಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಎಂ. ಎ ಕನ್ನಡ ಸಾಹಿತ್ಯ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗಳಾದ ಅಕ್ಷತಾ ಹಾಗೂ ಮಂಜುನಾಥ ಅನಿಸಿಕೆ ಹೇಳಿದರು. ಇನ್ನು ಪಂಪಾಪತಿ ಅವರು ಗಣ್ಯರನ್ನು ಸ್ವಾಗತಿಸಿದರು, ವಿದ್ಯಾರ್ಥಿನಿ ಮಂಜುಳಾ ಎಂ ಅವರು ಕಾರ್ಯಕ್ರಮನ್ನು ವಂದಿಸಿದರು. ವಿದ್ಯಾರ್ಥಿನಿ ಬಾಣದ ಲಕ್ಷ್ಮಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಆಡಳಿತ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಧಿತರಿದ್ದರು.


ಲಿಂಗತ್ವದ ಪೂರ್ವಗ್ರಹ ಮೀರಲು ಧ್ವನಿಯೆತ್ತಿ : ಸಿ.ಜಿ. ಮಂಜುಳಾ

ಲಿಂಗತ್ವದ ಪೂರ್ವಗ್ರಹ ಮೀರಲು ಧ್ವನಿಯೆತ್ತಿ : ಸಿ.ಜಿ. ಮಂಜುಳಾ


ಮಹಿಳಾ ಅಸಮಾನತೆಯ ವಿಷಯವು ವಿಶ್ವದಲ್ಲೇ ಗಂಭೀರವಾದ ಸಮಸ್ಯೆಯಾಗಿದೆ. ಮಹಿಳೆ ಕುರಿತಂತೆ ಜನರ ಮಾನಸಿಕತೆ ಮತ್ತು ಸಂವೇದನೆಯಲ್ಲಿ ಸಮಸ್ಯೆಯಿದ್ದು, ಜನರ ಮನಸ್ಥಿತಿ ಬದಲಾಗುವವರೆಗೂ ಮಹಿಳಾ ಸಮಾನತೆ ಸಿಗುವುದು ಕಷ್ಟ. ಲಿಂಗತ್ವ ಪೂರ್ವಗ್ರಹ ಮೀರಲು ಮಹಿಳೆಯರು ಧ್ವನಿ ಎತ್ತಬೇಕು ಎಂದು ಪತ್ರಕರ್ತರಾದ ಸಿ.ಜಿ. ಮಂಜುಳಾ ಅವರು ಅಭಿಪ್ರಾಯಪಟ್ಟರು.
ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಆಯೋಜಿಸಿದ್ದ ಭೌತವಾದಿಯ ನೆಲೆಯಲ್ಲಿ ಕನ್ನಡ ಮಹಿಳಾ ಅಧ್ಯಯನ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದಿನದಿಂದ ದಿನಕ್ಕೆ ಮಹಿಳೆಯರ ಮೇಲೆ ಅತ್ಯಾಚಾರಗಳು, ಕೌಟುಂಬಿಕ ಹಿಂಸೆ, ಹೆಣ್ಣು ಭ್ರೂಣ ಹತ್ಯೆ, ಉದ್ಯೋಗ ಸ್ಥಳದಲ್ಲಿನ ಕಿರುಕುಳ ಸೇರಿದಂತೆ ದೌರ್ಜನ್ಯಗಳು ಹೆಚ್ಚುತ್ತಿವೆ. ರಾಜಕಾರಣ ವ್ಯವಸ್ಥೆಯಲ್ಲಿ ಮಹಿಳೆ ಇಂದಿಗೂ ಮುಖ್ಯವಾಹಿನಿಗೆ ಬರುತ್ತಿಲ್ಲ. ರೈತ ಎಂದಾಕ್ಷಣ ಮಣ್ಣಿನ ಮಗ ಎಂದು ಕರೆಯುತ್ತೇವೆ ಹೊರತಾಗಿ ಮಣ್ಣಿನ ಮಗಳು ಎಂಬುದನ್ನು ಮರೆತಿದ್ದೇವೆ. ಯಾವುದೇ ಪ್ರಮುಖ ನಿರ್ಧಾರ, ನಿರ್ಣಯ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಪುರುಷನೇ ಮುಂದಿರುವನು. ಚರಿತ್ರೆ ಮತ್ತು ಭಾಷೆ ವಿಷಯದಲ್ಲೂ ಪುರುಷ ಮೇಲುಗೈ ಸಾಧಿಸಿದ್ದು, ಮಹಿಳೆ ಹಿಂದುಳಿದಿರುವುದನ್ನು ಕಾಣಬಹುದು. ಕೋವಿಡ್೧೯ ಸಂದರ್ಭದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕೌಟುಂಬಿಕ ಹಿಂಸೆ, ಬಾಲ್ಯ ವಿವಾಹಗಳಿಗೆ ಒಳಗಾಗಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಕೋವಿಡ್ ನಂತರ ಪುರುಷರು ಉದ್ಯೋಗಗಳಿಗೆ ಹಿಂತಿರುಗಿರುವಷ್ಟು ಪ್ರಮಾಣದಲ್ಲಿ ಮಹಿಳೆಯರು ಹಿಂದಿರುಗಿಲ್ಲದಿರುವುದು ಅಂಕಿ-ಅಂಶಗಳಿಂದ ಕಂಡು ಬಂದಿದೆ. ನಿರುದ್ಯೋಗಿಗಳಾಗಿರುವುದು ಕಂಡು ಬಂದಿದೆ. ಮಹಿಳೆಯರು ಅನೇಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು, ಅವರ ದುಡಿಮೆ ಮತ್ತು ವೇತನದಲ್ಲಿ ತಾರತಮ್ಯವನ್ನು ಕಾಣುತ್ತಿದ್ದೇವೆ. ಲಿಂಗತ್ವ ಪೂರ್ವಗ್ರಹವು ಮಹಿಳೆಯರ ಏಳಿಗೆಯನ್ನು ದಿನದಿಂದ ದಿನಕ್ಕೆ ಕುಂದಿಸುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು. ಮಹಿಳೆಯನ್ನು ಸಹಜೀವಿಯಾಗಿ ಕಾಣುವುದು ಮುಖ್ಯ. ಹೆಣ್ಣು, ಗಂಡು, ಮಂಗಳಮುಖಿ, ದ್ವಿಲಿಂಗಿಗಳು ಸೇರಿದಂತೆ ವೈವಿಧ್ಯಮಯ ಜನರ ಪಾಲ್ಗೋಳ್ಳುವಿಕೆಯು ಸಹಭಾಗಿತ್ವ ಸಮಾಜದ ನಿರ್ಮಾಣಕ್ಕೆ ಸಹಕಾರಿ ಹೇಳಿದರು.
ಅಲ್ಬರ್ಟಾ ವಿಶ್ವವಿದ್ಯಾಲಯದ ಇಂಗ್ಲೀಷ ಮತ್ತು ಸಿನಿಮಾ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ.ಶಶಿಕುಮಾರ ಅವರು ಆನ್‌ಲೈನ್ ಮೂಲಕ ವಿಶೇಷ ಉಪನ್ಯಾಸ ನೀಡುತ್ತ ಗಂಡು-ಹೆಣ್ಣು ಎಂಬ ಪರಿಭಾಷೆಯಲ್ಲಿ ಮಾತನಾಡುತ್ತೇವೆ. ಈ ಪರಿಭಾಷೆಯನ್ನು ಮೊದಲಿನಿಂದಲೇ ರೂಪಿಸಿದ್ದು, ಇದು ನಮ್ಮ ಪೂರ್ವಗ್ರಹವನ್ನು ಸೂಚಿಸುತ್ತದೆ. ಎಲ್ಲಾ ರಂಗದಲ್ಲೂ ಮಹಿಳೆ ಮುಂಚಿನಿಂದಲೂ ಶೋಷಣೆಗೆ ಒಳಗಾಗಿರುವುದರಿಂದ ಮಹಿಳಾ ಅಧ್ಯಯನ ವಿಭಾಗವನ್ನು ರೂಪಿಸಲಾಗಿದೆ. ಮಹಿಳೆಯರು ವಾಸಿಸುವ ಭೌಗೋಳಿಕ ಪರಿಸರ, ಹವಾಮಾನ, ಜಾತಿವ್ಯವಸ್ಥೆ, ವರ್ಗ ವ್ಯವಸ್ಥೆಗಳು ಮಹಿಳಾ ಅಸಮಾನತೆಯ ಮೇಲೆ ಪ್ರಭಾವ ಬೀರಬಲ್ಲವು. ಮಹಿಳೆಯರ ಕುರಿತಂತೆ ಅಧ್ಯಯನ ಕೈಗೊಳ್ಳುವ ಸಂದರ್ಭದಲ್ಲಿ ಮಹಿಳಾ ಪ್ರಜ್ಞೆಯ ಜೊತೆಗೆ ಅವರ ಭೌತಿಕ ಪರಿಸರವನ್ನು ಅವಲೋಕಿಸುವುದು ಮುಖ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕನ್ನಡ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ಎ.ಸುಬ್ಬಣ್ಣ ರೈ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡುತ್ತ ನಾಡಿನಲ್ಲಿ ಹಲವಾರು ದಿನಾಚರಣೆಗಳನ್ನು ಆಚರಿಸುತ್ತೇವೆ. ಎಲ್ಲಾ ಆಚರಣೆಗಳಿಗೂ ಅದರದೇ ಆದ ಹಿನ್ನಲೆಯಿರುತ್ತದೆ. ಮಹಿಳಾ ದಿನಾಚರಣೆಗೂ ಅದರದೇ ಆದ ಹಿನ್ನಲೆಯಿರುವುದು. ಮಹಿಳಾ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಮುಂದಾಗಬೇಕಿದೆ ಎಂದು ತಿಳಿಸಿದರು.
ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ.ಶೈಲಾಜಾ ಹಿರೇಮಠ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತ ಅಮೇರಿಕವು ಕೋವಿಡ್ ೧೯ ಸಂದರ್ಭದಲ್ಲಿ ನಾಯಕತ್ವ ಸಾಧನೆಯಲ್ಲಿ ಸಮಾನ ಅವಕಾಶ ಕುರಿತ ಧ್ಯೇಯವಾಕ್ಯದೊಂದಿಗೆ ಮಹಿಳೆಯರ ವಿಷಯವನ್ನು ಅವಲೋಕಿಸಿದೆ. ಈ ಭಾರಿಯ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಧ್ಯೇಯ ವಾಕ್ಯ : ಅhoose ಣo ಅhಚಿಟಟeಟಿge ಆಗಿದೆ. ಮಹಿಳಾ ಸಬಲೀಕರಣ ಮತ್ತು ಹಕ್ಕುಗಳ ಒಳಗೊಳ್ಳುವಿಕೆ ಇಂದಿಗೂ ಸವಾಲಾಗಿದೆ. ಈ ಹಿನ್ನಲೆಯಲ್ಲಿ ಮಹಿಳೆಯರು ತಮಗೆ ಎದುರಾಗುವ ಪ್ರತಿಯೊಂದು ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸುವುದನ್ನು ಕಲಿಯುವುದು ಮುಖ್ಯ. ಎಲ್ಲಾ ವಿಷಯಗಳಲ್ಲೂ ಆಯ್ಕೆಯ ಸ್ವಾತಂತ್ರ್ಯವನ್ನು ಬಳಸಿಕೊಳ್ಳುವುದರ ಮೂಲಕ ನಿಮ್ಮ ಜೀವನದಲ್ಲಿ ಅಪೇಕ್ಷಿತ ಬದಲಾವಣೆಯನ್ನು ಕಂಡುಕೊಳ್ಳಿ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ವಿವಿಧ ವಿಭಾಗದ ಡೀನರು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಂಗೀತ ವಿಭಾಗದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಪ್ರಾರ್ಥಿಸಿದರು. ಮಹಿಳಾ ಅಧ್ಯಯನ ವಿಭಾಗದ ವಿದ್ಯಾರ್ಥಿನಿ ಶಿಲ್ಪ ಅವರು ನಿರೂಪಿಸಿದರು. ಮಹಿಳಾ ಅಧ್ಯಯನ ವಿಭಾಗದ ವಿದ್ಯಾರ್ಥಿನಿ ತಾಯಿಶ್ರೀ ವಂದಿಸಿದರು.

ಕನ್ನಡ ವಿಶ್ವವಿದ್ಯಾಲಯ, ಹಂಪಿಕನಕದಾಸ ಜಯಂತಿ ಕಾರ್ಯಕ್ರಮ ವಿಶೇಷ ಉಪನ್ಯಾಸ : ಕನಕದಾಸರ ಕೀರ್ತನೆಗಳಲ್ಲಿ ಸಾಮಾಜಿಕ ಅಭಿವ್ಯಕ್ತಿ

ಕನ್ನಡ ವಿಶ್ವವಿದ್ಯಾಲಯ, ಹಂಪಿಕನಕದಾಸ ಜಯಂತಿ ಕಾರ್ಯಕ್ರಮ ವಿಶೇಷ ಉಪನ್ಯಾಸ : ಕನಕದಾಸರ ಕೀರ್ತನೆಗಳಲ್ಲಿ ಸಾಮಾಜಿಕ ಅಭಿವ್ಯಕ್ತಿ

ಕೀರ್ತನೆಗಳನ್ನು ಮಾಧ್ಯಮವಾಗಿಸಿಕೊಂಡ ವ್ಯಕ್ತಿ ಕನಕದಾಸರು: ಡಾ.ವಾಯ್.ಎಂ.ಯಾಕೊಳ್ಳಿ

ಜಾತಿ ಎಂಬುದು ಹುಟ್ಟಿನಿಂದ ಬಂದಿಲ್ಲ, ಇದು ನಾವು ಮಾಡಿಕೊಂಡಿರುವ ಕುಲದ ವ್ಯವಸ್ಥೆ. ವ್ಯಕ್ತಿಯನ್ನು ಜಾತಿಯಿಂದ ನೋಡುವುದಲ್ಲ. ವ್ಯಕ್ತಿ ಮಾಡಿರುವ ಸಾಧನೆಯಿಂದ ವ್ಯಕ್ತಿತ್ವದಿಂದ ನೋಡಬೇಕು ಎಂದು ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಾಮಾಜಿಕ ಬಂಡಾಯ ಅಸ್ತ್ರವಾಗಿ ಕೀರ್ತನೆಗಳನ್ನು ಮಾಧ್ಯಮವಾಗಿಸಿಕೊಂಡ ಮಹಾನ್ ಚಿಂತಕ ಕನಕದಾಸರು ಎಂದು ಪ್ರಾಧ್ಯಾಪಕರಾದ ಡಾ.ವಾಯ್.ಎಂ.ಯಾಕೊಳ್ಳಿ ಅವರು ಅಭಿಪ್ರಾಯಪಟ್ಟರು.ಕನ್ನಡ ವಿಶ್ವವಿದ್ಯಾಲಯದ ಭುವನ ವಿಜಯ ಸಭಾಂಗಣದಲ್ಲಿ ಹಾಲುಮತ ಅಧ್ಯಯನ ಪೀಠವು ಆಯೋಜಿಸಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಕನಕದಾಸರ ಕೀರ್ತನೆಗಳಲ್ಲಿ ಸಾಮಾಜಿಕ ಅಭಿವ್ಯಕ್ತಿ ಎನ್ನುವ ವಿಷಯದ ಕುರಿತು ಉಪನ್ಯಾಸ ನೀಡಿದ ಅವರು ಕನಕದಾಸರನ್ನು ಒಂದೇ ಆಯಾಮದಿಂದ ನೋಡಲು ಸಾಧ್ಯವಿಲ್ಲ. ವಚನಕಾರರ ಜೊತೆಯಲ್ಲಿ ಬಂದ ಕ್ರಾಂತಿಕಾರರು, ಸಮಾಜವಿಜ್ಞಾನಿ, ದಾಸರು, ಕೀರ್ತನಕಾರರು, ವಿಚಾರವಾದಿ, ಕವಿಗಳು, ದಾರ್ಶನಿಕರಾದ ಕನಕದಾಸರು ಭಕ್ತಿಪಂಥದಲ್ಲಿ ಬಂದಂಥ ವ್ಯಕ್ತಿಯಾದರೂ ಸಹ ಭಕ್ತಿಪಂಥದಲ್ಲಿ ಇರುವ ಅನೇಕ ಆಚಾರ-ವಿಚಾರಗಳನ್ನು ವಿರೋಧಿಸಿದಂತಹ ವ್ಯಕ್ತಿ ಕನಕದಾಸರು. ಕನ್ನಡ ಸಾಹಿತ್ಯ ಅಧ್ಯಯನ ಮಾಡುವ ಸಂದರ್ಭದಲ್ಲಿ ಬಸವಣ್ಣನವರ ನಂತರ ಬಂದ ಬಂಡಾಯಕಾರರು ಕನಕದಾಸರು. ಇವರು ಸಾಮಾಜಿಕ ನ್ಯಾಯ, ಸಾಮಾಜಿಕ ಬುದುಕು, ಸಮಾನತೆಯಿಂದ ಕೂಡಿರಬೇಕು ಎಂದು ಪ್ರತಿಪಾದಿಸುತ್ತಿದ್ದರು. ನಂತರ ಆಧ್ಯಾತ್ಮಿಕ ಜೊತೆಯಲ್ಲಿ ಸಾಮಾಜಿಕ ಚಿಂತನೆಗಳನ್ನು ಅಭಿವ್ಯಕ್ತಿಗೊಳಿಸಿದ ಮಹಾನ್‌ಚೇತನ. ಕನಕದಾಸರ ಸಾಮಾಜಿಕ ಅಭಿವ್ಯಕ್ತಿ ನೀತಿಯ ಮೇಲೆ ನಿಂತಿದೆ. ಭಕ್ತಿ ಪರಿಶುದ್ಧವಾಗಬೇಕು. ಯಾವುದೇ ಜಾತಿ ತಾರತಮ್ಯವಿಲ್ಲದೆ ಕಾಯಕದಲ್ಲಿ ದೇವರನ್ನು ಕಾಣಬೇಕು. ಇಂತಹ ಹೃದಯದ ಕೃಷಿ ಮಾಡುವ ಮೂಲಕ ಧ್ಯಾನ, ಶ್ರದ್ಧೆ, ಶಿಸ್ತು, ಜ್ಞಾನ, ವಿನಯ, ಸಾಮಾಜಿಕ ಕಳಕಳಿಯ ಮೂಲಕ ಭಕ್ತಿಯಿಂದ ಸಮಾಜವನ್ನು ಕಾಣಬೇಕು. ಕುಲಜಾತಿ, ಧರ್ಮಗಳ ವ್ಯವಸ್ಥೆಯಿಂದ ಮನುಷ್ಯನು ಅಜ್ಞಾನಕ್ಕೆ ಜಾರುತಿದ್ದಾನೆ. ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ಕನಕದಾಸರು ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ. ಅವರ ಚಿಂತನೆ, ಆಲೋಚನೆ, ಕಾವ್ಯ, ಕೀರ್ತನೆಗಳು ಪ್ರಸ್ತುತ ಸಮಾಜಕ್ಕೆ ದಾರಿದೀಪವಾಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾನ್ಯ ಕುಲಸಚಿವರಾದ ಡಾ.ಎ.ಸುಬ್ಬಣ್ಣ ರೈ ಅವರು ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ ಎನ್ನುವ ಕೀರ್ತನೆಯನ್ನು ಹಾಡುವುದರ ಮೂಲಕ ಮಾತನಾಡಿದ ಅವರು ಭಕ್ತಿಯ ಒಳಗೆ ಕನಕದಾಸರು ವಿಭಿನ್ನ ಆಯಾಮಗಳನ್ನು ಕಂಡುಕೊಂಡಿದ್ದರು. ಹರಿದಾಸರು, ಕನಕದಾಸರು, ಪುರಂದರದಾಸರ ಕೀರ್ತನೆಗಳು ಪ್ರಸ್ತುತ ಸಮಾಜಕ್ಕೆ ತುಂಬ ಅವಶ್ಯಕವಾಗಿವೆ. ಅವರ ಚಿಂತನೆಗಳು ಈ ಸಂದರ್ಭದಲ್ಲಿ ನಾವು ಯಾವ ನೆಲೆಯಲ್ಲಿ, ಯಾವ ಆಯಾಮಗಳಲ್ಲಿ ನೋಡಬೇಕೆನ್ನುವುದು ಪ್ರಮುಖವಾಗುತ್ತದೆ. ಹಾಗೂ ಕನಕದಾಸರ ಕೀರ್ತನೆಗಳು ಯಾವ ಸಂಗೀತದ ಹಿನ್ನಲೆಯಿಂದ ನೋಡಬೇಕಾಗಿಲ್ಲ. ಸಾಮಾಜಿಕ ಹಿನ್ನಲೆಯಿಂದ ನೋಡಿದರೆ ಅವರ ಸಾಮಾಜಿಕ ಕಳಕಳಿ ಯಾವ ಮಟ್ಟದಲ್ಲಿದೆ ಎಂದು ಪ್ರಸ್ತುತವೆನಿಸುತ್ತದೆ ಎಂದು ನುಡಿದರು. ಈ ಕಾರ್ಯಕ್ರಮದಲ್ಲಿ ಹಾಲುಮತ ಅಧ್ಯಯನ ಪೀಠದ ಸಂಚಾಲಕರಾದ ಡಾ.ಎಫ್.ಟಿ.ಹಳ್ಳಿಕೇರಿ ಅವರು ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಗೀತ ವಿಭಾಗದ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಕನಕದಾಸರ ಕೀರ್ತನೆಗಳನ್ನು ಪ್ರಸ್ತುತಪಡಿಸಿದರು. ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ವಿವಿಧ ನಿಕಾಯಗಳ ಡೀನರು, ಪ್ರಾಧ್ಯಾಪಕರು, ಅಧಿಕಾರಿಗಳು ಮತ್ತು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಂಗೀತ ಮತ್ತು ನೃತ್ಯ ವಿಭಾಗದ ಅಧ್ಯಾಪಕರಾದ ಶ್ರೀಮತಿ ಜ್ಯೋತಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಸಂಶೋಧನಾ ವಿದ್ಯಾರ್ಥಿಯಾದ ಶ್ರೀ ಸಂಗಮೇಶ ಅವರು ಕಾರ್ಯಕ್ರಮವನ್ನು ವಂದಿಸಿದರು.

ಡಾ.ವಾಯ್.ಎಂ.ಯಾಕೊಳ್ಳಿ

ದಿ ಕರ್ನಾಟಕ ಹಿಸ್ಟರಿ ಕಾಂಗ್ರೆಸ್ ೨೯ನೇ ಮಹಾಸಮ್ಮೇಳನ ಕಾರ್ಯಕ್ರಮ- ೧೫.೦೨.೨೦೨೦

ಭಾಷೆಯ ಬಳಕೆಯಲ್ಲಿ ಮಹಿಳಾ ತಾರತಮ್ಯ ಎದ್ದು ಕಾಣುತ್ತದೆ : ಡಾ. ಹೆಚ್.ಎಸ್. ಅನುಪಮಾ, ಸ್ತ್ರೀವಾದಿ ಚಿಂತಕರು, ಕವಲಕ್ಕಿ

DSC_0262ಇವತ್ತಿನ ಭಾಷೆಯಲ್ಲಿರುವ ಬೈಗುಳಗಳನ್ನು ನಾವು ಗಮನಿಸಿದರೆ ಅದರಲ್ಲಿ ಲೈಂಗಿಕತೆಯನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಮಹಿಳೆಯರ ಘನತೆಗೆ ಚ್ಯುತಿ ಬರುವ ರೀತಿಯಲ್ಲಿ ಬೈಗುಳ ಭಾಷೆಯನ್ನು ಬಳಸುತ್ತಿದ್ದಾರೆ. ಮುಖ್ಯವಾಗಿ ಸದನ ಕಲಾಪಗಳಲ್ಲಿ ರಾಜಕಾರಣಿಗಳು ನಾವೇನು ಕೈಗಳಿಗೆ ಬಳೆ ತೊಟ್ಟುಕೊಂಡಿಲ್ಲ ಎಂದು ಲಿಂಗತಾರತಮ್ಯವನ್ನು ಮಾಡುತ್ತಿದ್ದಾರೆ ಎಂದು ಸ್ತ್ರೀವಾದಿ ಚಿಂತಕರಾದ ಡಾ. ಹೆಚ್.ಎಸ್. ಅನುಪಮಾ ಅವರು ಅಭಿಪ್ರಾಯಪಟ್ಟರು.
ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗ, ದಿ ಕರ್ನಾಟಕ ಹಿಸ್ಟರಿ ಕಾಂಗ್ರೆಸ್(ರಿ,) ಬೆಂಗಳೂರು, ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ, ಕರ್ನಾಟಕ ಸರ್ಕಾರ ಬೆಂಗಳೂರು ಹಾಗೂ ಪುರಾತತ್ವ, ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ, ಕರ್ನಾಟಕ ಸರ್ಕಾರ ಮೈಸೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ದಿ ಕರ್ನಾಟಕ ಹಿಸ್ಟರಿ ಕಾಂಗ್ರೆಸ್ ೨೯ನೇ ಮಹಾಸಮ್ಮೇಳನದ ೨ನೇ ದಿನದ ಗೋಷ್ಠಿಯ ದತ್ತಿನಿಧಿ ಉಪನ್ಯಾಸದಲ್ಲಿ ಸ್ತ್ರೀವಾದಿ ಚರಿತ್ರೆ ಮತ್ತು ನಾನು ಕಸ್ತೂರಿಬಾ ಎನ್ನುವ ವಿಷಯದ ಕುರಿತು ಉಪನ್ಯಾಸ ನೀಡಿದ ಅನುಪಮಾ ಅವರು ನಾವು ಗಾಂಧಿ-೧೫೦ ಎನ್ನುವ ವಿಷಯವನ್ನು ಮಾತ್ರ ನೆನಪಿನಲ್ಲಿಟ್ಟುಕೊಳ್ಳುತ್ತೇವೆ. ಆದರೆ ಗಾಂಧೀಜಿಯವರ ಹೋರಾಟದ ಬದುಕಿನ ಉದ್ದಕ್ಕೂ ಕಸ್ತೂರಿಬಾ ಅವರ ಸದಾ ಬೆಂಬಲ ಅಮೂಲ್ಯವಾದದ್ದು. ಗಾಂಧೀಜಿಯವರಿಗಿಂತ ಕಸ್ತೂರಿಬಾ ಅವರು ಆರು ತಿಂಗಳು ದೊಡ್ಡವರು. ಅವರಿಗೂ ಕೂಡ ೧೫೦ ವರ್ಷಗಳಾಗಿವೆ. ಇಂತಹ ಧೀಮಂತ ಮಹಿಳೆಯನ್ನು ನಾವು ಗಾಂಧೀಜಿ ಅವರ ಜೊತೆಯಲ್ಲಿ ನೆನಪಿಸಿಕೊಳ್ಳಬೇಕಾಗಿದೆ ಎಂದರು.
ಇತ್ತೀಚಿನ ಮಹಿಳಾ ಉಡುಪುಗಳನ್ನು ಗಮನಿಸಿದರೆ ಅವರ ಉಡುಪುಗಳಲ್ಲಿ ಕಿಸೆಗಳಿರುವುದಿಲ್ಲ(ಜೇಬು). ಗಂಡಸರ ಉಡುಪಿನಲ್ಲಿ ನೋಡಿದರೆ ಎಲ್ಲಿ ಬೇಕಾದರೂ ಕಿಸೆಗಳು ಎದ್ದು ಕಾಣುತ್ತವೆ. ಇಲ್ಲಿಯೂ ಕೂಡ ಅಧಿಕಾರದ ತಾರತಮ್ಯವನ್ನು ನಾವು ಗಮನಿಸಬಹುದಾಗಿದೆ. ಜಾತಿ ಮತ್ತು ಲಿಂಗ ಎನ್ನುವುದು ನಮ್ಮ ಕೈಬೆರಳಿನಲ್ಲಿರುವ ಉಗುರಿನ ರೀತಿ. ಇದನ್ನು ಯಾವ ಸಂದರ್ಭದಲ್ಲಾದರೂ ಕೂಡ ತೆಗೆದು ಹಾಕಬಹುದಾಗಿದೆ. ಯಾವುದೇ ವಸ್ತುವನ್ನು ಅದರ ಮೌಲ್ಯ ತಿಳಿಯಬೇಕಾದರೆ ಅದರ ಹಿಂದಿರುವ ರಕ್ತ, ಬೆವರು, ಕಣ್ಣೀರು ನೋಡಬೇಕಾಗಿದೆ. ಇದರಲ್ಲಿ ಸ್ತ್ರೀವಾದದ ಪರಿಕಲ್ಪನೆ ಕಾಣಬಹುದಾಗಿದೆ. ಸ್ತ್ರೀವಾದ ಎನ್ನುವುದು ಸಾಮಾಜಿಕ ನೆಲೆಯಲ್ಲಿ ನಂಬಿಕೆಯಿಟ್ಟುಕೊಂಡಿರುವುದು ಇದು ಯಾವುದೇ ಶ್ರೇಣೀಕರಣವನ್ನು ಒಪ್ಪುವುದಿಲ್ಲ. ಪ್ರಮುಖವಾಗಿ ಎಲ್ಲಾ ಮನುಷ್ಯರನ್ನು ಸ್ವಾತಂತ್ರ್ಯ, ಸಮಾನತೆ, ಸ್ವಾವಲಂಬನೆ ಪರಿಕಲ್ಪನೆಯ ನೆಲೆಯಲ್ಲಿ ನೋಡುತ್ತದೆ. ಇದೇ ರೀತಿಯಾಗಿ ಸಕಲ ಜೀವಿರಾಶಿಗಳನ್ನು ಬದುಕುವ ಸ್ವಾತಂತ್ರ್ಯದ ಹಕ್ಕನ್ನು ಸಮತಾವಾದದ ನೆಲೆಯಲ್ಲಿ ನಿರ್ವಚಿಸುತ್ತದೆ.
ಆದಿಮಾನವರ ಇತಿಹಾಸದಿಂದ ಹಿಡಿದು ಇಲ್ಲಿಯವರೆಗಿನ ಚರಿತ್ರೆಯ ಭಾಷೆಯಲ್ಲಿ ಚರಿತ್ರಾಕಾರರು ಬರೀ ಗಂಡಸರನ್ನು ಮಾತ್ರ ಪ್ರತಿಪಾದಿಸುತ್ತಾರೆ. ಮುಖ್ಯವಾಗಿ ಇಲ್ಲಿ ಹೆಣ್ಣು ಕಣ್ಮರೆಯಾಗಿದ್ದಾಳೆ ಇದು ವಿಷಾದನೀಯ ಸಂಗತಿ. ಕರ್ನಾಟಕದ ಚರಿತ್ರೆಯನ್ನು ನೋಡುವ ಸಂದರ್ಭದಲ್ಲಿ ಬರೀ ರಾಣಿ ಚೆನ್ನಮ್ಮ ಮಾತ್ರ ನೋಡುತ್ತೇವೆ. ಆದರೆ ಗೋಸೆ ಕೊಪ್ಪಲದ ರಾಣಿ ಚನ್ನವೀರ ದೇವಿ ಅವರು ಕರ್ನಾಟಕದ ಚರಿತ್ರೆಯ ಇತಿಹಾಸದಲ್ಲಿ ೪೬ ವರ್ಷಗಳ ಸುದೀರ್ಘ ಆಡಳಿತ ನಡೆಸಿದ್ದಾಳೆ. ಇಂತಹ ಅನೇಕ ಮಹಿಳೆಯರು ಕಣ್ಮರೆಯಾಗಿದ್ದಾರೆ. ಇಂತಹ ವಿಷಯಗಳನ್ನು ಚರಿತ್ರೆಕಾರರು ಬೆಳಕಿಗೆ ತರಬೇಕಾಗಿದೆ ಎಂದು ಹೇಳಿದರು.
ಈ ಉಪನ್ಯಾಸ ಕಾರ್ಯಕ್ರಮದಲ್ಲಿ ಶ್ರೀಮತಿ ಡಾ. ನಾಗರತ್ನಮ್ಮ ನಿಕಟಪೂರ್ವ ಸರ್ವಾಧ್ಯಕ್ಷರಾದ ಪ್ರೊ. ಎಸ್. ಷಡಕ್ಷರಯ್ಯ, ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ. ಈರಣ್ಣ ಪತ್ತಾರ, ಕನ್ನಡ ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಪ್ರೊ. ರಮೇಶ ನಾಯಕ ವಿವಿಧ ನಿಕಾಯಗಳ ಡೀನರು, ಮುಖ್ಯಸ್ಥರು, ಪ್ರಾಧ್ಯಾಪಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ರಾಜ್ಯದ ವಿವಿಧ ಭಾಗಗಳಿಂದ ಬಂದ ಸಂಶೋಧನಾರ್ಥಿಗಳು ಹಾಗೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ದಿ ಕರ್ನಾಟಕ ಹಿಸ್ಟರಿ ಕಾಂಗ್ರೆಸ್ ೨೯ನೇ ಮಹಾಸಮ್ಮೇಳನ ಕಾರ್ಯಕ್ರಮ-೧೫.೦೨.೨೦೨೦

ಭಾಷೆಯ ಬಳಕೆಯಲ್ಲಿ ಮಹಿಳಾ ತಾರತಮ್ಯ ಎದ್ದು ಕಾಣುತ್ತದೆ : ಡಾ. ಹೆಚ್.ಎಸ್. ಅನುಪಮಾ, ಸ್ತ್ರೀವಾದಿ ಚಿಂತಕರು, ಕವಲಕ್ಕಿ

ಇವತ್ತಿನ ಭಾಷೆಯಲ್ಲಿರುವ ಬೈಗುಳಗಳನ್ನು ನಾವು ಗಮನಿಸಿದರೆ ಅದರಲ್ಲಿ ಲೈಂಗಿಕತೆಯನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಮಹಿಳೆಯರ ಘನತೆಗೆ ಚ್ಯುತಿ ಬರುವ ರೀತಿಯಲ್ಲಿ ಬೈಗುಳ ಭಾಷೆಯನ್ನು ಬಳಸುತ್ತಿದ್ದಾರೆ. ಮುಖ್ಯವಾಗಿ ಸದನ ಕಲಾಪಗಳಲ್ಲಿ ರಾಜಕಾರಣಿಗಳು ನಾವೇನು ಕೈಗಳಿಗೆ ಬಳೆ ತೊಟ್ಟುಕೊಂಡಿಲ್ಲ ಎಂದು ಲಿಂಗತಾರತಮ್ಯವನ್ನು ಮಾಡುತ್ತಿದ್ದಾರೆ ಎಂದು ಸ್ತ್ರೀವಾದಿ ಚಿಂತಕರಾದ ಡಾ. ಹೆಚ್.ಎಸ್. ಅನುಪಮಾ ಅವರು ಅಭಿಪ್ರಾಯಪಟ್ಟರು.
ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗ, ದಿ ಕರ್ನಾಟಕ ಹಿಸ್ಟರಿ ಕಾಂಗ್ರೆಸ್(ರಿ,) ಬೆಂಗಳೂರು, ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ, ಕರ್ನಾಟಕ ಸರ್ಕಾರ ಬೆಂಗಳೂರು ಹಾಗೂ ಪುರಾತತ್ವ, ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ, ಕರ್ನಾಟಕ ಸರ್ಕಾರ ಮೈಸೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ದಿ ಕರ್ನಾಟಕ ಹಿಸ್ಟರಿ ಕಾಂಗ್ರೆಸ್ ೨೯ನೇ ಮಹಾಸಮ್ಮೇಳನದ ೨ನೇ ದಿನದ ಗೋಷ್ಠಿಯ ದತ್ತಿನಿಧಿ ಉಪನ್ಯಾಸದಲ್ಲಿ ಸ್ತ್ರೀವಾದಿ ಚರಿತ್ರೆ ಮತ್ತು ನಾನು ಕಸ್ತೂರಿಬಾ ಎನ್ನುವ ವಿಷಯದ ಕುರಿತು ಉಪನ್ಯಾಸ ನೀಡಿದ ಅನುಪಮಾ ಅವರು ನಾವು ಗಾಂಧಿ-೧೫೦ ಎನ್ನುವ ವಿಷಯವನ್ನು ಮಾತ್ರ ನೆನಪಿನಲ್ಲಿಟ್ಟುಕೊಳ್ಳುತ್ತೇವೆ. ಆದರೆ ಗಾಂಧೀಜಿಯವರ ಹೋರಾಟದ ಬದುಕಿನ ಉದ್ದಕ್ಕೂ ಕಸ್ತೂರಿಬಾ ಅವರ ಸದಾ ಬೆಂಬಲ ಅಮೂಲ್ಯವಾದದ್ದು. ಗಾಂಧೀಜಿಯವರಿಗಿಂತ ಕಸ್ತೂರಿಬಾ ಅವರು ಆರು ತಿಂಗಳು ದೊಡ್ಡವರು. ಅವರಿಗೂ ಕೂಡ ೧೫೦ ವರ್ಷಗಳಾಗಿವೆ. ಇಂತಹ ಧೀಮಂತ ಮಹಿಳೆಯನ್ನು ನಾವು ಗಾಂಧೀಜಿ ಅವರ ಜೊತೆಯಲ್ಲಿ ನೆನಪಿಸಿಕೊಳ್ಳಬೇಕಾಗಿದೆ ಎಂದರು.
ಇತ್ತೀಚಿನ ಮಹಿಳಾ ಉಡುಪುಗಳನ್ನು ಗಮನಿಸಿದರೆ ಅವರ ಉಡುಪುಗಳಲ್ಲಿ ಕಿಸೆಗಳಿರುವುದಿಲ್ಲ(ಜೇಬು). ಗಂಡಸರ ಉಡುಪಿನಲ್ಲಿ ನೋಡಿದರೆ ಎಲ್ಲಿ ಬೇಕಾದರೂ ಕಿಸೆಗಳು ಎದ್ದು ಕಾಣುತ್ತವೆ. ಇಲ್ಲಿಯೂ ಕೂಡ ಅಧಿಕಾರದ ತಾರತಮ್ಯವನ್ನು ನಾವು ಗಮನಿಸಬಹುದಾಗಿದೆ. ಜಾತಿ ಮತ್ತು ಲಿಂಗ ಎನ್ನುವುದು ನಮ್ಮ ಕೈಬೆರಳಿನಲ್ಲಿರುವ ಉಗುರಿನ ರೀತಿ. ಇದನ್ನು ಯಾವ ಸಂದರ್ಭದಲ್ಲಾದರೂ ಕೂಡ ತೆಗೆದು ಹಾಕಬಹುದಾಗಿದೆ. ಯಾವುದೇ ವಸ್ತುವನ್ನು ಅದರ ಮೌಲ್ಯ ತಿಳಿಯಬೇಕಾದರೆ ಅದರ ಹಿಂದಿರುವ ರಕ್ತ, ಬೆವರು, ಕಣ್ಣೀರು ನೋಡಬೇಕಾಗಿದೆ. ಇದರಲ್ಲಿ ಸ್ತ್ರೀವಾದದ ಪರಿಕಲ್ಪನೆ ಕಾಣಬಹುದಾಗಿದೆ. ಸ್ತ್ರೀವಾದ ಎನ್ನುವುದು ಸಾಮಾಜಿಕ ನೆಲೆಯಲ್ಲಿ ನಂಬಿಕೆಯಿಟ್ಟುಕೊಂಡಿರುವುದು ಇದು ಯಾವುದೇ ಶ್ರೇಣೀಕರಣವನ್ನು ಒಪ್ಪುವುದಿಲ್ಲ. ಪ್ರಮುಖವಾಗಿ ಎಲ್ಲಾ ಮನುಷ್ಯರನ್ನು ಸ್ವಾತಂತ್ರ್ಯ, ಸಮಾನತೆ, ಸ್ವಾವಲಂಬನೆ ಪರಿಕಲ್ಪನೆಯ ನೆಲೆಯಲ್ಲಿ ನೋಡುತ್ತದೆ. ಇದೇ ರೀತಿಯಾಗಿ ಸಕಲ ಜೀವಿರಾಶಿಗಳನ್ನು ಬದುಕುವ ಸ್ವಾತಂತ್ರ್ಯದ ಹಕ್ಕನ್ನು ಸಮತಾವಾದದ ನೆಲೆಯಲ್ಲಿ ನಿರ್ವಚಿಸುತ್ತದೆ.
ಆದಿಮಾನವರ ಇತಿಹಾಸದಿಂದ ಹಿಡಿದು ಇಲ್ಲಿಯವರೆಗಿನ ಚರಿತ್ರೆಯ ಭಾಷೆಯಲ್ಲಿ ಚರಿತ್ರಾಕಾರರು ಬರೀ ಗಂಡಸರನ್ನು ಮಾತ್ರ ಪ್ರತಿಪಾದಿಸುತ್ತಾರೆ. ಮುಖ್ಯವಾಗಿ ಇಲ್ಲಿ ಹೆಣ್ಣು ಕಣ್ಮರೆಯಾಗಿದ್ದಾಳೆ ಇದು ವಿಷಾದನೀಯ ಸಂಗತಿ. ಕರ್ನಾಟಕದ ಚರಿತ್ರೆಯನ್ನು ನೋಡುವ ಸಂದರ್ಭದಲ್ಲಿ ಬರೀ ರಾಣಿ ಚೆನ್ನಮ್ಮ ಮಾತ್ರ ನೋಡುತ್ತೇವೆ. ಆದರೆ ಗೋಸೆ ಕೊಪ್ಪಲದ ರಾಣಿ ಚನ್ನವೀರ ದೇವಿ ಅವರು ಕರ್ನಾಟಕದ ಚರಿತ್ರೆಯ ಇತಿಹಾಸದಲ್ಲಿ ೪೬ ವರ್ಷಗಳ ಸುದೀರ್ಘ ಆಡಳಿತ ನಡೆಸಿದ್ದಾಳೆ. ಇಂತಹ ಅನೇಕ ಮಹಿಳೆಯರು ಕಣ್ಮರೆಯಾಗಿದ್ದಾರೆ. ಇಂತಹ ವಿಷಯಗಳನ್ನು ಚರಿತ್ರೆಕಾರರು ಬೆಳಕಿಗೆ ತರಬೇಕಾಗಿದೆ ಎಂದು ಹೇಳಿದರು.
ಈ ಉಪನ್ಯಾಸ ಕಾರ್ಯಕ್ರಮದಲ್ಲಿ ಶ್ರೀಮತಿ ಡಾ. ನಾಗರತ್ನಮ್ಮ ನಿಕಟಪೂರ್ವ ಸರ್ವಾಧ್ಯಕ್ಷರಾದ ಪ್ರೊ. ಎಸ್. ಷಡಕ್ಷರಯ್ಯ, ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ. ಈರಣ್ಣ ಪತ್ತಾರ, ಕನ್ನಡ ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಪ್ರೊ. ರಮೇಶ ನಾಯಕ ವಿವಿಧ ನಿಕಾಯಗಳ ಡೀನರು, ಮುಖ್ಯಸ್ಥರು, ಪ್ರಾಧ್ಯಾಪಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ರಾಜ್ಯದ ವಿವಿಧ ಭಾಗಗಳಿಂದ ಬಂದ ಸಂಶೋಧನಾರ್ಥಿಗಳು ಹಾಗೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಹಂಪಿ ಮದ್ರಾಸ್ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಕನ್ನಡ ಕೆಲಸಗಳು ಕಾರ್ಯಕ್ರಮ ೦೭.೧೨.೨೦೧೯

ಹೊರ ರಾಜ್ಯದವರ ಬದಲು ನೆರೆ ರಾಜ್ಯದವರು ಅಂದರೆ ಹೃದಯಕ್ಕೆ ಹತ್ತಿರ : ಡಾ.ಸ.ಚಿ.ರಮೇಶ, ಮಾನ್ಯ ಕುಲಪತಿಯವರು

0712ಹೊರ ರಾಜ್ಯದವರು ಎಂದರೆ ದೂರವಾಗುತ್ತಾರೆ. ನೆರೆ ರಾಜ್ಯದವರೆಂದರೆ ಹೃದಯಕ್ಕೆ ಹತ್ತಿರವಾಗುತ್ತಾರೆಂದು ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಸ.ಚಿ.ರಮೇಶ ಅವರು ಹೇಳಿದರು. ಕನ್ನಡ ಭಾಷೆಯ ಮೇಲಿನ ಕಾಳಜಿ ಮತ್ತು ಪ್ರೀತಿಗೋಸ್ಕರ ಕನ್ನಡ ಕೆಲಸದಲ್ಲಿ ತೊಡಗಿಕೊಂಡಿರುವ ನೆರೆಯ ರಾಜ್ಯಗಳಿಗೆ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಸುಮಾರು ೭ ಲಕ್ಷ ಮೌಲ್ಯದ ಪುಸ್ತಕಗಳನ್ನು ನೆರೆಯ ರಾಜ್ಯಗಳಲ್ಲಿರುವ ವಿಶ್ವವಿದ್ಯಾಲಯಗಳ ಕನ್ನಡ ವಿಭಾಗಗಳಿಗೆ ನೀಡಲಾಗಿದೆ. ಕನ್ನಡ ವಿಶ್ವವಿದ್ಯಾಲಯದಲ್ಲಿ ಮುಂದಿನ ದಿನಗಳಲ್ಲಿ ಈ ನೆರೆ ರಾಜ್ಯಗಳ ವಿಶ್ವವಿದ್ಯಾಲಯಗಳ ಎಲ್ಲ ಕನ್ನಡ ವಿಭಾಗಗಳ ಮುಖ್ಯಸ್ಥರ ಸಭೆಯನ್ನು ಕರೆಯಲಾಗುವುದು. ಆ ಮೂಲಕ ವಿಭಾಗಗಳ ಸಂಬಂಧವನ್ನು ಬೆಳೆಸುವ ಕಾರ್ಯ ಮಾಡುತ್ತದೆ. ಹೊರರಾಜ್ಯದ ವಿಶ್ವವಿದ್ಯಾಲಯಗಳ ಕನ್ನಡ ವಿಭಾಗಗಳಲ್ಲಿ ನಮ್ಮ ಕನ್ನಡಿಗರೇ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಕುಲಪತಿಗಳಾದ ಡಾ. ಸ.ಚಿ.ರಮೇಶ ಅವರು ತಿಳಿಸಿದರು.
ಮದ್ರಾಸ್ ವಿಶ್ವವಿದ್ಯಾಲಯ ವಿದ್ವತ್ ಪರಂಪರೆಯಾಗಿದ್ದು, ತಮಿಳು ಭಾಷಿಕರು ಕನ್ನಡ ಕಲಿತು ಕನ್ನಡ ಭಾಷೆಯನ್ನು ಬೋಧಿಸಲು ಕರ್ನಾಟಕದ ಹಲವು ವಿಶ್ವವಿದ್ಯಾಲಯಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಪ್ರಥಮವಾಗಿ ಕನ್ನಡ ಎಂ.ಎ. ಪದವಿ ಪಡೆದ ವಿದ್ಯಾರ್ಥಿಯಾಗಿದ್ದವರು ಕನ್ನಡದ ಖ್ಯಾತ ಸಂಶೋಧಕ, ಭಾಷಾವಿಜ್ಞಾನಿ, ಶಾಸನತಜ್ಞ ಹಾಗೂ ಗ್ರಂಥಸಂಪಾದಕರಾದ ಶ್ರೀ ಆರ್. ನರಸಿಂಹಾಚಾರ್ ಎಂದು ಮದ್ರಾಸ್ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ತಮಿಳ್ ಸೆಲ್ವಿ ತಮ್ಮ ವಿಶೇಷ ಉಪನ್ಯಾಸದಲ್ಲಿ ಹೇಳಿದರು. ಕನ್ನಡ ಹಸ್ತಪ್ರತಿ ವಿಭಾಗದ ಮುಖ್ಯಸ್ಥರಾದ ಡಾ.ವೀರೇಶ ಬಡಿಗೇರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾನ್ಯ ಕುಲಪತಿಗಳಾದ ಡಾ.ಸ.ಚಿ.ರಮೇಶ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕುಲಸಚಿವರಾದ ಡಾ. ಎ. ಸುಬ್ಬಣ್ಣ ರೈ ಅವರು ಉಪಸ್ಥಿತರಿದ್ದರು. ಹಸ್ತಪ್ರತಿಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ.ಎಸ್.ಎಸ್.ಅಂಗಡಿ ಅವರು ಸ್ವಾಗತಿಸಿದರು. ಪ್ರಾಧ್ಯಾಪಕರಾದ ಡಾ.ಎಸ್.ಆರ್.ಚನ್ನವೀರಪ್ಪ, ವಂದನಾರ್ಪಣೆಯನ್ನು ನೆರವೇರಿಸಿದರು. ವಿವಿಧ ನಿಕಾಯಗಳ ಡೀನರು, ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕನ್ನಡ ವಿಶ್ವವಿದ್ಯಾಲಯ, ಹಂಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ೬೩ನೇ ಮಹಾಪರಿ ನಿರ್ವಾಣ ಕಾರ್ಯಕ್ರಮದ ಪತ್ರಿಕಾ ವರದಿ-೦೬.೧೨.೨೦೧೯

ambedkarಶಿಕ್ಷಣದ ಮೂಲಕ ಉತ್ತಮ ಗುಣಮಟ್ಟದ ಜೀವನ ನಡೆಸುವುದು ಸಾಧ್ಯ ಎಂಬುದನ್ನು ತೋರಿಸಿಕೊಟ್ಟ ಧೀಮಂತ ವ್ಯಕ್ತಿ ಡಾ.ಬಿ.ಆರ್.ಅಂಬೇಡ್ಕರ್ : ಡಾ.ಸ.ಚಿ.ರಮೇಶ, ಮಾನ್ಯ ಕುಲಪತಿಯವರು

ತಳಸಮುದಾಯಗಳ ಜನರು ಕೂಡ ಶಿಕ್ಷಣದ ಮೂಲಕ ಉತ್ತಮ ಗುಣಮಟ್ಟದ ಜೀವನ ನಡೆಸುವುದು ಸಾಧ್ಯ ಎಂಬುದನ್ನು ತಮ್ಮ ಮೂಲಕವೇ ಜಗತ್ತಿಗೆ ತೋರಿಸಿಕೊಟ್ಟ ಧೀಮಂತ ವ್ಯಕ್ತಿ ಡಾ. ಬಿ.ಆರ್. ಅಂಬೇಡ್ಕರ್ ಎಂದು ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ. ಸ.ಚಿ. ರಮೇಶ ಅವರು ಅಭಿಪ್ರಾಯಪಟ್ಟರು.
ಕನ್ನಡ ವಿಶ್ವವಿದ್ಯಾಲಯದ ಭುವನವಿಜಯದಲ್ಲಿ ಆಯೋಜಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ ೬೩ನೇ ಮಹಾಪರಿನಿರ್ವಾಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಿಂದುಳಿದ, ಶೋಷಿತ, ದಲಿತ ವರ್ಗದ ಜನರಿಗೂ ಶಿಕ್ಷಣ, ಸ್ವಾತಂತ್ರ್ಯ ಮತ್ತು ಸಹೋದರತ್ವದ ಅವಕಾಶಗಳನ್ನು ಒದಗಿಸಿದರೆ ಅವರು ಕೂಡ ದೇಶದ ಮುಖ್ಯವಾಹಿನಿಯಲ್ಲಿ ಬೆರೆತು ದೇಶಕ್ಕೆ, ಸಮಾಜಕ್ಕೆ ಉನ್ನತ ಕೊಡುಗೆ ನೀಡುವುದರಲ್ಲಿ ಎರಡು ಮಾತಿಲ್ಲ. ಇಂತಹವರ ಉದ್ಧಾರಕ್ಕಾಗಿ ಅಂಬೇಡ್ಕರ್ ಅವರು ಹಗಲಿರಳು ಶ್ರಮಿಸಿದರು. ದೇಶದ ಪರಿಪೂರ್ಣ ಸಂವಿಧಾನ ರಚನೆ ಹಿಂದೆ ಅಂಬೇಡ್ಕರ್ ಅವರ ಪ್ರಾಮಾಣಿಕ ಪ್ರಯತ್ನವಿದೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ವೆಂಕಟಗಿರಿ ದಳವಾಯಿ ಅವರು ವಿಶೇಷ ಉಪನ್ಯಾಸ ನೀಡುತ್ತ ಡಾ. ಬಿ.ಆರ್. ಅಂಬೇಡ್ಕರ್ ಅವರು ದಲಿತ ಸೂರ್ಯ, ಮೂಕನಾಯಕರಷ್ಟೇ ಅಲ್ಲದೇ ದೇಶದ ಬಹುದೊಡ್ಡ ನಾಯಕರಾಗಿದ್ದರು. ಅವರ ಚಿಂತನೆ, ಆಲೋಚನೆಗಳು ಕೇವಲ ದಲಿತರ ಉದ್ಧಾರಕ್ಕಾಗಿರಲಿಲ್ಲ, ದೇಶದ ಅಭಿವೃದ್ಧಿಗೆ ಸಂಬಂಧಿಸಿದ್ದವು. ಅಂಬೇಡ್ಕರ್ ಅವರು ಕೊನೆಯುಸಿರುವವರೆಗೂ ದೇಶಕ್ಕಾಗಿ ಶ್ರಮಿಸಿದರು. ನಾವು ಇಂದು ಪಡೆದಿರುವ ಮತದಾನದ ಹಕ್ಕು, ಮಹಿಳೆಯರಿಗೆ ಆಸ್ತಿಯ ಹಕ್ಕು, ೮ ತಾಸುಗಳ ದುಡಿಮೆಯ ಅವಧಿ ಹೀಗೆ ಹಲವಾರು ಸೌಲಭ್ಯಗಳು ಅಂಬೇಡ್ಕರ್ ನೀಡಿದ ಕೊಡುಗೆಯಾಗಿವೆ. ಅಂಬೇಡ್ಕರ್ ಅವರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದರು. ಉನ್ನತ ಶಿಕ್ಷಣ ಪಡೆದವರು ಹುಲಿಯ ಹಾಲು ಕುಡಿದಂತೆ ಎಂದು ಹೇಳುತ್ತಿದ್ದರು. ಅಂಬೇಡ್ಕರ್ ಅವರ ವಿಚಾರ ಮತ್ತು ತರ್ಕಗಳು ಅನ್ಯಾಯವನ್ನು ಪ್ರತಿಭಟಸುತ್ತಿದ್ದವು. ಅವರ ಇಂತಹ ಜೀವನಾದರ್ಶಗಳನ್ನು ಇಂದಿನ ಯುವಜನತೆ ಅಳವಡಿಸಿಕೊಳ್ಳಬೇಕು. ಹಲವು ಧರ್ಮ, ಜಾತಿ, ಭಾಷೆ, ಸಂಸ್ಕೃತಿಗಳ ದೇಶದಲ್ಲಿ ಸಂವಿಧಾನವು ಒಂದು ಉತ್ತಮ ಮಾನದಂಡವಾಗಿದೆ. ಇಂತಹ ಸಂವಿಧಾನವನ್ನು ಯುವಪೀಳಿಗೆ ತಿಳಿದುಕೊಳ್ಳಬೇಕು ಎಂದರು.
ಕಾರ್ಯಕ್ರಮ ಸಂಚಾಲಕರಾದ ಮತ್ತು ಉಪಕುಲಸಚಿವರಾದ ಡಾ. ಎ. ವೆಂಕಟೇಶ ಅವರು ಸ್ವಾಗತಿಸಿ, ನಿರೂಪಿಸಿದರು. ಕುಲಸಚಿವರಾದ ಡಾ. ಎ. ಸುಬ್ಬಣ್ಣ ರೈ ವಂದನಾರ್ಪಣೆ ಮಾಡಿದರು. ಸಂಗೀತ ವಿಭಾಗದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಬುದ್ಧನ ಗೀತೆಯನ್ನು ಪ್ರಸ್ತುತಪಡಿಸಿದರು. ಈ ಸಂದರ್ಭದಲ್ಲಿ ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಪಾಧ್ಯಾಪಕರು, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 

ಕನಕದಾಸ ಜಯಂತಿ ಕಾರ್ಯಕ್ರಮ ೧೫.೧೧.೨೦೧೯

ಕನಕದಾಸರ ಚಿಂತನೆ ಮತ್ತು ಬದುಕು ಒಂದೆ : ಡಾ.ಸ.ಚಿ.ರಮೇಶ, ಮಾನ್ಯ ಕುಲಪತಿಯವರು

21 (1)ಜಯಂತಿಗಳು ಅರ್ಥಪೂರ್ಣವಾಗಬೇಕಾದರೆ ಇಂಥಹ ಮಹನಿಯರ ವಿಚಾರಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡರೆ ಇಂತಹ ಆಚರಣೆಗಳಿಗೆ ಅರ್ಥಬರುತ್ತದೆ ಎಂದು ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ.ಸ.ಚಿ.ರಮೇಶ ಅವರು ಅಭಿಪ್ರಾಯಪಟ್ಟರು.
ಹಾಲುಮತ ಅಧ್ಯಯನ ಪೀಠದ ವತಿಯಿಂದ ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ಕನಕದಾಸ ಜಯಂತಿ ಕಾರ್ಯಕ್ರಮದ ಪ್ರಯುಕ್ತ ಹಮ್ಮಿಕೊಂಡಿದ್ದ ಕನಕದಾಸರ ಕೀರ್ತನೆಗಳು ಮತ್ತು ಸಮಕಾಲೀನತೆ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಕನಕದಾಸ ವರ್ಣ, ಜಾತಿ, ಭೇದ ಮೀರಿರುವ ಮಹಾನ್ ಚಿಂತಕ. ಕನಕದಾಸರ ಬದುಕು ಮತ್ತು ಚಿಂತನೆ ಎರಡು ಬೇರೆ ಆಗಿರಲಿಲ್ಲ. ಅವರು ಚಿಂತಿಸಿದಂತೆ ಬದುಕಿದರು. ಕನಕದಾಸರು ಸಾಹಿತಿ, ತತ್ವಜ್ಞಾನಿ, ದಾರ್ಶನಿಕರು ಮಾತ್ರವಾಗದೆ ಅವರೊಬ್ಬ ವಿಜ್ಞಾನಿಯೂ ಆಗಿದ್ದರು. ರಾಮಧಾನ್ಯ ಚರಿತೆಯಲ್ಲಿ ಬರುವ ಆಹಾರ ಸಂಸ್ಕೃತಿಯ ವಿಚಾರದಲ್ಲಿ ಅವರ ವೈಜ್ಞಾನಿಕತೆಯನ್ನು ಗುರುತಿಸಬಹುದು. ಆಹಾರವೇ ಹೇಗೆ ಔಷಧಿಯಾಗಿ ಕೆಲಸ ಮಾಡುತ್ತದೆ ಎಂಬುದನ್ನು ಆ ಕಾಲದಲ್ಲಿಯೇ ತಿಳಿಸಿದ್ದರು. ಆಹಾರ ಅದೊಂದು ಪರಿಸರಕ್ಕೆ ಸಂಬಂಧಪಟ್ಟ ಪ್ರಾಕೃತಿಕವಾದದ್ದು. ಕಾಲಚಕ್ರ ಇವತ್ತು ರಾಗಿಯನ್ನು ನಾವು ಹುಡುಕಿಕೊಂಡು ತಿನ್ನುವ ಸಮಯ ಬಂದಿದೆ. ಕಾಲ ಎಲ್ಲವನ್ನು ನಿರ್ಣಯಿಸುತ್ತದೆ ಎಂದು ಹೇಳಿದರು. ಮುಂದುವರೆದು ಮಾನ್ಯ ಕುಲಪತಿಯವರು ಮಾತನಾಡುತ್ತಾ ಸಾಹಿತ್ಯ ವಿಮರ್ಶಕರು ಮತ್ತು ಸಂಸ್ಕೃತಿ ಚಿಂತಕರು ಕನಕನನ್ನು ಸ್ಥಳೀಯ ಸಾಹಿತ್ಯ ಮತ್ತು ಸ್ಥಳೀಯ ಸಂಸ್ಕೃತಿಯ ಪ್ರತಿನಿಧಿ ಎಂಬಂತೆ ವಿವರಿಸಿದರು. ಸಂಗೀತದ ತಿಳುವಳಿಕೆಯವರು ಕನಕನನ್ನು ಸಂಗೀತಗಾರ ಎಂದರು. ಭಕ್ತಿ ಸಾಹಿತ್ಯದ ಚಿಂತಕರು ಕನಕನನ್ನು ಸಂತನೆಂದು ಪರಿಗಣಿಸಿದರು. ಭಾಷಾಶಾಸ್ತ್ರಜ್ಞರು ಕನಕನ ಭಾಷಾ ಕೌಶಲ್ಯವನ್ನು ದಲಿತ ಬಂಡಾಯದ ಸಾಹಿತ್ಯ ಚಿಂತಕರು ಕನಕನನ್ನು ಕೆಳಜಾತಿ, ಕೆಳವರ್ಗಗಳ ಸಾಂಸ್ಕೃತಿಕ ಪ್ರತಿನಿಧಿ ಎಂದು ವಿವರಿಸಿದರು. ಯಜಮಾನ ಸಂಸ್ಕೃತಿಯ ವಿರೋಧವನ್ನು ಇವರು ಕನಕನ ಮೂಲಕ ಕಟ್ಟಿಕೊಂಡರು. ಜನ ಸಂಸ್ಕೃತಿಯ ನೇತಾರ ಎಂದು ತಿಳಿದರು. ಹೋರಾಟಗಾರರು ಕನಕನನ್ನು ಜಾತಿ ಮತ್ತು ವರ್ಗ ಹೋರಾಟದ ನಾಯಕನಂತೆ ವಿವರಿಸಿದರು. ಬಹುಶಃ ನಮ್ಮ ಕವಿಗಳ ದೊಡ್ಡ ಪರಂಪರೆಯಲ್ಲಿ ಬಸವಣ್ಣನ ನಂತರ ನಮ್ಮ ನಾಡನ್ನು ಹಲವು ಮುಖಗಳಲ್ಲಿ ಕನಕದಾಸ ಬಹಳ ದಟ್ಟವಾಗಿ ಆವರಿಸಿದ್ದಾನೆ. ಕನಕದಾಸರು ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಡಿದ್ದಾರೆ, ಇಂದಿಗೆ ಸುಮಾರು ೬೦ ವರ್ಷಗಳ ಹಿಂದೆಯೇ ಕನ್ನಡ ಸಿನಿಮ ರಂಗ ಕನಕನನ್ನು ಚಿತ್ರ ರಂಗದಲ್ಲಿ ಅನಾವರಣ ಮಾಡಿದೆ ಎಂಬುದು ಕನ್ನಡ ಚಿತ್ರ ರಂಗದ ಹೆಚ್ಚುಗಾರಿಕೆ ಎಂದು ನಾನು ಭಾವಿಸಿದ್ದೇನೆ. ಕನಕದಾಸನ ಕೆಲವು ಕೃತಿಗಳು ಸಂಸ್ಕೃತ, ಹಿಂದಿ, ತೆಲುಗು ಮತ್ತು ಇಂಗ್ಲೀಷ್ ಭಾಷೆಗೆ ಅನುವಾದ ಆಗಿವೆ. ಕನಕದಾಸರು ಕಷ್ಟಗಳನ್ನು ಅಪಮಾನಗಳನ್ನು ಅನುಭವಿಸಿದ್ದರು. ಕನಕನ ಹೊಟ್ಟೆಯೊಳಗೆ ಹಸಿವಿತ್ತು, ಅವನ ಹೃದಯದೊಳಗೆ ಕನಿಕರವಿತ್ತು, ಕನಕದಾಸ ಕನ್ನಡ ಅರಿವಿನ ಹರಿಕಾರ ಎಂದು ಮಾನ್ಯ ಕುಲಪತಿಯವರು ತಿಳಿಸಿದರು.
ಕನಕದಾಸರು ಕನ್ನಡ ಅರಿವಿನ ಹರಿಕಾರನಾಗಿ ಕಾರ್ಯನಿರ್ವಹಿಸಿದರು. ಬಸವಣ್ಣನವರು ಮತ್ತು ಕನಕದಾಸರು ಸಮಾನವಾದ ಮನಸ್ಥಿತಿಯವರು. ಇವರು ತಮ್ಮ ಅನುಭವದಿಂದ ಸಾಹಿತ್ಯ ರಚನೆ ಮಾಡಿದ್ದಾರೆ. ಈ ವಿದ್ವಾಂಸರ ಚಿಂತನೆ ಮತ್ತು ಬದುಕು ಒಂದೇ ಆಗಿತ್ತು. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಕನಕದಾಸ, ಬಸವಣ್ಣ, ಅಂಬೇಡ್ಕರ್‌ರು ಮಾರ್ಗದರ್ಶಕರಾಗಿರಬೇಕೆಂದು ತಿಳಿಸಿದರು.
ಸಿಂದಗಿಯ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ.ಚನ್ನಪ್ಪಕಟ್ಟಿ ಅವರು ಕನಕದಾಸರ ಕೀರ್ತನೆಗಳು ಮತ್ತು ಸಮಕಾಲೀನತೆ ಎಂಬ ವಿಶೇಷ ಉಪನ್ಯಾಸವನ್ನು ಉದ್ದೇಶಿಸಿ ಮಾತನಾಡುತ್ತ ಕನಕದಾಸರ ಸಾಹಿತ್ಯವನ್ನು ಎರಡು ರೀತಿಯಲ್ಲಿ ಓದಲು ಸಾಧ್ಯ. ಮೊದಲನೆಯದು ಯಾವುದೇ ಪೂರ್ವ ನಿರ್ಧರಿತ ನಿರೀಕ್ಷೆಗಳನ್ನು ಇಟ್ಟುಕೊಳ್ಳದೇ ಓದುವುದು. ಎರಡನೆಯದು ನಿರೀಕ್ಷೆಯನ್ನು ಇಟ್ಟುಕೊಂಡು ಕನಕರ ಕೀರ್ತನೆಗಳನ್ನು ಓದುವುದು. ದಾಸ ಪರಂಪರೆಯಲ್ಲಿ ೨೫೦ ದಾಸರು ಸಿಗುತ್ತಾರೆ. ಅದರಲ್ಲಿ ಕನಕದಾಸರು ಮತ್ತು ಹೆಳವನಕಟ್ಟಿ ಗಿರಿಯಮ್ಮ ವಿಶಿಷ್ಟವಾಗಿ ನಿಲ್ಲುತ್ತಾರೆ. ಕನಕದಾಸರು ದಾಸ ಪರಂಪರೆಯಲ್ಲಿದ್ದುಕೊಂಡೇ ಹೊರಗುಳಿದ ವ್ಯಕ್ತಿ. ಅವರು ಆತ್ಮೋದ್ಧಾರದ ಜೊತೆಗೆ ಜಗತ್ತಿನ ಉದ್ಧಾರಕ್ಕಾಗಿಯೂ ಶ್ರಮಿಸಿದವರು. ಲಿಂಗಾಧಾರಿತ ಶ್ರೇಷ್ಠತೆಯ ವ್ಯಸನವನ್ನು ತಮ್ಮ ಕೀರ್ತನೆಗಳಲ್ಲಿ ಖಂಡಿಸಿದ್ದಾರೆ. ಇಡೀ ವಿಶ್ವದಲ್ಲಿ ಒಬ್ಬರು ಇನ್ನೊಬ್ಬರಿಗೆ ಪೂರಕವಾಗಿ ಬದುಕುವ ಕ್ರಮ ಇದೆ. ಇಲ್ಲಿ ಯಾರೂ ಅನಾಥರಲ್ಲ. ಪರಸ್ಪರ ಸಂಬಂಧ ಇರುವುದನ್ನು ಅವರ ಕೀರ್ತನೆಗಳಲ್ಲಿ ಕಾಣಬಹುದು. ಇಂದು ಇಡೀ ವ್ಯವಸ್ಥೆಯೇ ಗಳಿಕೆಯ ಹಿಂದೆ ಬಿದ್ದಿದ್ದು, ಗಳಿಸುವ ವ್ಯಾಮೋಹ ತುಂಬಾ ಇದೆ. ಬಂದದ್ದನ್ನು ಹಂಚಿಕೊಂಡು ಬದುಕುವ ಪರಿಯನ್ನು ಕನಕದಾಸರು ತಮಗೆ ದೊರೆತ ನಿಧಿಯನ್ನು ಹಂಚುವ ಮೂಲಕ ಸಾಮಾಜಿಕ ಕಳಕಳಿಯನ್ನು ತೋರಿಸಿದರು ಎಂದು ಹೇಳಿದರು.
ಭಕ್ತಿ ಎಲ್ಲಿಯವರೆಗೆ ಇರುತ್ತೋ ಅಲ್ಲಿಯವರೆಗೆ ಕನಕದಾಸರ ಕೀರ್ತನೆಗಳು ಜೀವಂತವಾಗಿರುತ್ತವೆ ಹಾಗೂ ಪ್ರಸ್ತುತವಾಗಿರುತ್ತವೆ. ಭಕ್ತಿಯುಗಕ್ಕೆ ದಾಸ ಸಾಹಿತ್ಯದ ಕೊಡುಗೆ ಅಪಾರವಾದುದು. ದಾಸ ಸಾಹಿತ್ಯದಲ್ಲಿನ ಸಾರ್ವತ್ರಿಕತೆ ಮತ್ತು ಸಕಾಲಿಕತೆ ಎನ್ನುವುದು ಅವರವರ ಭಾವಕ್ಕೆ ಬಿಟ್ಟದ್ದು. ದಾಸ್ಯಭಾವ, ಸಖ್ಯಭಾವ, ವಾತ್ಸಲ್ಯಭಾವ, ಮಧುರಭಾವ, ಧನ್ಯತಾಭಾವ ಈ ರೀತಿಯ ಪಂಚ ವಿಧದ ಭಕ್ತಿಯ ಮೂಲಕ ಕನಕದಾಸರ ಕೀರ್ತನೆಗಳು ಪ್ರಸ್ತುತವಾಗಿವೆ ಎಂದು ಕನ್ನಡ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ಎ.ಸುಬ್ಬಣ್ಣ ರೈ ಅವರು ಅಭಿಪ್ರಾಯಪಟ್ಟರು. ಈ ಕಾರ್ಯಕ್ರಮವನ್ನು ಹಾಲುಮತ ಅಧ್ಯಯನ ಪೀಠದ ಸಂಚಾಲಕರಾದ ಡಾ.ಎಫ್.ಟಿ.ಹಳ್ಳಿಕೇರಿ ಅವರು ಸ್ವಾಗಿತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಗೀತ ವಿಭಾಗದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಪ್ರಾರ್ಥಿಸಿದರು. ಸಂಶೋಧನಾ ವಿದ್ಯಾರ್ಥಿ ಸಾಗರ ಜಿ.ಸಿ. ವಂದನಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿ ಹೊಸಪೇಟೆ ಮತ್ತು ಕಮಲಾಪುರದ ನಾಗರಿಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.