ರಾಜ್ಯಮಟ್ಟದ ರಾಷ್ಟ್ರೀಯ ಸೇವಾ ಯೋಜನೆ  ಶಿಬಿರ : ೨೧-೨೭ ಡಿಸೆಂಬರ್ ೨೦೧೭ ಉದ್ಘಾಟನೆ 

ಸಂಕುಚಿತ ದೃಷ್ಟಿಕೋನ ಕಳೆದುಕೊಂಡು ಬಹುತ್ವವನ್ನು ತುಂಬಿಕೊಳ್ಳುವ ವೇದಿಕೆ ಇದಾಗಿದೆ. ಭೌತಿಕ ಸೌಲಭ್ಯಗಳೊಂದಿಗೆ ಬೌದ್ಧಿಕ ಆಹಾರವನ್ನು ಕೊಡುವ ಕಾಳಜಿ ಕನ್ನಡ ವಿಶ್ವವಿದ್ಯಾಲಯ ತೋರಿದೆ ಎಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಕುಲಪತಿಗಳಾದ ಪ್ರೊ. ಸಬೀಹಾ ಅವರು ಪದವಿ ಪೂರ್ವ ಶಿಕ್ಷಣ ಕಲಿಯುತ್ತಿರುವ ಶಿಬಿರದ ೫೦೦ ಬಾಲಕಿಯರನ್ನು ಕುರಿತು ಹೇಳಿದರು.
ಕನ್ನಡ ವಿಶ್ವವಿದ್ಯಾಲಯ, ಪದವಿಪೂರ್ವ ಶಿಕ್ಷಣ ಇಲಾಖೆ, ಬೆಂಗಳೂರು ಮತ್ತು ದುದ್ದುಪೂಡಿ ಬಾಲಕಿಯರ ಪದವಿಪೂರ್ವ ಕಾಲೇಜು ಸಿಂಧನೂರು ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ ೨೧.೧೨.೨೦೧೭ರಿಂದ ೨೭.೧೨.೨೦೧೭ರ ವರೆಗೆ ಕನ್ನಡ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ ಬಾಲಕಿಯರ ರಾಜ್ಯಮಟ್ಟದ ರಾಷ್ಟ್ರೀಯ ಸೇವಾ ಯೋಜನೆ ಶಿಬಿರಕ್ಕೆ ಮಂಟಪ ಸಭಾಂಗಣದಲ್ಲಿ ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿ ಉದ್ಘಾಟನಾ ಭಾಷಣ ಮಾಡಿದರು.
ನಿಮ್ಮ ಸಾಮರ್ಥ್ಯ ಆಸಕ್ತಿಗಳೊಂದಿಗೆ ಅವಕಾಶಗಳನ್ನು ಸದ್ಭಳಿಕೆ ಮಾಡಿಕೊಳ್ಳಲು ೭ ದಿನಗಳ ಶಿಬಿರ ಬಂಗಾರದ ದಿನಗಳಾಗಿ ಮುಂದೆ ನಿಮ್ಮ ಬದುಕಿನಲ್ಲಿ ಅವಿಸ್ಮರಣೀಯವಾಗಲಿದೆ ಎಂದು ಹೇಳಿದರು. ಎನ್.ಎಸ್.ಎಸ್.ಗಾಗಿ ಅವಿರತವಾಗಿ ದುಡಿದ ದಿಲ್‌ಶಾದ್ ಅವರನ್ನು ಸ್ಮರಿಸಿದರು.
ಗೌರವ ಅತಿಥಿಗಳಾಗಿ ಮಾತನಾಡಿದ ಕನ್ನಡ ವಿಶ್ವವಿದ್ಯಾಲಯ ಕುಲಸಚಿವರಾದ ಡಾ.ಡಿ.ಪಾಂಡುರಂಗಬಾಬು ಅವರು ಕನ್ನಡ ವಿಶ್ವವಿದ್ಯಾಲಯದ ಆವರಣದಲ್ಲಿ ಬೌದ್ಧಿಕ, ಶೈಕ್ಷಣಿಕ ಅನುಸಂಧಾನದ ವಿಶೇಷ ಶಿಬಿರವಾಗಿ ನಿಮ್ಮ ಬದುಕಿನಲ್ಲಿ ಪರಿಣಮಿಸಲಿದೆ. ನಿರ್ಭಯ ಪ್ರಕರಣದಿಂದ ಇತ್ತೀಚಿನ ದಾನಮ್ಮ ಪ್ರಕರಣಗಳ ವಾಸ್ತವಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ನಿಮ್ಮಲ್ಲಿ ಪ್ರಶ್ನೆಗಳು ಏಳಬೇಕು. ಶಿಬಿರವು ನಿಮಗೆ ಬೌದ್ಧಿಕ ಕಸುವನ್ನು ಕೊಡಲಿ ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಮಾನ್ಯಕುಲಪತಿಯವರಾದ ಡಾ.ಮಲ್ಲಿಕಾ ಎಸ್. ಘಂಟಿ ಅವರು ಹೆಂಗಸರ ಬುದ್ಧಿ ಮೊಣಕಾಲ ಕೆಳಗೆ ಎನ್ನುವ ಮಾತುಗಳಿಂದ ಬುದ್ಧಿ ದೇಹದ ಯಾವ ಭಾಗದಲ್ಲಿ ಇರುತ್ತದೆ ಎಂದು ವೈಜ್ಞಾನಿಕವಾಗಿ ಗೊತ್ತಾಗಬೇಕಿದೆ. ಸಣ್ಣ ತರ್ಕದ ಮೂಲಕ ವ್ಯವಸ್ಥೆಯ ಸುಳ್ಳುಗಳನ್ನು ಪ್ರಶ್ನಿಸುವ ವೈಚಾರಿಕ ಜ್ಞಾನವನ್ನು ವಿದ್ಯಾರ್ಥಿನಿಯರು ಹೊಂದಬೇಕು. ನಮಗೂ ಅವಕಾಶ ಕೊಡಿ ಎಂದು ಹಿಂದೆ ಕೇಳುತ್ತಿದ್ದೇವು. ಆದರೆ ಈಗ ಅವಕಾಶಗಳು ನಮ್ಮ ಕೈಯಲ್ಲಿವೆ. ಬಳಸಿಕೊಳ್ಳಬೇಕಷ್ಟೆ ಎಂದು ಹೇಳಿದರು.
೧೦ ವರ್ಷಗಳ ಹಿಂದೆ ಹೊತ್ತು ಮುಳುಗೊದರೊಳಗೆ ಬಂದು ಬಿಡಿ ಮನಿಗೆ ಎಂದು ಹಿರಿಯರು ಹೆಣ್ಣುಮಕ್ಕಳಿಗೆ ಹೇಳುತ್ತಿದ್ದರು. ಇವತ್ತು ಹಗಲಿನಲ್ಲಿ ಒಬ್ಬೊಬ್ಬರೇ ಅಡ್ಡಾಡಬ್ಯಾಡ್ರಿ ನಾಕು ಮಂದಿಗೂಡ ಓಡಾಡ್ರಿ ಎಂದು ಹೇಳುವ ಸಂಕಟದ ದಿನಗಳಲ್ಲಿ ನಾವಿದ್ದೇವೆ. ವಾಸ್ತವ ಎಂದರೆ ನಮ್ಮತನ ಉಳಿಸಿಕೊಂಡು ಬದುಕಲಾರದ ಸಂಕಷ್ಟದ ಸ್ಥಿತಿಯಲ್ಲಿದ್ದೇವೆ. ನಮ್ಮ ಬದುಕನ್ನು ಒಂದು ಕಡೆ ಆಧುನಿಕತೆ ನಿರ್ದೇಶಿಸಿದರೆ ಇನ್ನೊಂದು ಕಡೆ ಮೌಢ್ಯತೆ ನಮ್ಮನ್ನು ನಿರ್ದೇಶಿಸುತ್ತದೆ. ಅಭಿಪ್ರಾಯ ವ್ಯಕ್ತಪಡಿಸಲಾಗದ ಸಮಾಜದೊಳಗೆ, ಸಾಮಾಜಿಕ ಶಿಕ್ಷಣ ಪಡೆದು ಮುಂದುವರೆಯುತ್ತಿದ್ದೇವೆ. ಆಧುನಿಕ ಶಿಕ್ಷಣ ನಮ್ಮನ್ನು ಕೈ ಹಿಡಿಯಲಾರದ ಹೊತ್ತಿನಲ್ಲಿ ನಾವಿದ್ದೇವೆ ಎಂದು ಸಂಕಟದಿಂದ ನುಡಿದರು.
ವಿದ್ಯೆ, ಹುದ್ದೆ, ಅಪಮಾನಿಸುತ್ತ ಸಂವಿಧಾನದ ಹಕ್ಕು ಸ್ವಾತಂತ್ರ್ಯ ಹಕ್ಕು ಸೌಲಭ್ಯಗಳನ್ನು ಅನುಭವಿಸಲಾಗದ ಇಕ್ಕಟ್ಟಿನಲ್ಲಿ ನಾವಿದ್ದೇವೆ. ನಾವೆಲ್ಲ ಮಹಿಳೆಯರು ಒಂದೆ ಎಂದು ಹೇಳುವಾಗ ಅಸಹಿಷ್ಣುತೆ ಯಾಕೆ ಹುಟ್ಟುತ್ತದೆ? ಸಹಿಸುವ ಗುಣ ಬರಲಾರದೆ ಒಂದಾಗಲು ಸಾಧ್ಯವಿಲ್ಲ. ಸಹನೆ ಎನ್.ಎಸ್.ಎಸ್.ನ ಧ್ಯೇಯ ವಾಕ್ಯವಾಗಿದೆ. ಹುಟ್ಟುವಾಗಲೇ ಸಮಾಜ ನಮಗೆ ಕಸಪೊರಕೆಯನ್ನು ಕೊಟ್ಟಿದೆ. ಲೇಖನಿ ಕೊಟ್ಟಿಲ್ಲ. ಚರಿತ್ರೆಯ ವಾಸ್ತವವನ್ನು ನಾವು ನಿಮಗೆ ಹೇಳಿಕೊಡಲೇ ಬೇಕಾಗಿದೆ. ಮಿಥ್ಯಗಳನ್ನು ಒಡೆಯುವ ಕೆಲಸವನ್ನು ಕನ್ನಡ ವಿಶ್ವವಿದ್ಯಾಲಯ ಮಾಡುತ್ತಿದೆ. ನೀವೆಲ್ಲ ಈ ಶಿಬಿರದಿಂದ ಹೋಗುವಾಗ ಜವಾಬ್ದಾರಿಯುತ ನಾಗರೀಕರಾಗಿ ಬೌದ್ಧಿಕತೆಯನ್ನು ಪಡೆದುಕೊಂಡು ಹೋಗಬೇಕು ಎಂದು ತಿಳಿಸಿದರು.
ಭಾಷೆಯನ್ನು ಬಣ್ಣ, ಲಿಂಗ ಆಳುತ್ತಿದೆ. ಮಾರುಕಟ್ಟೆ, ಸಂಪ್ರದಾಯಗಳೊಂದಿಗೆ ಪೈಪೋಟಿ ಮಾಡಿ ಆಧುನಿಕ ಬಿಕ್ಕಟ್ಟು ಪರಂಪರೆಯ ಬಿಕ್ಕಟ್ಟುಗಳು ಎರಡು ಸೇರಿ ನಮ್ಮನ್ನು ಉಸಿರು ಕಟ್ಟಿಸುತ್ತಿವೆ. ವಿದ್ಯಾರ್ಥಿನಿಯರಾದ ನೀವು ಸಣ್ಣ ತರ್ಕದ ಬೀಜ ಬಿತ್ತಿಕೊಳ್ಳಬೇಕು. ಬಂಡವಾಳಶಾಹಿಗಳು ನಮ್ಮ ಒಳಗಿನ ಅಂತಃಸತ್ವವನ್ನು ಕಳೆಯುವ ಕೆಲಸವನ್ನು ಮಾಡುತ್ತಿವೆ. ಆದ್ದರಿಂದ ನೀವು ಜ್ಞಾನಮುಖಿಯಾಗಿ ಹೊರಡಬೇಕು. ಆ ಮೂಲಕ ಜಗತ್ತನ್ನು ಅನುಸಂಧಾನ ಮಾಡಬೇಕು ಎಂದು ಪದವಿಪೂರ್ವ ಬಾಲಕಿಯರಿಗೆ ತಿಳುವಳಿಕೆ ನೀಡಿದರು.
ವೇದಿಕೆಯಲ್ಲಿ ದುದ್ದುಪೂಡಿ ಮಹಿಳಾ ಮಹಾವಿದ್ಯಾಲಯದ ಅಧ್ಯಕ್ಷರಾದ ಶ್ರೀ ಆರ್. ಪಂಪಾಪತಿ ಪಾಟೀಲ್ ಅವರು ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದರು. ಕನ್ನಡ ವಿಶ್ವವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿಗಳಾದ ಡಾ.ಶಿವಾನಂದ ವಿರಕ್ತಮಠ ಅವರು ಸ್ವಾಗತಿಸಿದರು. ಸಂಯೋಜನಾಧಿಕಾರಿಗಳಾದ ಕಲಬುರಗಿ ವಿಭಾಗ ಪದವಿಪೂರ್ವ ಶಿಕ್ಷಣ ಇಲಾಖೆಯ ಡಾ.ಎಸ್.ಶಿವರಾಜ್ ಪ್ರಾಸ್ತಾವಿಕ ನುಡಿದರು. ಗೌರವ ಅತಿಥಿಗಳಾದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಶ್ರೀ ಆರ್.ಸಿ. ಪಾಟೀಲ್ ವಂದಿಸಿದರು. ಪಿಡಿಎಫ್ ವಿದ್ಯಾರ್ಥಿ ಡಾ.ವೀರೇಶ ಜಾನೇಕಲ್ ನಿರೂಪಿಸಿದರು. ಸಂಗೀತ ಮತ್ತು ನೃತ್ಯ ವಿಭಾಗದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಿಬಿರದ ಶಾಂತಿಪ್ರಿಯ ಮತ್ತು ತಂಡದವರು ಮಹಿಳಾ ಗೀತೆ ಮತ್ತು ಎನ್‌ಎಸ್‌ಎಸ್ ಗೀತೆ ಹಾಡಿದರು. ಉದ್ಘಾಟನೆಯ ಕಾರ್ಯಕ್ರಮದಲ್ಲಿ ಭೂಮಿಗೌಡ ಅವರು, ಪದವಿ ಪೂರ್ವ ಶಿಕ್ಷಣದ ಅಧ್ಯಾಪಕರು ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಎಲ್ಲ ಗಣ್ಯರು ತಮ್ಮ ಮಾತುಗಳಲ್ಲಿ, ಅನೇಕ ಆತಂಕಗಳ ನಡೆಯುವ ಅಧ್ಯಾಪಕರ ಮೇಲೆ, ಸಂಘಟನಾಕಾರರ ಮೇಲೆ ವಿಶ್ವಾಸವಿಟ್ಟು ೭ ದಿನಗಳ ಶಿಬಿರಕ್ಕೆ ಬಾಲಕಿಯರನ್ನು ಕಳುಹಿಸಿದ ಪೋಷಕರು ಮತ್ತು ತಂದೆತಾಯಿಗಳನ್ನು ಸ್ಮರಿಸಿದರು.

 

ವಾಲ್ಮೀಕಿ ಅಧ್ಯಯನ ಪೀಠ ಎಲ್.ಜಿ. ಹಾವನೂರ ವರದಿ ಮತ್ತು ಪ್ರಸ್ತುತ ಕರ್ನಾಟಕ ವಿಚಾರಸಂಕಿರಣದ ಉದ್ಘಾಟನೆ

ಬೇಕೋ ಬೇಡವೋ ಆದರೆ ಭಾರತ ದೇಶದಲ್ಲಿ ನಾವು ಜಾತಿಯೊಂದಿಗೆ ಹುಟ್ಟುತ್ತಿದ್ದೇವೆ. ಇದು ಈ ದೇಶದ ವಾಸ್ತವ ಎಂದು ಮಧ್ಯಪ್ರದೇಶದ ಇಂದಿರಾಗಾಂಧಿ ರಾಷ್ಟ್ರೀಯ ಬುಡಕಟ್ಟು ವಿಶ್ವವಿದ್ಯಾಲಯ ಅಮರಕಂಟಕದ ಕುಲಪತಿಯವರಾದ ಡಾ.ತೇಜಸ್ವಿ ಕಟ್ಟಿಮನಿ ಅವರು ನುಡಿದರು.
ಅದ್ಭುತ ಓದುಗರು, ಅದ್ಭುತ ನೆನಪಿನ ಶಕ್ತಿ ಹಾಗೂ ಅತ್ಯದ್ಭುತ ಅಂಬೇಡ್ಕರ್ ಕುರಿತ ಅಧ್ಯಯನ ಹಾವನೂರ ಅವರದಾಗಿತ್ತು. ಅವರು ತಳವರ್ಗಗಳ ಆರ್ಥಿಕ ಸಾಮಾಜಿಕ ಧಾರ್ಮಿಕ ಸ್ಥಿತಿಗಳನ್ನು ಬಹಳ ಚನ್ನಾಗಿ ಅರ್ಥಮಾಡಿ ಕೊಂಡಿದ್ದರು. ನಾನು ಇಡೀ ಕರ್ನಾಟಕ ಹಿಂದುಳಿದ ವರ್ಗಗಳ ನಾಯಕ. ನಾನು ವಾಲ್ಮೀಕಿ ಸಮಾಜಕ್ಕೆ ಮಾತ್ರ ಸೀಮಿತ ಅಲ್ಲ ಎಂದು ಹೇಳಿಕೊಂಡಿದ್ದಾರೆ. ನಂತರ ಮುಂದಿನ ದಿನಗಳಲ್ಲಿ ಇದು ನನ್ನ ಭ್ರಮೆ ಆಗಿತ್ತು ಎಂದೂ ಸಹ ಹೇಳಿಕೊಂಡಿದ್ದಾರೆ ಎಂದು ಪ್ರೊ. ತೇಜಸ್ವಿ ತಿಳಿಸಿದರು. ಪೋಸ್ಟ್ ಹಾವನೂರ ರಿಪೋರ್ಟ್ (Post Havanoora Report)ಅನ್ನು ಎಲ್ಲರೂ ಅಧ್ಯಯನ ಮಾಡಬೇಕು. ಈ ವರದಿಯ ಅಧ್ಯಯನದಿಂದ ಅನೇಕರು ಉನ್ನತ ಹುದ್ದೆಗೆ ಹೋಗಿದ್ದಾರೆ. ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗವು ಈ ವರದಿಯನ್ನು ಕೈಗೆತ್ತಿಕೊಳ್ಳಬೇಕು. ಹಾವನೂರ ವರದಿಯನ್ನು ದೇಶ ವಿದೇಶಗಳಲ್ಲಿ ಅಧ್ಯಯನ ಮಾಡಿದ್ದಾರೆ. ವಾಲ್ಮೀಕಿ ಪೀಠವು ಈ ಅಧ್ಯಯನಗಳನ್ನು ಸಂಗ್ರಹಿಸಬೇಕು ಇದೆಲ್ಲ ಡಿಜಿಟಲೈಸೇಷನ್ ಆಗಬೇಕು. ಬುಡಕಟ್ಟಿನವರ ಜ್ಞಾನವನ್ನು ಪೀಠವು ದಾಖಲಿಸಬೇಕು. ಆಯಾ ಧರ್ಮದವರೆ ಆ ಧರ್ಮದ ಕುರಿತು ಮಾತನಾಡಬೇಕು ಎನ್ನುವ ದುರಂತವನ್ನು ತಪ್ಪಿಸಬೇಕು ಎಂದರು. ಇಡೀ ರಾಜ್ಯ ಕನ್ನಡ ನೆಲವನ್ನು ಹೊಸ ರೀತಿಯಲ್ಲಿ ವಿಚಾರ ಮಾಡುವ ಒತ್ತಡವನ್ನು ಹಾವನೂರ ವರದಿಯು ಕರ್ನಾಟಕದಲ್ಲಿ ತಂದಿತು ಎಂದು ತಮ್ಮ ಆಶಯ ನುಡಿಯ ಮುಕ್ತಾಯದಲ್ಲಿ ತಿಳಿಸಿದರು.
ಕರ್ನಾಟಕ ಸರ್ಕಾರದ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಸನ್ಮಾನ್ಯ ಶ್ರೀ ಕೆ.ಆರ್.ರಮೇಶ ಕುಮಾರ್ ಅವರು ಉದ್ಘಾಟನೆಯ ಮಾತಗಳನ್ನಾಡುತ್ತ ಹಾವನೂರ ಮತ್ತು ದೇವರಾಜ ಅರಸು ಇಬ್ಬರು ಸಂಕೇತಗಳು. ಯಾವ ಅಸಮಾಧಾನ ಆಕ್ರೋಶಗಳು ತುಂಬಿ ಹೊರಗೆ ಬರಲು ತವಕಿಸುತ್ತಿದ್ದವು ಅವು ವರದಿಯ ರೂಪದಲ್ಲಿ ಹೊರಬಂದವು. ಭದ್ರ ಬುನಾದಿಯ ಮೇಲೆ ಇದ್ದ ಅಸಮಾನತೆಯ ಗೋಡೆಗಳನ್ನು ಕೆಡವಿ ಕಟ್ಟುವ ಕೆಲಸಕ್ಕೆ ಹಾವನೂರ ಕೈ ಹಾಕುತ್ತಾರೆ. ಕಾಂಗ್ರೆಸ್ ವಿಭಜನೆ ಆದಾಗಲೇ ದೇವರಾಜು ಅರಸು ಮತ್ತು ಹಾವನೂರರ ಸಂಬಂಧ ಆರಂಭವಾಗಿತ್ತು ಎಂದು ತಿಳಿಸಿದರು.
ನೊಂದವರಿಗೆ ಶೋಷಿತರಿಗೆ ಸಂಘಟನೆ ಮಾಡುವುದು ಬಹಳ ಕಷ್ಟದ ಕೆಲಸ. ಪ್ರಜ್ಞೆ ಸ್ವಾಭಿಮಾನ ಇದ್ದವರಿಗೆ ಅಂಬೇಡ್ಕರ್ ಮತ್ತು ಹಾವನೂರ ಅವರನ್ನು ಮರೆಯಲು ಆಗುವುದಿಲ್ಲ. ಈ ವರದಿಯು ಹಿಂದುಳಿದವರಿಗೆ ಮಾತ್ರ ಅಲ್ಲ ಬೇರೆ ವರ್ಗದವರಿಗೂ ಸಹಾಯ ಮಾಡಿದೆ. ವರದಿಯ ನಂತರ ಹಿಂದುಳಿದವರು ಎಂದು ಹೇಳಿಕೊಳ್ಳುವವರ ಹೊಸಯುಗ ಆರಂಭವಾಯಿತು. ಜಾತಿ ಸಂಘಟನೆ ಮಾಡಿ ಸಾಧಕರನ್ನು ಜಾತಿಯ ಜೈಲಿನೊಳಗೆ ಹಾಕಿ ಬಂಧಿಸಿದ್ದೇವೆ ಎಂದು ಬಸವೇಶ್ವರ ಅಂಬೇಡ್ಕರ, ಟಿಪ್ಪು, ಹಾವನೂರ, ವಾಲ್ಮೀಕಿ ಮೊದಲಾದವರನ್ನು ಉದಾಹರಿಸಿದರು.
ವರದಿಗಳನ್ನು ವಿರೋಧಿಸಿದವರು ಯಾರೂ ಸರಿಯಾಗಿ ವರದಿಗಳನ್ನು ಓದಿರಲಿಲ್ಲ. ಅರಸು ಹಾವನೂರ ಅವರ ಶ್ರಮ ಶಾಸನಬದ್ಧವಾಗಿ ಅನುಷ್ಠಾನ ಆಗುತ್ತಿದೆ. ಆದರೆ ಮಾನಸಿಕವಾಗಿ ಪರಿವರ್ತನೆ ತರುವಲ್ಲಿ ಯಶಸ್ವಿಯಾಗಬೇಕು ಎಂದು ಸಚಿವರು ಅಭಿಪ್ರಾಯಪಟ್ಟರು.
ಮಾನ್ಯಕುಲಪತಿಯವರಾದ ಡಾ.ಮಲ್ಲಿಕಾ ಎಸ್. ಘಂಟಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಎಲ್.ಜಿ. ಹಾವನೂರ ಅವರ ಎಲ್ಲ ವರದಿಗಳನ್ನು ಕನ್ನಡ ವಿಶ್ವವಿದ್ಯಾಲಯ ಪ್ರಕಟಮಾಡುತ್ತದೆ ಎಂದು ವೇದಿಕೆಯಲ್ಲಿ ಹೇಳಿದರು. ಕನ್ನಡ ವಿಶ್ವವಿದ್ಯಾಲಯದ ಎಲ್ಲ ಕಾರ್ಯಕ್ರಮಗಳು ವಿದ್ಯಾರ್ಥಿ ಕೇಂದ್ರಿಕೃತವಾಗಿರುತ್ತವೆ. ನೋವು ಇಲ್ಲದ ಕನಸುಗಳು, ಇಲ್ಲದವರಿಗೆ ಬದುಕಿನ ಕನಸು ಕಾಣಲು ಹಾವನೂರ ಅವರ ಅಗತ್ಯ ಇದೆ. ಏಕೆಂದರೆ ವಿದ್ಯಾರ್ಥಿಗಳಿಗೆ ಚರಿತ್ರೆಯ ನೋವುಗಳು ತಾಕುತ್ತಿಲ್ಲ. ಕಾಲ ಬರೆಯುವ ಚರಿತ್ರೆಗೂ ವ್ಯಕ್ತಿಗಳು ಬರೆಯುವ ಚರಿತ್ರೆಗೂ ವ್ಯತ್ಯಾಸವಿದೆ. ಕಾಲಕ್ಕೆ ಪೂರ್ವಗ್ರಹಗಳಿಲ್ಲ. ಇದರ ಜೊತೆ ಹಾವನೂರ ಅವರು ಯಾವಾಗಲೂ ಇರುತ್ತಾರೆ. ವ್ಯಕ್ತಿಗಳು ಬರೆಯುವ ಚರಿತ್ರೆಗೆ ಪೂರ್ವಗ್ರಹಗಳು ಇರುತ್ತವೆ. ಇಂದು ವ್ಯಕ್ತಿಯನ್ನು ಜಾತಿ ಸಂಕೇತದಲ್ಲಿ ನೋಡಲಾಗುತ್ತದೆ. ಕನ್ನಡ ವಿಶ್ವವಿದ್ಯಾಲಯದ ಎಲ್ಲ ಪೀಠಗಳಿಗೆ ಬೇರೆ ಬೇರೆ ಸಮುದಾಯದವರನ್ನು ಸಂಚಾಲಕರನ್ನಾಗಿ ಮಾಡಿ ಜಾತಿಯ ವ್ಯವಸ್ಥೆಯಲ್ಲಿ ಸಣ್ಣ ಬಿರುಕು ತರಲು ಪ್ರಯತ್ನಿಸಲಾಗಿದೆ ಎಂದು ತಿಳಿಸಿದರು.
ಕುಲಸಚಿವರಾದ ಡಾ.ಡಿ.ಪಾಂಡುರಂಗಬಾಬು ಅವರು ಸ್ವಾಗತಿಸಿದರು. ಪೀಠದ ಸಂಚಾಲಕರಾದ ಡಾ.ವೀರೇಶ ಬಡಿಗೇರ ಅವರು ಪೀಠದ ಕಾರ್ಯಕ್ರಮದ ಸ್ವರೂಪ ಮತ್ತು ವಿಚಾರಸಂಕಿರಣದ ಪ್ರಸ್ತುತತೆಯನ್ನು ಪ್ರಾಸ್ತಾವಿಕದಲ್ಲಿ ತಿಳಿಸಿದರು. ಕು. ಗೀತಾ ಬಡಿಗೇರ ನಿರೂಪಿಸಿದರು. ಡಾ.ತಾರಿಹಳ್ಳಿ ಹನುಮಂತಪ್ಪ ಅವರು ವಂದಿಸಿದರು. ಸಂಗೀತ ಮತ್ತು ನೃತ್ಯ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವಿಜಯನಗರ ಕ್ಷೇತ್ರದ ಶಾಸಕರಾದ ಶ್ರೀ ಬಿ.ಎಸ್. ಆನಂದಸಿಂಗ್ ಅವರು, ಸಿಂಡಿಕೇಟ್ ಸದಸ್ಯರಾದ ಅಲ್ಲಮಪ್ರಭು ಬೆಟ್ಟದೂರ ಅವರು, ಡೀನರು, ಅಧ್ಯಾಪಕರು, ವಿದ್ಯಾರ್ಥಿಗಳು, ನಾಗರೀಕರು ಉಪಸ್ಥಿತರಿದ್ದರು. ಎಲ್.ಜಿ.ಹಾವನೂರ ಅವರ ಭಾವಚಿತ್ರಕ್ಕೆ ಸನ್ಮಾನ್ಯ ಸಚಿವರು ಮತ್ತು ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನಂತರ ಎಲ್.ಜಿ. ಹಾವನೂರ ವ್ಯಕ್ತಿ ಮತ್ತು ವ್ಯಕ್ತಿತ್ವ ಕುರಿತು ಶ್ರೀಮತಿ ರತ್ನ ಹಾವನೂರ, ಹಾವನೂರ ವರದಿ ಮತ್ತು ಅಂದಿನ ಕರ್ನಾಟಕದ ರಾಜಕಾರಣ ಕುರಿತು ಡಾ. ರಾಜಪ್ಪ ದಳವಾಯಿ, ಹಾವನೂರ ವರದಿ ಮತ್ತು ಸಾಮಾಜಿಕ ಆರ್ಥಿಕ ನೆಲೆಗಳು ಕುರಿತು ಡಾ.ಐ. ಹೊನ್ನೂರ ಅಲಿ, ಹಾವನೂರ ವರದಿ ಸಾಂಸ್ಕೃತಿಕ ನೆಲೆಗಳನ್ನು ಕುರಿತು ಪ್ರೊ. ಲಿಂಗರಾಜ ಕಮ್ಮಾರ ಅವರು ಗೋಷ್ಠಿಗಳಲ್ಲಿ ಪ್ರಬಂಧಗಳನ್ನು ಮಂಡಿಸಿದರು.

23926546_10208805106600044_5958137571641576077_o24068463_10208805107760073_536206367166110041_o

24173053_10208805109040105_7808188759227952137_o24059467_10208805110960153_5855101250598979061_o

ಕನ್ನಡ ವಿಶ್ವವಿದ್ಯಾಲಯ ಕನಕದಾಸ ಜಯಂತಿ ಪ್ರಯುಕ್ತ  ಕನಕದಾಸರ ಮುಂಡಿಗೆಗಳು- ವಿಶೇಷ ಉಪನ್ಯಾಸ ಹಾಗೂ

ಕನ್ನಡ ವಿಶ್ವವಿದ್ಯಾಲಯ
ಕನಕದಾಸ ಜಯಂತಿ ಪ್ರಯುಕ್ತ
ಕನಕದಾಸರ ಮುಂಡಿಗೆಗಳು- ವಿಶೇಷ ಉಪನ್ಯಾಸ ಹಾಗೂ
ಕೀರ್ತನೆಗಳ ಗಾಯನ

ಮಾನವತ್ವದ ಮುಂದೆ ದೈವತ್ವ ಏನೂ ಅಲ್ಲ ಎಂದು ಕನಕದಾಸರು ಹೇಳಿದ್ದಾರೆ. ಜನಸಾಮಾನ್ಯರಿಗೆ ತತ್ವ ಬೋಧಿಸಲು ಕನಕದಾಸರು ಮುಂಡಿಗೆಗಳನ್ನು ಬಳಸಿದ್ದಾರೆ ಎಂದು ಗದಗಿನ ವಿಶ್ರಾಂತ ಪ್ರಾಧ್ಯಾಪಕರಾದ ಡಾ.ಸಿದ್ಧಣ್ಣ ಎಫ್. ಜಕಬಾಳ ಅವರು ತಿಳಿಸಿದರು.
ಕನ್ನಡ ವಿಶ್ವವಿದ್ಯಾಲಯ ಹಾಲುಮತ ಅಧ್ಯಯನ ಪೀಠವು ದಿನಾಂಕ ೬.೧೧.೨೦೧೭ರಂದು ಭುವನವಿಜಯ ಸಭಾಂಗಣದಲ್ಲಿ ಕನಕದಾಸರ ೫೦೦ನೇ ಜಯಂತಿಯ ಪ್ರಯುಕ್ತ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಹಾಗೂ ಕೀರ್ತನೆಗಳ ಗಾಯನ ಕಾರ್ಯಕ್ರಮದಲ್ಲಿ ಕನಕದಾಸರ ಮುಂಡಿಗೆಗಳು ವಿಷಯ ಕುರಿತು ವಿಶೇಷ ಉಪನ್ಯಾಸ ನೀಡುತ್ತಿದ್ದರು.
ಸಂಗ್ರಹವಾಗಿರುವ ೫೦ ಮುಂಡಿಗೆಗಳಲ್ಲಿ ಪೌರಾಣಿಕ ಮುಂಡಿಗೆಗಳು ನಿಗೂಢ ಮುಂಡಿಗೆಗಳು, ಅನುಭಾವ ಮುಂಡಿಗೆಗಳು ಇವೆ. ವಚನ ಸಾಹಿತ್ಯದಲ್ಲಿರುವ ಬೆಡಗಿನ ರೀತಿ ದಾಸ ಸಾಹಿತ್ಯದಲ್ಲಿ ಮುಂಡಿಗೆಗಳಿವೆ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಒಗಟು, ಬೆಡಗು ಇವುಗಳ ಮುಂದಿನ ರೂಪ ಮುಂಡಿಗೆ. ಪದವೊಂದೇ ಇದ್ದರೂ ಬೇರೆ ಬೇರೆ ಅರ್ಥ ಕೊಡುವುದೇ ಬೆಡಗು, ಮುಂಡಿಗೆ. ಮುಳ್ಳ ಮೊನಿ ಮೇಲೆ ಮೂರು ತೆರಿಕಟ್ಟಿ ಎರಡು ತುಂಬಲೇ ಇಲ್ಲ ಒಂದು ತುಂಬೇ ಇಲ್ಲ ಎಂದು ನಿಗೂಢ ಮುಂಡಿಗೆಗೆ ಉದಾಹರಣೆ ನೀಡಿದರು. ಶಿವ ಎಂಬ ಪದಕ್ಕೆ ಸಮುದ್ರ, ನೀರು, ಪರ್ವತ, ಬ್ರಹ್ಮ ಹಾಗೂ ಹರಿ ಪದಕ್ಕೆ ಇಂದ್ರ, ಸೂರ್ಯ, ನಾರಾಯಣ, ಸಿಂಹ, ವಾನರ ಎಂಬ ಅರ್ಥಗಳಿವೆ. ಅಲ್ಲದೆ ಸವಾಲು ಜವಾಬು, ಡೊಳ್ಳಿನ ಹಾಡುಗಳಲ್ಲಿ ಮುಂಡಿಗೆಗಳು ಸಿಗುತ್ತವೆ. ಮುಂಡಿಗೆಯ ಪಲ್ಲವಿಗಳ ಅರ್ಥ ಸ್ಪಷ್ಟವಾದರೆ ಮುಂದಿನ ಸಾಲುಗಳ ಅರ್ಥ ತಿಳಿಯುತ್ತದೆ. ದಶಾವತಾರಗಳ ಬಗ್ಗೆ ಸ್ಪಷ್ಟತೆ ಇದ್ದರೆ ಪೌರಾಣಿಕ ಮುಂಡಿಗೆಗಳು ಅರ್ಥವಾಗುತ್ತವೆ ಭವ, ಭಯ, ವಿನಾಶ ಭೋ- ಇದು ಒಗಟಿನ ರೂಪದ ಮುಂಡಿಗೆಯಾಗಿದೆ ಎಂದು ತಿಳಿಸುತ್ತ, ಜಾನಪದರು ದೃಶ್ಯವನ್ನು ಕಟ್ಟಿ ಕೊಡುವುದರಲ್ಲಿ ನಿಸ್ಸೀಮರು. ಜನಸಾಮಾನ್ಯರಲ್ಲಿ ಬೆಳೆದ ಕನಕದಾಸರು ಹರಿಭಕ್ತಿಸಾರ, ನಳಚರಿತ್ರೆ, ಮೋಹನ ತರಂಗಿಣ, ರಾಮಧಾನ್ಯ ಚರಿತೆ ಅಲ್ಲದೆ ಮುಂಡಿಗೆಗಳನ್ನು ರಚಿಸಿ ಪಂಡಿತಕವಿ, ದಾರ್ಶನಿಕ ಕವಿ, ಜನಪದ ಕವಿಯಾಗಿ, ದಾಸರೊಳಗೆ ದಾಸರಾಗಿದ್ದಾರೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಕುಲಸಚಿವರಾದ ಡಾ. ಡಿ. ಪಾಂಡುರಂಗಬಾಬು ಅವರು ಮಾತನಾಡಿ ಸಮಾನತೆಯ ಪ್ರತಿಪಾದಕರಾದ ಕನಕದಾಸರು ಯಾವುದೇ ಸಮುದಾಯಕ್ಕೆ ಸೇರಿಲ್ಲದ, ಜಾತ್ಯಾತೀತರು. ಇವರನ್ನು ನಿರ್ದಿಷ್ಟ ಸಮುದಾಯಕ್ಕೆ ಸೀಮಿತಗೊಳಿಸಲಾಗಿದೆ. ಇದು ಕನಕದಾಸರ ಆಶಯಗಳಿಗೆ ವಿರುದ್ಧವಾಗಿದ್ದು ಆತಂಕಕಾರಿಯಾಗಿದೆ. ಬದಲಾಗಿ ಅವರನ್ನು ಸಾಮಾಜೀಕರಣ ಗೊಳಿಸಬೇಕು. ಕೊಡುಕೊಳ್ಳುವಿಕೆ ಆಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಮಾನ್ಯಕುಲಪತಿಯವರಾದ ಡಾ.ಮಲ್ಲಿಕಾ ಎಸ್. ಘಂಟಿ ಅವರು ಕನಕದಾಸರು ತಮ್ಮ ಪ್ರತಿರೋಧಗಳನ್ನು ನಿಗೂಢವಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ. ಸಾಮಾಜಿಕ ಜವಾಬ್ದಾರಿಗಳನ್ನು ನಿರ್ವಹಿಸುವ ಒಳ ಒತ್ತಡಗಳಿಂದ ಪ್ರತಿಮೆ ಮತ್ತು ಸಾಂಕೇತಿಕವಾಗಿ ಮಾತಾಡಲು ಪ್ರಯತ್ನಿಸಿದ್ದಾರೆ. ಆ ಕಾಲದಲ್ಲಿ ಇಂತಹ ಬಿಕ್ಕಟ್ಟುಗಳು ಯಾಕೆ ಹುಟ್ಟಿದವು ಎಂದು ಈಗ ಹೊಸ ಓದಿನ ಮೂಲಕ ನೋಡಬೇಕಾಗಿದೆ.
ಇಂದಿಗೂ ಮುಂಡಿಗೆಯ ಭಾಷೆಯಲ್ಲಿ ಜಾತಿ ವ್ಯವಸ್ಥೆ ಬಲಿಷ್ಠವಾಗಿ ಛಾಸಿಗೊಳಿಸುತ್ತಿದೆ. ಇದನ್ನು ಕಾಲದ ಸತ್ಯ ಮತ್ತು ವೈಜ್ಞಾನಿಕ ಪರೀಕ್ಷೆಗಳಿಗೆ ಒಳಪಡಿಸಿಕೊಳ್ಳಬೇಕಾದ ತುರ್ತು ಇದೆ. ಬಾಗಿಲನು ತೆರೆದು ಸೇವೆಯನು ಕೊಡುಹರಿಯೇ ಎನ್ನುವ ಕೀರ್ತನೆಯು ವ್ಯಕ್ತಪಡಿಸುವ ಆರ್ದ್ರತೆ ಇಂತಹ ನೋವನ್ನು ಅನುಭವಿಸಿದವರಿಗೆ ಮಾತ್ರ ಕನಕದಾಸ ಅರ್ಥವಾಗುತ್ತಾನೆ. ಆಧ್ಯಾತ್ಮಿಕ ಮತ್ತು ಧಾರ್ಮಿಕ ಸಂಗತಿಗಳಿಗೆ ಕನಕದಾಸರು ಕೈ ಹಾಕಿದಾಗ ವೈದಿಕಶಾಹಿಯು ಬೆಚ್ಚಿಬಿದ್ದಿತು. ಆಗ ಕನಕರಿಗೆ ತೊಂದರೆಗಳು ಶುರು ಆದವು ಎಂದು ಕೀರ್ತನೆಗಳಿಂದ ತಿಳಿಯುತ್ತದೆ. ಇಂದು ಜಾತಿ ವ್ಯವಸ್ಥೆ ಮುಂದುವರೆಸುವ ಸಲುವಾಗಿ ಮಾನವೀಯತೆಯನ್ನು ನಿಕೃಷ್ಟವಾಗಿ ಕಾಣಲಾಗುತ್ತಿದೆ. ಇದರ ಹಿಂದಿನ ಮರ್ಮ ಅರ್ಥಮಾಡಿಕೊಳ್ಳಬೇಕು. ಜ್ಯಾತಿವ್ಯವಸ್ಥೆಯ ಅಹಂಕಾರಗಳು ಇಂದಿಗೂ ನಿರಸನ ಆಗಿಲ್ಲ. ಕನಕದಾಸರಾದಿಯಾಗಿ ಎಲ್ಲ ಸಮಾಜ ಸುಧಾರಕರಿಗೆ ಇರುವ ಕಾಳಜಿ ನಮಗೂ ಇದ್ದರೆ ಈ ಜ್ಯಾತಿವ್ಯವಸ್ಥೆ ನಾಶವಾಗುತ್ತಿತ್ತು ಎಂದು ಹೇಳಿದರು.
ಇಡೀ ಚರಿತ್ರೆಯನ್ನು ಸೂಕ್ಷ್ಮವಾಗಿ ನೋಡಿದರೆ ಎಲ್ಲಿಯೂ ಪುರೋಹಿತ ಶಕ್ತಿಯನ್ನು ಕೊಲ್ಲುವ ಉದಾಹರಣೆಗಳಿಲ್ಲ. ಪುರಾಣಗಳನ್ನು ವೈಚಾರಿಕ ಪ್ರಜ್ಞೆಯಿಂದ ಓದುವ ಪ್ರಯತ್ನ ಮಾಡಿದರೆ ಅಲ್ಲಿ ಇರುವ ಜ್ಯಾತಿಸಂಘರ್ಷ ಮೇಲು, ಕೀಳು, ಅಸಮಾನತೆಗಳು ತಿಳಿಯುತ್ತವೆ. ಪುರಾಣಗಳನ್ನು ಮರುಪ್ರಶ್ನಿಸಬೇಕು. ಸಂವಿಧಾನವನ್ನು ಸೂಕ್ಷ್ಮವಾಗಿ ಗಮನಿಸಿದರೆ ಕನಕದಾಸರು, ಶರಣರು, ಸರ್ವಜ್ಞರು ಇದ್ದಾರೆ. ಅದನ್ನು ನೋಡುವ ಬಗೆ ನಮಗೆ ಗೊತ್ತಾಗುತ್ತಿಲ್ಲ ಎಂದು ಕುಲಪತಿಯವರು ನುಡಿದರು.
ನಂತರ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅನುದಾನದಿಂದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ೧೬ ಪುಸ್ತಕಗಳ ೫೦ ಕಟ್ಟುಗಳನ್ನು ಸಂಶೋಧನಾ ವಿದ್ಯಾರ್ಥಿಗಳಾದ ಗೀತಾಬಾಯಿ ಬಡಿಗೇರ, ಶಿಲ್ಪ, ನಾಗಪ್ಪ, ನವೀನಕುಮಾರ ಇವರಿಗೆ ವೇದಿಕೆಯಲ್ಲಿ ಸಾಂಕೇತಿಕವಾಗಿ ವಿತರಿಸಿದರು. ವೈಚಾರಿಕ ತಿಳುವಳಿಕೆಯಿಂದ ಜಗತ್ತನ್ನು ನೋಡುವ ಶಕ್ತಿಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಕಾಲಕ್ಕನುಗುಣವಾಗಿ ಶೈಕ್ಷಣಿಕ ಬೆಳವಣಿಗೆಗೆ ಕೊಡುವ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಬಳಸಿಕೊಂಡು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಸರ್ವಸಿದ್ಧತೆ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಐ.ಎ.ಎಸ್. ಮತ್ತು ಕೆ.ಎ.ಎಸ್. ಅಧಿಕಾರಿಗಳಾಗಿ ಬರುವಂತಾಗಬೇಕು. ಕನಕರ ಸಾಮಾಜಿಕ ನ್ಯಾಯ ವಿದ್ಯಾರ್ಥಿಗಳಿಗೆ ಶಕ್ತಿ ತುಂಬಲಿ ಎಂದು ಆಶಯ ವ್ಯಕ್ತಪಡಿಸಿದರು.
ಪೀಠದ ಸಂಚಾಲಕರಾದ ಡಾ.ಎಫ್.ಟಿ.ಹಳ್ಳಿಕೇರಿ ಅವರು ಸ್ವಾಗತಿಸಿ, ಪ್ರಾಸ್ತಾವಿಕ ನುಡಿದು ಡಾ.ಜಕಬಾಳ ಅವರನ್ನು ಪರಿಚಯಿಸಿದರು. ಶ್ವೇತಾ ನಿರೂಪಿಸಿದರು. ಬಾಣದ ಮಂಜುನಾಥ ವಂದಿಸಿದರು. ಸಂಗೀತ ಮತ್ತು ನೃತ್ಯ ವಿಭಾಗದ ಅಧ್ಯಾಪಕರು, ವಿದ್ಯಾರ್ಥಿಗಳು ಕನಕದಾಸರ ಕೀರ್ತನೆಗಳನ್ನು ಗಾಯನ ಮಾಡಿದರು. ವೇದಿಕೆಯ ಮೇಲಿದ್ದ ಗಣ್ಯರು ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಕಾರ್ಯಕ್ರಮದಲ್ಲಿ ಹೊಸಪೇಟೆಯ ಹಾಲುಮತ ಸಾಂಸ್ಕೃತಿಕ ವೇದಿಕೆಯ ಪದಾಧಿಕಾರಿಗಳು, ನಾಗರಿಕರು, ವಿಶ್ವವಿದ್ಯಾಲಯದ ಡೀನರು, ಅಧ್ಯಾಪಕರು, ಅಧಿಕಾರಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

23270262_10208688266559116_4460216275506151016_o

ಕನ್ನಡ ವಿಶ್ವವಿದ್ಯಾಲಯದ ಸ್ವಾಯತ್ತತೆ ಉಳಿಸಿ ಹೋರಾಟ

ಕನ್ನಡ ವಿಶ್ವವಿದ್ಯಾಲಯ, ಹಂಪಿ

ಕನ್ನಡ ವಿಶ್ವವಿದ್ಯಾಲಯದ ಸ್ವಾಯತ್ತತೆ ಉಳಿಸಿ ಹೋರಾಟ ಸಮಿತಿ, ವಿದ್ಯಾರಣ್ಯ

ಇದೇ ತಿಂಗಳ ಎರಡನೇ ವಾರದಲ್ಲಿ ಆರಂಭವಾಗಲಿರುವ ಬೆಳಗಾವಿಯ ವಿಧಾನಮಂಡಲಗಳ ಚಳಿಗಾಲದ ಅಧಿವೇಶನದಲ್ಲಿ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ವಿಧೇಯಕ-೨೦೧೭ ಅಂಗೀಕಾರಕ್ಕೆ ಬರಲಿದೆ. ಇದರಲ್ಲಿ ಕರ್ನಾಟಕ ಎಲ್ಲ ವಿಶ್ವವಿದ್ಯಾಲಯಗಳ ಜತೆ ಕನ್ನಡ ವಿಶ್ವವಿದ್ಯಾಲಯವನ್ನೂ ಸೇರಿಸಲಾಗಿದೆ. ಈ ವಿಧೇಯಕ ಅಂಗೀಕಾರವಾದರೆ, ಇದರಿಂದ ನಾಡಿನ ಬಹುಜನರ ಅಪೇಕ್ಷೆಯಂತೆ, ಕರ್ನಾಟಕದ ಭಾಷೆ ಸಾಹಿತ್ಯ ಚರಿತ್ರೆ ಸಂಸ್ಕೃತಿಗಳ ಅಧ್ಯಯನಕ್ಕಾಗಿ ಸ್ಥಾಪಿತವಾಗಿರುವ ಸಾಂಸ್ಕೃತಿಕ ಮಹತ್ವವುಳ್ಳ ಕನ್ನಡ ವಿಶ್ವವಿದ್ಯಾಲಯಕ್ಕೆ, ಅದು ಈವರೆಗೆ ಪಡೆದುಕೊಂಡಿದ್ದ ವಿಶಿಷ್ಟ ಸ್ಥಾನಮಾನ ಮತ್ತು ಸ್ವಾಯತ್ತತೆಗಳು ಕೊನೆಗೊಳ್ಳುತ್ತವೆ. ಕನ್ನಡ ವಿಶ್ವವಿದ್ಯಾಲಯವು ಬೆಳ್ಳಿಹಬ್ಬ ಆಚರಿಸುತ್ತಿರುವ ಈ ಹೊತ್ತಿನಲ್ಲಿ ಇದೊಂದು ಆಘಾತಕರ ಸಂಗತಿಯಾಗಲಿದೆ. ಈ ಹಿಂದೆ ನಾಡಿನ ಹಿರಿಯ ಲೇಖಕರು ಚಿಂತಕರು, ಮಾನ್ಯ ಕುಲಪತಿಯವರ ನೇತೃತ್ವದಲ್ಲಿ ಮಾನ್ಯ ಮುಖ್ಯಮಂತ್ರಿಯವರನ್ನು ಭೇಟಿಯಾಗಿ, ಈ ಹಿಂದೆ ಇದ್ದಂತೆ ಕನ್ನಡ ವಿಶ್ವವಿದ್ಯಾಲಯದ ವಿಶಿಷ್ಟತೆಯನ್ನು ರಕ್ಷಿಸಬೇಕೆಂದೂ, ಅದನ್ನು ಉದ್ದೇಶಿತ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ವಿಧೇಯಕದಲ್ಲಿ ಸೇರಿಸಬಾರದೆಂದೂ ಮನವಿ ಮಾಡಲಾಗಿತ್ತು. ಈ ಬೇಡಿಕೆಯನ್ನು ಮುಖ್ಯಮಂತ್ರಿಗಳು ಒಪ್ಪಿದ್ದರು. ಈ ಬಗ್ಗೆ ಮಾನ್ಯ ಶಿಕ್ಷಣ ಮಂತ್ರಿಗಳಿಗೂ ಮನವರಿಕೆ ಮಾಡಲು ಯತ್ನಿಸಲಾಗಿದೆ. ಆದರೂ ಉದ್ದೇಶಿತ ತಿದ್ದುಪಡಿ ವಿಧೇಯಕದಲ್ಲಿ ಕನ್ನಡ ವಿಶ್ವವಿದ್ಯಾಲಯವನ್ನು ಸೇರಿಸಲಾಗಿದೆ. ಈ ಹಠಮಾರಿತನ ಆಘಾತಕಾರಿಯಾಗಿದೆ. ಕನ್ನಡ ವಿಶ್ವವಿದ್ಯಾಲಯದ ವಿಶಿಷ್ಟ ಸ್ಥಾನಮಾನವನ್ನು ಹೀಗೆ ಕೊನೆಗೊಳಿಸುವ ಮುನ್ನ ಈ ಹಿಂದೆ ಕೆಲಸ ಮಾಡಿದ ವಿಶ್ರಾಂತ ಕುಲಪತಿಗಳನ್ನಾಗಲಿ, ಕನ್ನಡ ನಾಡಿನ ಹಿರಿಯ ಚಿಂತಕರನ್ನಾಗಲಿ, ವಿಶ್ವವಿದ್ಯಾಲಯವನ್ನಾಗಲಿ ಸಂಪರ್ಕಿಸಿಲ್ಲ. ಅವರ ಅಭಿಪ್ರಾಯ ಪಡೆದಿರುವುದಿಲ್ಲ. ಈ ತಿದ್ದುಪಡಿಯಾದಲ್ಲಿ, ಮುಂಬರುವ ದಿನಗಳಲ್ಲಿ ರಾಜಕೀಯ ಮುಖಂಡರ ಹಾಗೂ ಅಧಿಕಾರಶಾಹಿಗಳ ಮರ್ಜಿಗೆ ಅನುಗುಣವಾಗಿ ಸಂಶೋಧನೆ ಮಾಡುವ ದುಃಸ್ಥಿತಿ ನಿರ್ಮಾಣವಾಗುತ್ತದೆ. ಇದೊಂದು ಕನ್ನಡ ವಿರೋಧಿ ನಿಲುವಾಗಿದೆ. ದಯವಿಟ್ಟು ಕರಾವಿ ವಿಧೇಯಕದಲ್ಲಿ ಕನ್ನಡ ವಿಶ್ವವಿದ್ಯಾಲಯವನ್ನು ಸೇರಿಸಬಾರದು; ತಿದ್ದುಪಡಿ ವಿಧೇಯಕದಿಂದ ಅದನ್ನು ಕೈಬಿಡಬೇಕು. ಹಿಂದಿನಂತೆ ಅದಕ್ಕಿದ್ದ ವಿಶಿಷ್ಟ ಸ್ಥಾನಮಾನವನ್ನು ಮುಂದುವರೆಸಬೇಕು ಎಂದು ಮುಖ್ಯಮಂತ್ರಿಯವರಲ್ಲಿ ಕೋರುತ್ತೇವೆ. ತಪ್ಪಿದಲ್ಲಿ ಈ ಹಿಂದೆ ಕನ್ನಡ ವಿಶ್ವವಿದ್ಯಾಲಯದ ಭೂಮಿಯನ್ನು ರಕ್ಷಿಸಿಕೊಳ್ಳಲು ಮಾಡಿದ ಹೋರಾಟವನ್ನು ಮಾಡುವುದು ಅನಿವಾರ್ಯವಾಗುವುದು. ಈ ಹಿನ್ನೆಲೆಯಲ್ಲಿ ಕನ್ನಡ ವಿವಿ ಸ್ವಾಯತ್ತತೆ ಉಳಿಸಿ ಹೋರಾಟ ಸಮಿತಿಯು ಮುಖ್ಯಮಂತ್ರಿಯವರಿಗೆ ಅರ್ಪಿಸಲಿರುವ ಮನವಿಯನ್ನು ಮಾನ್ಯ ಕುಲಪತಿಯವರಿಗೆ ನೀಡಿತು. ಮನವಿ ಅರ್ಪಿಸಿದ ಬಳಿಕ ಸಾಂಕೇತಿಕವಾಗಿ ಧರಣಿಯನ್ನು ಮಾಡಿತು.

23116806_10208665614912839_939513798942763598_o23004850_10208665614952840_2275166299687449175_o

 

ಕನಕದಾಸ ಜಯಂತಿ ಪ್ರಯುಕ್ತ  ಕನಕದಾಸರ ಮುಂಡಿಗೆಗಳು- ವಿಶೇಷ ಉಪನ್ಯಾಸ ಹಾಗೂ ಕೀರ್ತನೆಗಳ ಗಾಯನ

ಕನಕದಾಸ ಜಯಂತಿ ಪ್ರಯುಕ್ತ
ಕನಕದಾಸರ ಮುಂಡಿಗೆಗಳು- ವಿಶೇಷ ಉಪನ್ಯಾಸ ಹಾಗೂ
ಕೀರ್ತನೆಗಳ ಗಾಯನ

ಮಾನವತ್ವದ ಮುಂದೆ ದೈವತ್ವ ಏನೂ ಅಲ್ಲ ಎಂದು ಕನಕದಾಸರು ಹೇಳಿದ್ದಾರೆ. ಜನಸಾಮಾನ್ಯರಿಗೆ ತತ್ವ ಬೋಧಿಸಲು ಕನಕದಾಸರು ಮುಂಡಿಗೆಗಳನ್ನು ಬಳಸಿದ್ದಾರೆ ಎಂದು ಗದಗಿನ ವಿಶ್ರಾಂತ ಪ್ರಾಧ್ಯಾಪಕರಾದ ಡಾ.ಸಿದ್ಧಣ್ಣ ಎಫ್. ಜಕಬಾಳ ಅವರು ತಿಳಿಸಿದರು.
ಕನ್ನಡ ವಿಶ್ವವಿದ್ಯಾಲಯ ಹಾಲುಮತ ಅಧ್ಯಯನ ಪೀಠವು ದಿನಾಂಕ ೬.೧೧.೨೦೧೭ರಂದು ಭುವನವಿಜಯ ಸಭಾಂಗಣದಲ್ಲಿ ಕನಕದಾಸರ ೫೦೦ನೇ ಜಯಂತಿಯ ಪ್ರಯುಕ್ತ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಹಾಗೂ ಕೀರ್ತನೆಗಳ ಗಾಯನ ಕಾರ್ಯಕ್ರಮದಲ್ಲಿ ಕನಕದಾಸರ ಮುಂಡಿಗೆಗಳು ವಿಷಯ ಕುರಿತು ವಿಶೇಷ ಉಪನ್ಯಾಸ ನೀಡುತ್ತಿದ್ದರು.
ಸಂಗ್ರಹವಾಗಿರುವ ೫೦ ಮುಂಡಿಗೆಗಳಲ್ಲಿ ಪೌರಾಣಿಕ ಮುಂಡಿಗೆಗಳು ನಿಗೂಢ ಮುಂಡಿಗೆಗಳು, ಅನುಭಾವ ಮುಂಡಿಗೆಗಳು ಇವೆ. ವಚನ ಸಾಹಿತ್ಯದಲ್ಲಿರುವ ಬೆಡಗಿನ ರೀತಿ ದಾಸ ಸಾಹಿತ್ಯದಲ್ಲಿ ಮುಂಡಿಗೆಗಳಿವೆ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಒಗಟು, ಬೆಡಗು ಇವುಗಳ ಮುಂದಿನ ರೂಪ ಮುಂಡಿಗೆ. ಪದವೊಂದೇ ಇದ್ದರೂ ಬೇರೆ ಬೇರೆ ಅರ್ಥ ಕೊಡುವುದೇ ಬೆಡಗು, ಮುಂಡಿಗೆ. ಮುಳ್ಳ ಮೊನಿ ಮೇಲೆ ಮೂರು ತೆರಿಕಟ್ಟಿ ಎರಡು ತುಂಬಲೇ ಇಲ್ಲ ಒಂದು ತುಂಬೇ ಇಲ್ಲ ಎಂದು ನಿಗೂಢ ಮುಂಡಿಗೆಗೆ ಉದಾಹರಣೆ ನೀಡಿದರು. ಶಿವ ಎಂಬ ಪದಕ್ಕೆ ಸಮುದ್ರ, ನೀರು, ಪರ್ವತ, ಬ್ರಹ್ಮ ಹಾಗೂ ಹರಿ ಪದಕ್ಕೆ ಇಂದ್ರ, ಸೂರ್ಯ, ನಾರಾಯಣ, ಸಿಂಹ, ವಾನರ ಎಂಬ ಅರ್ಥಗಳಿವೆ. ಅಲ್ಲದೆ ಸವಾಲು ಜವಾಬು, ಡೊಳ್ಳಿನ ಹಾಡುಗಳಲ್ಲಿ ಮುಂಡಿಗೆಗಳು ಸಿಗುತ್ತವೆ. ಮುಂಡಿಗೆಯ ಪಲ್ಲವಿಗಳ ಅರ್ಥ ಸ್ಪಷ್ಟವಾದರೆ ಮುಂದಿನ ಸಾಲುಗಳ ಅರ್ಥ ತಿಳಿಯುತ್ತದೆ. ದಶಾವತಾರಗಳ ಬಗ್ಗೆ ಸ್ಪಷ್ಟತೆ ಇದ್ದರೆ ಪೌರಾಣಿಕ ಮುಂಡಿಗೆಗಳು ಅರ್ಥವಾಗುತ್ತವೆ ಭವ, ಭಯ, ವಿನಾಶ ಭೋ- ಇದು ಒಗಟಿನ ರೂಪದ ಮುಂಡಿಗೆಯಾಗಿದೆ ಎಂದು ತಿಳಿಸುತ್ತ, ಜಾನಪದರು ದೃಶ್ಯವನ್ನು ಕಟ್ಟಿ ಕೊಡುವುದರಲ್ಲಿ ನಿಸ್ಸೀಮರು. ಜನಸಾಮಾನ್ಯರಲ್ಲಿ ಬೆಳೆದ ಕನಕದಾಸರು ಹರಿಭಕ್ತಿಸಾರ, ನಳಚರಿತ್ರೆ, ಮೋಹನ ತರಂಗಿಣ, ರಾಮಧಾನ್ಯ ಚರಿತೆ ಅಲ್ಲದೆ ಮುಂಡಿಗೆಗಳನ್ನು ರಚಿಸಿ ಪಂಡಿತಕವಿ, ದಾರ್ಶನಿಕ ಕವಿ, ಜನಪದ ಕವಿಯಾಗಿ, ದಾಸರೊಳಗೆ ದಾಸರಾಗಿದ್ದಾರೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಕುಲಸಚಿವರಾದ ಡಾ. ಡಿ. ಪಾಂಡುರಂಗಬಾಬು ಅವರು ಮಾತನಾಡಿ ಸಮಾನತೆಯ ಪ್ರತಿಪಾದಕರಾದ ಕನಕದಾಸರು ಯಾವುದೇ ಸಮುದಾಯಕ್ಕೆ ಸೇರಿಲ್ಲದ, ಜಾತ್ಯಾತೀತರು. ಇವರನ್ನು ನಿರ್ದಿಷ್ಟ ಸಮುದಾಯಕ್ಕೆ ಸೀಮಿತಗೊಳಿಸಲಾಗಿದೆ. ಇದು ಕನಕದಾಸರ ಆಶಯಗಳಿಗೆ ವಿರುದ್ಧವಾಗಿದ್ದು ಆತಂಕಕಾರಿಯಾಗಿದೆ. ಬದಲಾಗಿ ಅವರನ್ನು ಸಾಮಾಜೀಕರಣ ಗೊಳಿಸಬೇಕು. ಕೊಡುಕೊಳ್ಳುವಿಕೆ ಆಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಮಾನ್ಯಕುಲಪತಿಯವರಾದ ಡಾ.ಮಲ್ಲಿಕಾ ಎಸ್. ಘಂಟಿ ಅವರು ಕನಕದಾಸರು ತಮ್ಮ ಪ್ರತಿರೋಧಗಳನ್ನು ನಿಗೂಢವಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ. ಸಾಮಾಜಿಕ ಜವಾಬ್ದಾರಿಗಳನ್ನು ನಿರ್ವಹಿಸುವ ಒಳ ಒತ್ತಡಗಳಿಂದ ಪ್ರತಿಮೆ ಮತ್ತು ಸಾಂಕೇತಿಕವಾಗಿ ಮಾತಾಡಲು ಪ್ರಯತ್ನಿಸಿದ್ದಾರೆ. ಆ ಕಾಲದಲ್ಲಿ ಇಂತಹ ಬಿಕ್ಕಟ್ಟುಗಳು ಯಾಕೆ ಹುಟ್ಟಿದವು ಎಂದು ಈಗ ಹೊಸ ಓದಿನ ಮೂಲಕ ನೋಡಬೇಕಾಗಿದೆ.
ಇಂದಿಗೂ ಮುಂಡಿಗೆಯ ಭಾಷೆಯಲ್ಲಿ ಜಾತಿ ವ್ಯವಸ್ಥೆ ಬಲಿಷ್ಠವಾಗಿ ಛಾಸಿಗೊಳಿಸುತ್ತಿದೆ. ಇದನ್ನು ಕಾಲದ ಸತ್ಯ ಮತ್ತು ವೈಜ್ಞಾನಿಕ ಪರೀಕ್ಷೆಗಳಿಗೆ ಒಳಪಡಿಸಿಕೊಳ್ಳಬೇಕಾದ ತುರ್ತು ಇದೆ. ಬಾಗಿಲನು ತೆರೆದು ಸೇವೆಯನು ಕೊಡುಹರಿಯೇ ಎನ್ನುವ ಕೀರ್ತನೆಯು ವ್ಯಕ್ತಪಡಿಸುವ ಆರ್ದ್ರತೆ ಇಂತಹ ನೋವನ್ನು ಅನುಭವಿಸಿದವರಿಗೆ ಮಾತ್ರ ಕನಕದಾಸ ಅರ್ಥವಾಗುತ್ತಾನೆ. ಆಧ್ಯಾತ್ಮಿಕ ಮತ್ತು ಧಾರ್ಮಿಕ ಸಂಗತಿಗಳಿಗೆ ಕನಕದಾಸರು ಕೈ ಹಾಕಿದಾಗ ವೈದಿಕಶಾಹಿಯು ಬೆಚ್ಚಿಬಿದ್ದಿತು. ಆಗ ಕನಕರಿಗೆ ತೊಂದರೆಗಳು ಶುರು ಆದವು ಎಂದು ಕೀರ್ತನೆಗಳಿಂದ ತಿಳಿಯುತ್ತದೆ. ಇಂದು ಜಾತಿ ವ್ಯವಸ್ಥೆ ಮುಂದುವರೆಸುವ ಸಲುವಾಗಿ ಮಾನವೀಯತೆಯನ್ನು ನಿಕೃಷ್ಟವಾಗಿ ಕಾಣಲಾಗುತ್ತಿದೆ. ಇದರ ಹಿಂದಿನ ಮರ್ಮ ಅರ್ಥಮಾಡಿಕೊಳ್ಳಬೇಕು. ಜ್ಯಾತಿವ್ಯವಸ್ಥೆಯ ಅಹಂಕಾರಗಳು ಇಂದಿಗೂ ನಿರಸನ ಆಗಿಲ್ಲ. ಕನಕದಾಸರಾದಿಯಾಗಿ ಎಲ್ಲ ಸಮಾಜ ಸುಧಾರಕರಿಗೆ ಇರುವ ಕಾಳಜಿ ನಮಗೂ ಇದ್ದರೆ ಈ ಜ್ಯಾತಿವ್ಯವಸ್ಥೆ ನಾಶವಾಗುತ್ತಿತ್ತು ಎಂದು ಹೇಳಿದರು.
ಇಡೀ ಚರಿತ್ರೆಯನ್ನು ಸೂಕ್ಷ್ಮವಾಗಿ ನೋಡಿದರೆ ಎಲ್ಲಿಯೂ ಪುರೋಹಿತ ಶಕ್ತಿಯನ್ನು ಕೊಲ್ಲುವ ಉದಾಹರಣೆಗಳಿಲ್ಲ. ಪುರಾಣಗಳನ್ನು ವೈಚಾರಿಕ ಪ್ರಜ್ಞೆಯಿಂದ ಓದುವ ಪ್ರಯತ್ನ ಮಾಡಿದರೆ ಅಲ್ಲಿ ಇರುವ ಜ್ಯಾತಿಸಂಘರ್ಷ ಮೇಲು, ಕೀಳು, ಅಸಮಾನತೆಗಳು ತಿಳಿಯುತ್ತವೆ. ಪುರಾಣಗಳನ್ನು ಮರುಪ್ರಶ್ನಿಸಬೇಕು. ಸಂವಿಧಾನವನ್ನು ಸೂಕ್ಷ್ಮವಾಗಿ ಗಮನಿಸಿದರೆ ಕನಕದಾಸರು, ಶರಣರು, ಸರ್ವಜ್ಞರು ಇದ್ದಾರೆ. ಅದನ್ನು ನೋಡುವ ಬಗೆ ನಮಗೆ ಗೊತ್ತಾಗುತ್ತಿಲ್ಲ ಎಂದು ಕುಲಪತಿಯವರು ನುಡಿದರು.
ನಂತರ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅನುದಾನದಿಂದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ೧೬ ಪುಸ್ತಕಗಳ ೫೦ ಕಟ್ಟುಗಳನ್ನು ಸಂಶೋಧನಾ ವಿದ್ಯಾರ್ಥಿಗಳಾದ ಗೀತಾಬಾಯಿ ಬಡಿಗೇರ, ಶಿಲ್ಪ, ನಾಗಪ್ಪ, ನವೀನಕುಮಾರ ಇವರಿಗೆ ವೇದಿಕೆಯಲ್ಲಿ ಸಾಂಕೇತಿಕವಾಗಿ ವಿತರಿಸಿದರು. ವೈಚಾರಿಕ ತಿಳುವಳಿಕೆಯಿಂದ ಜಗತ್ತನ್ನು ನೋಡುವ ಶಕ್ತಿಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಕಾಲಕ್ಕನುಗುಣವಾಗಿ ಶೈಕ್ಷಣಿಕ ಬೆಳವಣಿಗೆಗೆ ಕೊಡುವ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಬಳಸಿಕೊಂಡು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಸರ್ವಸಿದ್ಧತೆ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಐ.ಎ.ಎಸ್. ಮತ್ತು ಕೆ.ಎ.ಎಸ್. ಅಧಿಕಾರಿಗಳಾಗಿ ಬರುವಂತಾಗಬೇಕು. ಕನಕರ ಸಾಮಾಜಿಕ ನ್ಯಾಯ ವಿದ್ಯಾರ್ಥಿಗಳಿಗೆ ಶಕ್ತಿ ತುಂಬಲಿ ಎಂದು ಆಶಯ ವ್ಯಕ್ತಪಡಿಸಿದರು.
ಪೀಠದ ಸಂಚಾಲಕರಾದ ಡಾ.ಎಫ್.ಟಿ.ಹಳ್ಳಿಕೇರಿ ಅವರು ಸ್ವಾಗತಿಸಿ, ಪ್ರಾಸ್ತಾವಿಕ ನುಡಿದು ಡಾ.ಜಕಬಾಳ ಅವರನ್ನು ಪರಿಚಯಿಸಿದರು. ಶ್ವೇತಾ ನಿರೂಪಿಸಿದರು. ಬಾಣದ ಮಂಜುನಾಥ ವಂದಿಸಿದರು. ಸಂಗೀತ ಮತ್ತು ನೃತ್ಯ ವಿಭಾಗದ ಅಧ್ಯಾಪಕರು, ವಿದ್ಯಾರ್ಥಿಗಳು ಕನಕದಾಸರ ಕೀರ್ತನೆಗಳನ್ನು ಗಾಯನ ಮಾಡಿದರು. ವೇದಿಕೆಯ ಮೇಲಿದ್ದ ಗಣ್ಯರು ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಕಾರ್ಯಕ್ರಮದಲ್ಲಿ ಹೊಸಪೇಟೆಯ ಹಾಲುಮತ ಸಾಂಸ್ಕೃತಿಕ ವೇದಿಕೆಯ ಪದಾಧಿಕಾರಿಗಳು, ನಾಗರಿಕರು, ವಿಶ್ವವಿದ್ಯಾಲಯದ ಡೀನರು, ಅಧ್ಯಾಪಕರು, ಅಧಿಕಾರಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು

 

23270262_10208688266559116_4460216275506151016_o23334181_10208688266519115_377252903545077209_o23215700_10208688267559141_7341773265081814545_o

ಕನ್ನಡ ವಿಶ್ವವಿದ್ಯಾಲಯದ ಬೆಳ್ಳಿಹಬ್ಬ ೨೫ರ ಪ್ರಯುಕ್ತ ೧೫.೯.೨೦೧೭ರಂದು ಮಂಟಪ ಸಭಾಂಗಣದಲ್ಲಿ ಏರ್ಪಡಿಸಿದ್ದ ಉನ್ನತ ಶಿಕ್ಷಣ: ಸಾಧ್ಯತೆ ಸವಾಲುಗಳು ವಿಚಾರಸಂಕಿರಣ

ಕನ್ನಡ ವಿಶ್ವವಿದ್ಯಾಲಯದ ಬೆಳ್ಳಿಹಬ್ಬ ೨೫ರ ಪ್ರಯುಕ್ತ ೧೫.೯.೨೦೧೭ರಂದು
ಮಂಟಪ ಸಭಾಂಗಣದಲ್ಲಿ ಏರ್ಪಡಿಸಿದ್ದ ಉನ್ನತ ಶಿಕ್ಷಣ: ಸಾಧ್ಯತೆ ಸವಾಲುಗಳು ವಿಚಾರಸಂಕಿರಣದ
ಪತ್ರಿಕಾ ವರದಿ

ಕನ್ನಡ ವಿಶ್ವವಿದ್ಯಾಲಯದ ಬೆಳ್ಳಿಹಬ್ಬ ೨೫ರ ಪ್ರಯುಕ್ತ ೧೫.೯.೨೦೧೭ರಂದು
ಮಂಟಪ ಸಭಾಂಗಣದಲ್ಲಿ ಏರ್ಪಡಿಸಿದ್ದ ಉನ್ನತ ಶಿಕ್ಷಣ: ಸಾಧ್ಯತೆ ಸವಾಲುಗಳು ವಿಚಾರಸಂಕಿರಣದ
ಪತ್ರಿಕಾ ವರದಿ.

ಖಾಸಗಿ ಶಿಕ್ಷಣವು ರೋಗಗ್ರಸ್ತ ವೈರಲ್ ಆಗಿ ಬೆಳೆದಿದೆ. ಬ್ಯೂರೋಕ್ರಸಿಯ(ಅಧಿಕಾರಶಾಹಿ) ಖಾಸಗಿ ಪರವಾದ ಒಲವು, ಮೋಹ ಇದಕ್ಕೆ ಕಾರಣವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಪ್ರೊ. ಎಸ್.ಜಿ.ಸಿದ್ಧರಾಮಯ್ಯ ಅವರು ನುಡಿದರು.
ಕನ್ನಡ ವಿಶ್ವವಿದ್ಯಾಲಯದ ಬೆಳ್ಳಿಹಬ್ಬ ೨೫ರ ಪ್ರಯುಕ್ತ ೧೫.೯.೨೦೧೭ರಂದು ಮಂಟಪ ಸಭಾಂಗಣದಲ್ಲಿ ಏರ್ಪಡಿಸಿದ್ದ ಉನ್ನತ ಶಿಕ್ಷಣ: ಸಾಧ್ಯತೆ ಸವಾಲುಗಳು ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಂತ್ರಜ್ಞಾನ ಬಳಕೆಯಿಂದ ಹಿಡಿದು ಪಠ್ಯ ಬೋಧನೆ, ಸಂಶೋಧನಾ ಸೂಕ್ಷ್ಮತೆಯವರೆಗೆ ಅನೇಕ ಪಲ್ಲಟಗಳಾಗಿವೆ. ಆತಂಕಗಳ ಸೃಷ್ಟಿಯಾಗಿವೆ. ಪ್ರಾಥಮಿಕ ಶಿಕ್ಷಣ ಅನೇಕ ಸಮಸ್ಯೆ, ಸವಾಲುಗಳನ್ನು ಎದುರಿಸುತ್ತಿದೆ. ಶಿಕ್ಷಣವು ಮೂಲಭೂತ ಹಕ್ಕಾಗಿದೆ. ಕಡ್ಡಾಯ ಶಿಕ್ಷಣವಾಗಿದೆ. ಉಚಿತ ಶಿಕ್ಷಣವಾಗಿದೆ. ಆದರೂ ಗುಣಾತ್ಮಕ ಶಿಕ್ಷಣದಲ್ಲಿ ಹಿಂದೆ ಉಳಿದಿರುವುದರಿಂದ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಆಗ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿಲ್ಲ ಎಂದು ಹಬ್ಬಿಸಲಾಗುತ್ತದೆ. ಮುಚ್ಚಿದ ಮತ್ತು ವಿಲೀನಗೊಂಡ ಶಾಲೆಗಳ ಸ್ಥಳದಲ್ಲಿ ಖಾಸಗಿ ಶಾಲೆಗಳು ತಲೆಯೆತ್ತುತ್ತವೆ ಎಂದು ತಿಳಿಸಿದರು.
ಅಸಮಾನತೆ ತುಂಬಿರುವ ಪ್ರಾಥಮಿಕ ಶಿಕ್ಷಣದಲ್ಲಿ ಬದಲಾವಣೆ ಬೇಕು. ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಖಾಸಗಿ ಶಾಲೆಗಳಲ್ಲಿ ಮಕ್ಕಳು ಅತ್ಮಹತ್ಯೆ ಮಾಡಿಕೊಳ್ಳುವುದು ಕಂಡುಬರುತ್ತದೆ. ಅಂಕ ಗಳಿಕೆಯ ಸ್ಪರ್ಧೆಯಲ್ಲಿ ಆತ್ಮವಿಶ್ವಾಸವಿಲ್ಲದೇ ಮುಖಹೇಡಿಗಳಾಗಿ ಬದುಕು ಎದುರಿಸದೇ ಸಾವಿಗೆ ಮೊರೆ ಹೋಗುತ್ತಾರೆ. ಸರ್ಕಾರಿ ಶಾಲೆಯ ಮಕ್ಕಳು ಬದುಕಿನ ಎಲ್ಲ ರೀತಿಯ ಸವಾಲುಗಳಿಗೆ ಮುಖಾಮುಖಿಯಾಗುತ್ತಾರೆ. ಅವರ ಗ್ರಹಣ ಶಕ್ತಿಯು ಉತ್ತಮವಾಗಿರುತ್ತದೆ. ಇಂದು ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಕಳೆದು ಹೋಗುತ್ತಿರುವಾಗ ಉನ್ನತ ಶಿಕ್ಷಣದಲ್ಲಿ ಹೇಗೆ ಕಾಣಿಸುತ್ತದೆ ಎಂದು ಪ್ರಶ್ನಿಸುತ್ತ ಕುವೆಂಪು ಅವರು ಕುಲಪತಿಗಳಾಗಿದ್ದಾಗ ಹೇಳಿದ್ದ ಬೋಧನಾಂಗ, ಸಂಶೋಧನಾಂಗ, ಪ್ರಸಾರಾಂಗ ಈ ಮೂರರ ಬಹುದೊಡ್ಡ ಜವಾಬ್ದಾರಿ ಹೊತ್ತ ಕನ್ನಡ ವಿಶ್ವವಿದ್ಯಾಲಯವು ಬಹಳ ವಿಸ್ತಾರವಾದ ಮುನ್ನೋಟ ಹೊಂದಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಕ್ಲಸ್ಟರ್ ವಿಶ್ವವಿದ್ಯಾಲಯದ ವಿಶೇಷಾಧಿಕಾರಿಗಳಾದ ಡಾ. ರವೀಂದ್ರ ರೇಷ್ಮೆ ಅವರು ವಿಷಯ ವಿಸ್ತರಣೆ ಮಾಡುತ್ತ ಕಾನ್ವೆಂಟ್‌ಗಳು ಶಿಕ್ಷಣವಲಯದಲ್ಲಿ ವಿಶೇಷ ಆಕರ್ಷಣೆಗಳಾಗಿವೆ. ಈ ಭಾವನೆ ಜನರ ಮನಸ್ಥಿತಿಯಿಂದ ದೂರವಾಗಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯ ಬಳಸಿಕೊಳ್ಳದೇ ಇರುವುದರಿಂದ ಉನ್ನತ ಶಿಕ್ಷಣ ಈಗಿರುವ ಸ್ಥಿತಿಯನ್ನು ತಲುಪಿದೆ. ಉನ್ನತ ಶಿಕ್ಷಣ ಪರಿಷತ್ತಿಗೆ ಸದಸ್ಯರಾಗಲು ಕೇವಲ ಹಿರಿತನ ಮಾತ್ರ ಮಾನದಂಡವಾಗಬಾರದು. ವಿವಿಧ ತಲೆಮಾರುಗಳ ಅಧ್ಯಾಪಕರ ಆಶಯಗಳು ಅಲ್ಲಿ ಬಿಂಬಿತವಾಗಬೇಕು. ಜ್ಞಾನ ಆಯೋಗದಲ್ಲಿ ಶಿಕ್ಷಕರ ಪ್ರಾತಿನಿಧ್ಯಕ್ಕಿಂತ ಕಾರ್ಪೋರೇಟರ್‌ಗಳ ಪ್ರಾತಿನಿಧ್ಯ ಹೆಚ್ಚಿನ ಸಂಖ್ಯೆಯಲ್ಲಿದೆ. ಪ್ರಪಂಚದಲ್ಲಿ ಭಾರತ ಮೂರನೇ ಜ್ಞಾನಾಧಾರಿತ ಶಕ್ತಿಯಾಗಿ ಹೊರಹೊಮ್ಮಿದೆ. ಜಾಗತಿಕ ಮಟ್ಟದ ಸ್ಪರ್ಧೆಯಲ್ಲಿ ಭಾರತೀಯ ವಿದ್ಯಾರ್ಥಿಗಳು ಗೆಲುವು ಸಾಧಿಸುತ್ತಿದ್ದಾರೆ. ಇದನ್ನು ಅಮೇರಿಕಾದ ಮಾಜಿ ಅಧ್ಯಕ್ಷರಾದ ಒಬಾಮ ಅವರು ಗಮನಿಸಿದ್ದರು ಎಂದು ತಿಳಿಸಿದರು. ಈಗ ಚರ್ಚಿತವಾಗುತ್ತಿರುವ ಕಾಮನ್ ಯೂನಿವರ್ಸಿಟಿ ಆಕ್ಟ್‌ಗೆ ಸಾರ್ವಜನಿಕ ಅಭಿಪ್ರಾಯ ಕೇಳಬಹುದಾಗಿತ್ತು ಎಂದರು.
ರೇಷ್ಮೆಯವರು ಕನ್ನಡ ವಿಶ್ವವಿದ್ಯಾಲಯ ಕುರಿತು ಯಾಕೆ ಕರ್ನಾಟಕದ ಬೇರೆ ಬೇರೆ ವಿಶ್ವವಿದ್ಯಾಲಯಗಳಲ್ಲಿರುವ ಕನ್ನಡ ಅಧ್ಯಯನ ಸಂಸ್ಥೆಗಳು ಕನ್ನಡ ವಿಶ್ವವಿದ್ಯಾಲಯವನ್ನು ತಮ್ಮ ತವರು ಮನೆ ಎಂದು ಭಾವಿಸುತ್ತಿಲ್ಲ? ಕನ್ನಡ ವಿಶ್ವವಿದ್ಯಾಲಯದ ಜೊತೆ ಯಾಕೆ ನಿರಂತರವಾದ ಸಂಪರ್ಕ ಸಾಧಿಸುತ್ತಿಲ್ಲ. ಯಾಕೆ ಸಾವಯವ ಸಂಬಂಧ ಇರಿಸಿಕೊಂಡಿಲ್ಲ. ಜಾನಪದ ವಿಶ್ವವಿದ್ಯಾಲಯ ಅಥವಾ ಸಂಗೀತ ವಿಶ್ವವಿದ್ಯಾಲಯವಾಗಲಿ ಕನ್ನಡ ವಿಶ್ವವಿದ್ಯಾಲಯವನ್ನು ಕನ್ನಡ ಭಾಷೆ ಮತ್ತು ಸಂಸ್ಕೃತಿ ವಿಶ್ವವಿದ್ಯಾಲಯ ಎಂದು ಪರಿಗಣಿಸಿ ಇಲ್ಲಿರುವ ವಿದ್ವಾಂಸರೊಂದಿಗೆ ಸಂಪರ್ಕ ಇರಿಸಿಕೊಂಡರೆ ಅದ್ಭುತ ಪವಾಡ ನಡೆಯುತ್ತದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.
ಪ್ರಾಧ್ಯಾಪಕರು ಮತ್ತು ಚಿಂತಕರಾದ ಡಾ. ಪೃಥ್ವಿದತ್ತ ಚಂದ್ರ ಶೋಭಿ ಅವರು ವಿಷಯ ವಿಸ್ತರಣೆ ಮಾಡುತ್ತ ಇಂದು ಶಿಕ್ಷಣ ವಲಯದಲ್ಲಿ ಯಾವ ರೀತಿಯ ಜ್ಞಾನ ಉತ್ಪಾದಿಸಬೇಕು ಎಂಬ ಸವಾಲನ್ನು ಎದುರಿಸಬೇಕಾಗಿದೆ. ಸಮಾನತೆ ಸಭ್ಯತೆ, ಆದರ್ಶ ಸಮಾಜವನ್ನು ಶಿಕ್ಷಣದ ಮೂಲಕ ಸಾಕಾರಗೊಳಿಸುವುದು ಸಾಧ್ಯವಾಗುತ್ತಿಲ್ಲ. ವಿಶ್ವವಿದ್ಯಾಲಯಗಳಲ್ಲಿ ಕಾಣುತ್ತಿರುವುದು ನೈತಿಕ ಅಧಃಪತನ ಮುಕ್ತ ಚಿಂತನೆ, ಸಮಾಜಮುಖಿ ಮನಸ್ಸನ್ನು ನಾವು ಕಳೆದುಕೊಂಡಿದ್ದೇವೆ. ಕರ್ನಾಟಕದ ವಿಶ್ವವಿದ್ಯಾಲಯಗಳು ಕಲಿಸುವ ಜ್ಞಾನಶಿಸ್ತುಗಳಿಗೂ ಜಾಗತಿಕವಾಗಿ ಕಲಿಸುವ ಜ್ಞಾನಶಿಸ್ತುಗಳಿಗೂ ಏನು ವ್ಯತ್ಯಾಸವಿದೆ ಎಂದು ಗಂಭೀರವಾಗಿ ಪ್ರಶ್ನೆ ಮಾಡಬೇಕಿದೆ, ಚರ್ಚಿಸಬೇಕಿದೆ. ವಿಶ್ವವಿದ್ಯಾಲಯಗಳಲ್ಲಿ ಹೊಸ ಜ್ಞಾನ ಸೃಷ್ಟಿಸುವ ಕೆಲಸ ಸಮರ್ಪಕವಾಗಿಲ್ಲ ಎಂದು ಹೇಳಿದರು.
ವಿಶ್ವವಿದ್ಯಾಲಯಗಳನ್ನು ಅಧ್ಯಾಪಕರು ತಮ್ಮ ಮುಷ್ಠಿಗೆ ವಾಪಾಸು ಪಡೆಯಬೇಕು. ವಿಶ್ವವಿದ್ಯಾಲಯಗಳು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ಸೇರಿವೆ. ಕಲಿಸುವ, ಕಲಿಯುವ ಹೊಸ ಜ್ಞಾನ ಸೃಷ್ಟಿಸುವ ಕೆಲಸ ಆಗಬೇಕು. ಇದನ್ನು ನಾವೇ ಆರಂಭಿಸಬೇಕು ಎಂದು ಕರೆ ನೀಡಿದರು.
ಪ್ರಾಧ್ಯಾಪಕರಾದ ಡಾ.ಕೆ.ವೈ. ನಾರಾಯಣಸ್ವಾಮಿ ಅವರು ವಿಷಯ ವಿಸ್ತರಣೆ ಮಾಡುತ್ತ ಕರ್ನಾಟಕದಲ್ಲಿ ೪೧೨ ಕಾಲೇಜುಗಳಿವೆ. ಶೇ.೫೭ರಷ್ಟು ಹೆಣ್ಣುಮಕ್ಕಳು ಹಾಗೂ ಶೇ.೪೩ರಷ್ಟು ಗಂಡುಮಕ್ಕಳು ಕಲಿಯುತ್ತಿದ್ದಾರೆ. ಸಾಮಾನ್ಯ ವರ್ಗದಿಂದ ಶೇ.೬ರಷ್ಟು, ಹಿಂದುಳಿದ ವರ್ಗಗಳಿಂದ ಶೇ.೫೮ರಷ್ಟು, ಪರಿಶಿಷ್ಟ ಜಾತಿಯಿಂದ ಶೇ.೨೧ರಷ್ಟು, ಪರಿಶಿಷ್ಟ ಪಂಗಡದಿಂದ ಶೇ.೭ರಷ್ಟು, ಅಲ್ಪಸಂಖ್ಯಾತರಿಂದ ಶೇ.೭ರಷ್ಟು ಕಲಿಯುತ್ತಿದ್ದಾರೆ. ಈ ಅಂಕಿ ಅಂಶಗಳು ಪ್ರಗತಿಸೂಚಕವಾಗಿವೆ. ಆದರೆ ನಾವು ಅನುಸರಿಸುತ್ತಿರುವ ಮೌಲ್ಯಮಾಪನ ವಿಧಾನದಲ್ಲಿ ಸಮಸ್ಯೆಯಿದೆ. ಇದನ್ನು ಪರಿಹರಿಸದೇ ಉನ್ನತ ಶಿಕ್ಷಣದಲ್ಲಿ ಸುಧಾರಣೆ ಸಾಧ್ಯವಿಲ್ಲ. ಮೌಲ್ಯಮಾಪನ ವ್ಯವಸ್ಥೆ ಸುಧಾರಿಸಲು ಯಾವ ಸುತ್ತೋಲೆಗಳು ಬಂದಿಲ್ಲ. ಬರುಬರುತ್ತ ಮಾನವಿಕ ವಿಷಯಗಳನ್ನು ಓದುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದೊಂದು ಗಂಭೀರ ಸಮಸ್ಯೆಯಾಗಿದೆ ಎಂದು ಅಂಕಿ ಅಂಶಗಳನ್ನು ಮುಂದಿಟ್ಟರು.
ಅಧ್ಯಕ್ಷತೆ ವಹಿಸಿ ಮಾನ್ಯಕುಲಪತಿಯವರಾದ ಡಾ.ಮಲ್ಲಿಕಾ ಎಸ್. ಘಂಟಿ ಅವರು ವೇದಿಕೆಯಲ್ಲಿದ್ದ ಗಣ್ಯರನ್ನು ಗೌರವಿಸಿ ಮಾತನಾಡುತ್ತ ಬೆಳ್ಳಿಹಬ್ಬದ ಪ್ರಯುಕ್ತ ಹಮ್ಮಿಕೊಂಡಿರುವ ೬ ವಿಚಾರಸಂಕಿರಣಗಳ ಪ್ರಬಂಧ ಮಂಡನೆಗಳನ್ನು ಪುಸ್ತಕ ರೂಪದಲ್ಲಿ ಹೊರ ತರಲಾಗುವುದು ಎಂದು ತಿಳಿಸುತ್ತ ಹಿಂದುಳಿದ ಮತ್ತು ಬಹುಸಂಖ್ಯಾತ ಜನವರ್ಗಗಳು ಈ ಮುಖ್ಯವಾಹಿನಿಯೊಳಗೆ ಪ್ರವೇಶ ಮಾಡಿದಾಗ ಪಟ್ಟಭದ್ರ ಹಿತಾಸಕ್ತಿಗಳು ವ್ಯವಸ್ಥೆಯನ್ನು ಶತಮಾನಗಳುದ್ದಕ್ಕೂ ಶಿಕ್ಷಣವನ್ನು ತಮ್ಮ ಸ್ವತ್ತನ್ನಾಗಿ ಮಾಡಿಕೊಂಡು ಬಂದಿರುವುದು ಉನ್ನತಶಿಕ್ಷಣದ ಬಿಕ್ಕಟ್ಟುಗಳಿಗೆ ಕಾರಣವಾಗಿದೆ. ನಮ್ಮ ಓದುವ ಮತ್ತು ಓದಿಸುವ ಸ್ವಾಯತ್ತತೆಯನ್ನು ಉಳಿಸಿಕೊಳ್ಳಬೇಕಿದೆ. ಏನನ್ನು ಓದಿಸಬೇಕು ಎಂದು ಆಲೋಚಿಸಬೇಕಾಗಿದೆ. ಅಧ್ಯಾಪಕರಿಗೆ ತರಗತಿಗಳಲ್ಲಿ ಪಾಠ ಮಾಡುವ ನಿರಾಳಸ್ಥಿತಿಯಿಲ್ಲ. ಇದಕ್ಕೆ ಮಾಹಿತಿ ತಂತ್ರಜ್ಞಾನದ ದುರುಪಯೋಗ ಮತ್ತು ಅದು ಸೃಷ್ಟಿಸುವ ಆತಂಕ ಕಾರಣವಾಗಿದೆ. ಆದ್ದರಿಂದ ಕ್ರಿಯಾಶೀಲ ವಿದ್ಯಾರ್ಥಿಗಳನ್ನು ರೂಪಿಸಲು ಅಧ್ಯಾಪಕರಿಗೆ ಸಾಧ್ಯವಾಗುತ್ತಿಲ್ಲ. ಈ ಸವಾಲುಗಳನ್ನು ಸಮುದಾಯದತ್ತವಾಗಿ ಹೇಗೆ ಎದುರಿಸಬೇಕು ಎಂಬುದು ಸವಾಲಾಗಿದೆ ಎಂದು ನುಡಿದರು.
ಡಾ.ಎ. ಸುಬ್ಬಣ್ಣ ರೈ ಅವರು ಸ್ವಾಗತಿಸಿದರು. ಡಾ. ಅಶೋಕಕುಮಾರ ರಂಜೇರೆ ಅವರು ಪ್ರಾಸ್ತಾವಿಕ ನುಡಿದರು. ಶ್ರೀ ಸೋಮೇಶ್ ಎಂ. ನಿರೂಪಿಸಿದರು. ಡಾ. ಕಲವೀರ ಮನ್ವಾಚಾರ ಅವರು ವಂದಿಸಿದರು. ಸಂಗೀತ ವಿಭಾಗದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವಿಚಾರಸಂಕಿರಣದಲ್ಲಿ ವಿಶ್ವವಿದ್ಯಾಲಯದ ಡೀನರು, ಆಹ್ವಾನಿತ ಗಣ್ಯರು, ಬೋಧಕ ವೃಂದ, ಆಡಳಿತ ವೃಂದ, ವಿದ್ಯಾರ್ಥಿಗಳು, ನಾಗರೀಕರು ಆಸಕ್ತಿಯಿಂದ ಭಾಗವಹಿಸಿದರು.
ಊಟದ ನಂತರ ಭುವನವಿಜಯದಲ್ಲಿ ಆರಂಭವಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕರ್ನಾಟಕ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿಯ ಅಧ್ಯಕ್ಷರಾದ ನಾಡೋಜ ಬೆಳಗಲ್ಲು ವೀರಣ್ಣ ಅವರು ಉದ್ಘಾಟಿಸಿದರು. ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದಿಂದ ತಾಳ ಮದ್ದಳೆ ಕಾರ್ಯಕ್ರಮ ನಡೆಯಿತು. ಹೊಸಪೇಟೆಯ ಭಾವೈಕ್ಯತಾ ವೇದಿಕೆಯವರು ಧನ್ವಂತರಿ ಚಿಕಿತ್ಸೆ ನಾಟಕವನ್ನು ಪ್ರದರ್ಶಿಸಿದರು.

21728757_10208400607487819_236760209348452347_o21731806_10208400621168161_3098373736374742545_o21740849_10208400619968131_7653625073561806875_o

 

ಕನ್ನಡ ವಿಶ್ವವಿದ್ಯಾಲಯದ ಬೆಳ್ಳಿಹಬ್ಬ-೨೫ ಸಾಮಾಜಿಕ, ರಾಜಕೀಯ ಕರ್ನಾಟಕ : ವರ್ತಮಾನ ಮತ್ತು ಭವಿಷ್ಯ ವಿಚಾರಸಂಕಿರಣ

ಕನ್ನಡ ವಿಶ್ವವಿದ್ಯಾಲಯದ ಬೆಳ್ಳಿಹಬ್ಬ-೨೫
ಸಾಮಾಜಿಕ, ರಾಜಕೀಯ ಕರ್ನಾಟಕ : ವರ್ತಮಾನ ಮತ್ತು ಭವಿಷ್ಯ ವಿಚಾರಸಂಕಿರಣದ
ಉದ್ಘಾಟನೆಯ ಪತ್ರಿಕಾ ವರದಿ- ೧೭.೯.೨೦೧೭

ವರ್ತಮಾನದ ಗರ್ಭದಿಂದಲೇ ಭವಿಷ್ಯತ್ತನ್ನು ಕಟ್ಟಿಕೊಳ್ಳಬಹುದು ಅದಕ್ಕಾಗಿ ನಮ್ಮೆಲ್ಲರ ದೃಷ್ಟಿಕೋನವನ್ನು ಒಟ್ಟಾಗಿಸಿ ಕೊಳ್ಳಬೇಕು ಎಂದು ಚಿಂತಕರು ಮತ್ತು ಹಿರಿಯ ಸಾಹಿತಿಗಳಾದ ಡಾ. ಚಂದ್ರಶೇಖರ ಪಾಟೀಲ ಅವರು ನುಡಿದರು.
ಕನ್ನಡ ವಿಶ್ವವಿದ್ಯಾಲಯದ ಬೆಳ್ಳಿಹಬ್ಬ ೨೫ರ ಪ್ರಯುಕ್ತ ೧೭.೯.೨೦೧೭ರಂದು ಮಂಟಪ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಾಮಾಜಿಕ, ರಾಜಕೀಯ ಕರ್ನಾಟಕ: ವರ್ತಮಾನ ಮತ್ತು ಭವಿಷ್ಯ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಸ್ಯೆಗಳು ಒಂದನ್ನೊಂದು ಅವಲಂಬಿಸಿರುವ ಪರಿಸ್ಥಿತಿಯಲ್ಲಿ ಬಿಡಿಬಿಡಿಯಾಗಿ ವಿಶ್ಲೇಷಣೆ ಮಾಡಲಾಗುವುದಿಲ್ಲ. ವೈಚಾರಿಕ ದೃಷ್ಟಿಕೋನದಿಂದ ನಿನ್ನೆಯ ವಿದ್ಯಮಾನಗಳನ್ನು ಗಮನಿಸಬೇಕು. ನಮ್ಮೊಂದಿಗೆ ಪ್ರಪಂಚದ ಅನೇಕ ರಾಷ್ಟ್ರಗಳು ಸ್ವಾತಂತ್ರ್ಯ ಮತ್ತು ಸಾರ್ವಭೌಮತ್ವವನ್ನು ಪಡೆದವು. ಆದರೆ ಆ ರಾಷ್ಟ್ರಗಳಲ್ಲಿ ಪ್ರಜಾಪ್ರಭುತ್ವ, ಸ್ವಾತಂತ್ರ್ಯ ಉಳಿದಿಲ್ಲ. ಭಾರತದಲ್ಲಿ ಮಾತ್ರ ಇವೆರಡೂ ಇದ್ದು ಚುನಾವಣೆಗೆ ಆಯ್ಕೆಗೆ ಅವಕಾಶವಿದೆ. ಇಂದು ಪರಿಸ್ಥಿತಿ ಬದಲಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಗೆಲುವು ಸಾಧಿಸಲು ಸುರಕ್ಷಿತ ಕ್ಷೇತ್ರವನ್ನು ಹುಡುಕಬೇಕಾಗಿದೆ. ಇದು ಪ್ರಜಾಪ್ರಭುತ್ವದ ಒಂದು ದೊಡ್ಡ ಸಾಧನೆಯಾಗಿದೆ. ಇಂದು ರಾಜಕೀಯವು ಪ್ರತಿ ಹಳ್ಳಿ ಹಳ್ಳಿಗಳ ಮನೆ ಮನೆಗಳಲ್ಲಿ, ಪಂಚಾಯತ್‌ಗಳಲ್ಲಿ, ಚಾವಡಿ ಕಟ್ಟೆಗಳಲ್ಲಿ ಚರ್ಚಿತವಾಗುತ್ತಿರುವುದು ಧನಾತ್ಮಕವಾದ ಬಹುದೊಡ್ಡ ಬೆಳವಣಿಗೆಯಾಗಿದೆ ಎಂದು ನುಡಿದರು.
ಕರ್ನಾಟಕದ ವರ್ತಮಾನ ಕುರಿತು ಮಾತನಾಡುತ್ತ ಎಲ್ಲ ರಾಜಕೀಯ ಪಕ್ಷಗಳಿಗ ಪ್ರಣಾಳಿಕೆ ಅಪ್ರಸ್ತುತವಾಗಿದೆ. ಅಧಿಕಾರ ಗ್ರಹಣವೇ ಮುಖ್ಯ ಪ್ರಣಾಳಿಕೆಯಾಗಿದೆ. ಕಟುವಾಸ್ತವದಲ್ಲಿ ಮುಂಬರುವ ಚುನಾವಣೆಯಲ್ಲಿ ರಾಜಕೀಯ, ಸಾಮಾಜಿಕ ದೃಷ್ಟಿಯಿಂದ ನಿರ್ಣಾಯಕವಾದ ಚುನಾವಣೆಯಾಗಿದೆ. ಕೋಮುವಾದಿ ಶಕ್ತಿಗಳು ಬೇಕೇ ಅಥವಾ ಜಾತ್ಯಾತೀತ ಶಕ್ತಿಗಳು ಬೇಕೆ ಎನ್ನುವ ಆಯ್ಕೆ ನಮ್ಮ ಮುಂದಿದಿದೆ. ಪ್ರಜ್ಞಾಪೂರ್ವಕವಾಗಿ ಆಯ್ಕೆ ಮಾಡಬೇಕಾಗಿದೆ. ಜಾತ್ಯಾತೀತ ಮೌಲ್ಯಗಳಲ್ಲಿ ನಂಬಿಕೆ ಇರುವ ರಾಜಕಾರಣ ಕರ್ನಾಟಕಕ್ಕೆ ಬೇಕಾಗಿದೆ ಎಂದು ಕಳಕಳಿಯಿಂದ ನುಡಿದರು.
ಬಸವತತ್ತ್ವಗಳ ಸುತ್ತ ಬಲಾಢ್ಯ ಸಮುದಾಯಗಳು ಒಂದಾಗಿ ಸಾವಿರಾರು ವರ್ಷಗಳ ವೈದಿಕ ತತ್ವಗಳು ಬೇಡ ಎಂದು ಜನಾಭಿಪ್ರಾಯ ರೂಪಿಸುತ್ತಿರುವುದು ಹೊಸ ಬೆಳವಣಿಗೆಯ ಆರಂಭವಾಗಿದೆ. ಸೈದ್ಧಾಂತಿಕ ತಾತ್ವಿಕ ನೆಲೆಯೊಳಗೆ ಧ್ರುವೀಕರಣಗೊಂಡು ಸಾವಿರಾರು ವರ್ಷಗಳ ವೈದಿಕ ಸಂಸ್ಕೃತಿಗೆ ದೊಡ್ಡ ಹೊಡೆತ ಕೊಡುವ ಕಾಲಘಟ್ಟದಲ್ಲಿ ನಾವಿದ್ದೇವೆ. ಈ ಹಿನ್ನೆಲೆಯಲ್ಲಿ ವರ್ತಮಾನಕ್ಕೆ ಗತಿ, ಲಯ ಕೊಡಲು ನಾವು ತಯಾರಾಗಬೇಕು ಎಂದು ಕರೆ ನೀಡಿದರು.
ಕನ್ನಡ ವಿಶ್ವವಿದ್ಯಾಲಯದ ಕಾರ್ಯಕಾರಿ ಸಮಿತಿ ಸದಸ್ಯರಾದ ಪ್ರೊ.ಅಲ್ಲಮಪ್ರಭು ಬೆಟ್ಟದೂರು ಇವರು ವಿಷಯ ಮಂಡನೆ ಮಾಡುತ್ತ ನಮ್ಮ ಸಾಮಾಜಿಕ ಬದುಕು ವರ್ಣ ವ್ಯವಸ್ಥೆಯ ಮೇಲೆ ನಿಂತಿದೆ. ಮಹಿಳೆಯರ ಅಸಮಾನತೆ, ದೇವದಾಸಿ ಪದ್ಧತಿ ಜೀವಾಂತವಾಗಿದೆ. ಕುಡಿತದಿಂದ ಕುಟುಂಬಗಳು ನಾಶವಾಗುತ್ತದೆ. ಮರ್ಯಾದ ಹತ್ಯೆಗಳಾಗುತ್ತಿವೆ. ಪರಿಸರ ತ್ವರಿತಗತಿಯಲ್ಲಿ ನಾಶವಾಗುತ್ತಿದೆ. ಅಂಧಶ್ರದ್ಧೆ ಇದೆ. ಈ ಹಿನ್ನೆಲೆಯಲ್ಲಿ ಮೌಢ್ಯ ನಿಷೇಧದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಪ್ರಾದೇಶಿಕ ಇಲ್ಲವಾದರೆ ರಾಷ್ಟ್ರೀಯತೆಗೆ ಅರ್ಥವಿಲ್ಲ. ನಮಗೆ ಕನ್ನಡ ನುಡಿ ಇತ್ತು. ಕನ್ನಡ ನಾಡು ಇರಲಿಲ್ಲ. ಏಕೀಕರಣದಿಂದ ಭಾಷಿಕವಾಗಿ ಒಗ್ಗೂಡಿದೆವು. ಆದರೆ ಆಡಳಿತದಲ್ಲಿ, ಶಿಕ್ಷಣದಲ್ಲಿ ಕನ್ನಡ ತರುವ ಕನಸು ಸಂಪೂರ್ಣವಾಗಿ ನೆರವೇರಲಿಲ್ಲ ಎಂದು ತಿಳಿಸಿದರು.
ನಮ್ಮ ಭಾಗದವರನ್ನೆ ವಿಶ್ವವಿದ್ಯಾಲಯಗಳಿಗೆ ಕುಲಸಚಿವರು ಮತ್ತು ಕುಲಪತಿಗಳನ್ನಾಗಿ ನೇಮಕ ಮಾಡಬೇಕು. ನಿಗಮಗಳು ಮಂಡಳಿಗಳು, ಪ್ರಾಧಿಕಾರಗಳು, ಅಕಾಡೆಮಿಗಳಲ್ಲಿ ಸದಸ್ಯತ್ವ, ಅಧ್ಯಕ್ಷರ ಆಯ್ಕೆ ಸಾಂಸ್ಕೃತಿಕ ಮೀಸಲಾತಿ ಒಳಪಡುವ ವಿಚಾರವಾಗಿದೆ. ರಾಜ್ಯೋತ್ಸವ ಪ್ರಶಸ್ತಿ ವಿತರಣೆಯಲ್ಲೂ ಪ್ರಾದೇಶಿಕ ಅಸಮಾನತೆ ಇದೆ. ಈ ಎಲ್ಲದರಲ್ಲೂ ಸಾಂಸ್ಕೃತಿಕ ಮೀಸಲಾತಿಯ ಅಗತ್ಯವಿದೆ ಎಂದು ನುಡಿಯುತ್ತ ದಾಬೋಲ್‌ಕರ್, ಪಾನ್ಸ್‌ರೆ, ಎಂ.ಎಂ.ಕಲಬುರ್ಗಿ, ಶ್ರೀಮತಿ ಗೌರಿ ಲಂಕೇಶ್ ಇವರ ಕೊಲೆಗಳು, ಯಾರೂ ವಿಚಾರ ಮಾಡಬೇಡಿ ಎಂದು ಸಾರುತ್ತಿವೆ. ಜೀವ ಭಯದಿಂದ ಕರ್ನಾಟಕದಲ್ಲಿ ವಿಚಾರವಂತರು ಮಾತನಾಡದಿರುವ ಪರಿಸ್ಥಿತಿ ಬಂದಿದೆ. ಸಹಿಷ್ಣುತೆ ಕಡಿಮೆಯಾಗುತ್ತಿದೆ. ಬಂಡಾಯದ ಎಲ್ಲ ಬರಹಗಾರರು ಕ್ರಿಯಾಶೀಲರಾಗಿದ್ದಾರೆ. ಆದರೆ ಸಂಘಟಿತ ಧ್ವನಿ ಇತ್ತೀಚೆಗೆ ನಿಂತಿರುವ ದುಃಸ್ಥಿತಿ ಕಾಣುತ್ತಿದ್ದೇವೆ. ನಾವೆಲ್ಲ ಒಟ್ಟಾಗದಿದ್ದರೆ ಸರ್ವನಾಶ ಕಾದಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕನ್ನಡ ವಿಶ್ವವಿದ್ಯಾಲಯವನ್ನು ಕುರಿತು ಮಾತನಾಡುತ್ತ ನೀವೆಲ್ಲ ಒಗ್ಗೂಡಿ ಕನ್ನಡ ವಿಶ್ವವಿದ್ಯಾಲಯವನ್ನು ಇನ್ನಷ್ಟು ಘನತೆಗೆ ಒಯ್ಯಬೇಕು. ನಿಮ್ಮ ಸಂಶೋಧನೆಗಳು ನಿಮ್ಮ ವಿದ್ಯಾರ್ಥಿಗಳಿಗೆ ಮೊದಲು ಮುಟ್ಟಬೇಕು. ಕಲಿಸುತ್ತಲೇ ಸಂಶೋಧನೆ ಮಾಡಿ ಎಂದು ಕಿವಿಮಾತು ಹೇಳಿದರು.
ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ವೆಂಕಟಗಿರಿ ದಳವಾಯಿ ಅವರು ವಿಷಯ ಮಂಡಿಸುತ್ತ ಅಂಬೇಡ್ಕರ್ ಅವರ ರಾಜಕೀಯ ಸಾಮಾಜಿಕ ಸಾಂಸ್ಕೃತಿಕ ಪ್ರಜಾಪ್ರಭುತ್ವ ಇಂದಿನ ಕಾಲಘಟ್ಟಕ್ಕೆ ಅಂತಿಮವಾದ ಪರಿಹಾರವಾಗಿದೆ. ಬುದ್ಧ, ಬಸವ, ಅಂಬೇಡ್ಕರ್ ಮುಂದಿನ ದಿನಗಳಲ್ಲಿ ಪುನಃ ಆಗಮಿಸುತ್ತಾರೆ ಎಂಬ ಭರವಸೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿ ಮಾನ್ಯಕುಲಪತಿಯವರಾದ ಡಾ.ಮಲ್ಲಿಕಾ ಎಸ್. ಘಂಟಿ ಅವರು ವೇದಿಕೆಯಲ್ಲಿದ್ದ ಗಣ್ಯರನ್ನು ಗೌರವಿಸಿ ಮಾತನಾಡುತ್ತ ಈ ದಿನ ಪೆರಿಯಾರ್ ಅವರ ೧೩೮ನೇ ಜನ್ಮದಿನವಾಗಿದೆ. ಈ ದಿನವನ್ನು ಮೌಢ್ಯ ವಿರೋಧಿ ದಿನಾಚರಣೆ ಎಂದು ವಿದ್ಯಾವಂತರು ಭಾವಿಸಿದರೆ ನಾವು ಪೆರಿಯಾರ್ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ. ಪೆರಿಯಾರ್ ಅವರ ವಿಚಾರದೊಳಗಿರುವ ಸಾಮಾಜಿಕ ರಾಜಕೀಯ ವಿದ್ಯಾಮಾನಗಳನ್ನು ನೆನಪು ಮಾಡಿಕೊಂಡು ಆ ಹಿನ್ನೆಲೆಯಲ್ಲಿ ಕರ್ನಾಟಕವನ್ನು ಕಟ್ಟುವ ಇಚ್ಛಾಶಕ್ತಿ ನಮಗೆ ಬರಲಿ ಎಂದು ಬಯಸಿದರು.
ವೇದಿಕೆಯಲ್ಲಿ ಕುಲಸಚಿವರಾದ ಡಾ.ಡಿ.ಪಾಂಡುರಂಗಬಾಬು ಅವರು ಉಪಸ್ಥಿತರಿದ್ದರು. ಪ್ರಾಧ್ಯಾಪಕರಾದ ಡಾ.ಮಂಜುನಾಥ ಬೇವಿನಕಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ನುಡಿದರು. ಡಾ.ಕೆ. ರಮೇಶ ನಿರೂಪಿಸಿ, ವಂದಿಸಿದರು. ಸಂಗೀತ ವಿಭಾಗದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವಿಚಾರಸಂಕಿರಣದಲ್ಲಿ ವಿಶ್ವವಿದ್ಯಾಲಯದ ಡೀನರು, ಆಹ್ವಾನಿತ ಗಣ್ಯರು, ಬೋಧಕ ವೃಂದ, ಆಡಳಿತ ವೃಂದ, ವಿದ್ಯಾರ್ಥಿಗಳು, ನಾಗರೀಕರು ಆಸಕ್ತಿಯಿಂದ ಭಾಗವಹಿಸಿದರು.
ಊಟದ ನಂತರ ಭುವನವಿಜಯದಲ್ಲಿ ಆರಂಭವಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಚಿಂತಕರಾದ ಡಾ.ಚಂದ್ರಶೇಖರ ಪಾಟೀಲ ಅವರು ಉದ್ಘಾಟಿಸಿದರು. ಮಳವಳ್ಳಿ ಮಹಾದೇವಸ್ವಾಮಿ ಮತ್ತು ತಂಡದವರಿಂದ ಮಂಟೇಸ್ವಾಮಿ ಕಥಾ ಭಾಗ ಕಾರ್ಯಕ್ರಮ ನಡೆಯಿತು. ಬಳ್ಳಾರಿ ಪತ್ರಕರ್ತರ ತಂಡದವರು ಅಭಿಮನ್ಯು ಕಾಳಗದ ದೊಡ್ಡಾಟವನ್ನು ಪ್ರದರ್ಶಿಸಿದರು.

ಕನ್ನಡ ವಿಶ್ವವಿದ್ಯಾಲಯದ ಬೆಳ್ಳಿಹಬ್ಬ-೨೫ ಕರ್ನಾಟಕದ ಜ್ವಲಂತ ಸಮಸ್ಯೆಗಳು: ನೀರು, ಬರ ನಿರ್ವಹಣೆ ವಿಚಾರಸಂಕಿರಣದ ಉದ್ಘಾಟನೆ

ಕನ್ನಡ ವಿಶ್ವವಿದ್ಯಾಲಯದ ಬೆಳ್ಳಿಹಬ್ಬ-೨೫
ಕರ್ನಾಟಕದ ಜ್ವಲಂತ ಸಮಸ್ಯೆಗಳು: ನೀರು, ಬರ ನಿರ್ವಹಣೆ ವಿಚಾರಸಂಕಿರಣದ
ಉದ್ಘಾಟನೆಯ ಪತ್ರಿಕಾ ವರದಿ- ೧೪.೯.೨೦೧೭

ನೀರಿನ ಬರಕ್ಕಿಂತ ಮಾನವೀಯತೆಯ ಬರ ಬಹಳ ಕ್ರೂರವಾದುದು ಎಂದು ಮಾನ್ಯ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಶ್ರೀ ದಿನೇಶ್ ಅಮೀನ ಮಟ್ಟು ಅವರು ಕಳಕಳಿಯಿಂದ ಹೇಳಿದರು.
ಕನ್ನಡ ವಿಶ್ವವಿದ್ಯಾಲಯದ ಬೆಳ್ಳಿಹಬ್ಬ ೨೫ರ ಪ್ರಯುಕ್ತ ೧೪.೯.೨೦೧೭ರಂದು ಮಂಟಪ ಸಭಾಂಗಣದಲ್ಲಿ ಏರ್ಪಡಿಸಿದ್ದ ಕರ್ನಾಟಕದ ಜ್ವಲಂತ ಸಮಸ್ಯೆಗಳು: ನೀರು, ಬರ ನಿರ್ವಹಣೆ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನೀರಿನ ಹಂಚಿಕೆಯಲ್ಲಿ ನ್ಯಾಯಾಲಯ ತಮಿಳುನಾಡಿನ ಪರವಾಗಿ ಯಾಕೆ ಇದೆ ಎಂದರೆ ಅಲ್ಲಿ ತಮಿಳು ಮೂಲದ ನ್ಯಾಯಧೀಶರಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಮಾಧ್ಯಮದವರಿದ್ದಾರೆ. ಅವರಿಂದ ಒತ್ತಡ ಇದೆ. ಆದರೆ ಕರ್ನಾಟಕದಲ್ಲಿ ಈ ರೀತಿಯ ಒತ್ತಡ ಇಲ್ಲ. ರಾಜಕೀಯ ನಾಯಕತ್ವದ ಸಮಸ್ಯೆ, ಮಾಧ್ಯಮದ ಮೂಲಕ ಒತ್ತಡ ಹಾಕಲಾಗದ ಸಮಸ್ಯೆ ಇದೆ ಎಂದು ವಿವರಿಸಿದರು.
ರೈತರು ಕೃಷಿಯಲ್ಲಿ ನೀರಿನ ನಿರ್ವಹಣೆ ಮಾಡಲು ವೈಜ್ಞಾನಿಕ ಅರಿವು ಹೊಂದಬೇಕಿದೆ. ಅತಿ ನೀರಿನ ಬಳಕೆ, ಕೀಟನಾಶಕದ ಬಳಕೆ, ರಸಗೊಬ್ಬರದ ಬಳಕೆಯಿಂದ ಭೂಮಿ ಜೌಗು ಆಗಿ ಫಲವತ್ತತೆ ನಾಶವಾಗುತ್ತದೆ. ನೀರು, ಬರ, ಕೃಷಿ ನಡುವೆ ಪರಸ್ಪರ ಸಂಬಂಧ ಇದೆ. ನೀರು, ಬರ ನಿರ್ವಹಣೆಯಲ್ಲಿ ಪ್ರಭುತ್ವದೊಂದಿಗೆ ನಾಗರೀಕರ ಪಾತ್ರವೂ ಇದೆ. ನಾವೆಲ್ಲ ಆತ್ಮ ವಂಚಕರಾಗಿದ್ದೇವೆ. ರೈತರ ಸಮಸ್ಯೆ ಅರ್ಥ ಮಾಡಿಕೊಳ್ಳಬೇಕು. ರೈತರಿಂದ ಕಡಿಮೆ ಬೆಲೆಗೆ ವಸ್ತುಗಳನ್ನು ಪಡೆಯಲು ಯೋಚಿಸುವುದೇ ಅಮಾನವೀಯ ಅನಿಸುತ್ತದೆ. ಪ್ರತಿ ೨ ಗಂಟೆಗೊಮ್ಮೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸ್ಥಳೀಯ ಲೇವಾದೇವಿಗಾರರ ಒತ್ತಡದಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರೈತರ ವಿಷಯದಲ್ಲಿ ರಾಜಕೀಯ ಸಲ್ಲದು. ಸಮೀಕ್ಷೆ ಪ್ರಕಾರ ರೈತನ ಮಾಸಿಕ ಆದಾಯ ೩,೦೮೦/- ರೂ. ಇದೆ. ಭೂ ಸ್ವಾದೀನ ತಡೆಯಲು ಸಾಧ್ಯವಾಗುತ್ತಿಲ್ಲ. ಭೂಸುಧಾರಣಾ ಕಾಯಿದೆ ರೈತರಿಗೆ ಅನುಕೂಲವಾಗಿಲ್ಲ. ರೈತರ ಸಾಲಮನ್ನಾ ಅನಿವಾರ್ಯವಾಗಿದ್ದು, ಸಾಲ ಮನ್ನಾ ರಾಜಕೀಯಕರಣಗೊಂಡಿದೆ ಎಂದು ಸಾಲಮನ್ನಾ ಕುರಿತು ಅಂಕಿ ಅಂಶಗಳನ್ನು ಒದಗಿಸಿದರು.
ಕೃಷಿಯನ್ನು ಲಾಭದಾಯಕವಾಗಿ ಮಾಡುವ ತನಕ ರೈತ ಸಂಬಂಧಿ ಸಮಸ್ಯೆಗಳು ತಪ್ಪುವುದಿಲ್ಲ ಎಂದು ತಿಳಿಸುತ್ತ, ನಗರಗಳಲ್ಲಿ ಶೌಚಕ್ಕೆ ನೀರನ್ನು ಕಡಿಮೆ ಬಳಸುವ ತಾಂತ್ರಿಕತೆಯನ್ನು ಕಂಡುಕೊಳ್ಳಬೇಕು. ಆಗ ನಗರಗಳಲ್ಲಿ ಕುಡಿಯುವ ನೀರಿನ ಬವಣೆ ತಪ್ಪಿಸಬಹುದು ಎಂದು ಅಭಿಪ್ರಾಯಪಟ್ಟರು.
ವಿಶ್ರಾಂತ ಪ್ರಾಧ್ಯಾಪಕರಾದ ಡಾ.ಟಿ.ಆರ್. ಚಂದ್ರಶೇಖರಯ್ಯ ಅವರು ವಿಷಯ ವಿಸ್ತರಣೆ ಮಾಡುತ್ತ ವಚನಕಾರರು ನೀರನ್ನು ಪರಿಭಾವಿಸಿರುವ ರೀತಿ ಇಂದಿಗೂ ಪ್ರಸ್ತುತವಾಗಿದೆ. ನೀರಿಗೆ ಸೂತಕ ಮೈಲಿಗೆ ಇಲ್ಲ. ನೀರು ತಾರತಮ್ಯ ಮಾಡುವುದಿಲ್ಲ. ಬರ, ನೀರು, ನಿರ್ವಹಣೆ, ಜಾಗತಿಕ ಮಟ್ಟದ ಸಮಸ್ಯೆಯಾಗಿದೆ. ಬರ ಸಮಾಜದಲ್ಲಿ ಎಲ್ಲರಿಗೂ ಸಮಸ್ಯೆ ತರುವುದಿಲ್ಲ. ವಾಣಿಜ್ಯ ಉದ್ಯಿಮೆಗಳು, ನೌಕರಶಾಹಿ, ರಾಜಕಾರಣಿಗಳು, ಬರದ ಲಾಭ ಪಡೆಯುತ್ತಾರೆ. ರೈತರು ವಿಕಲಚೇತನರು ಅಂಚಿನಲ್ಲಿರುವವರು ತೊಂದರೆ ಅನುಭವಿಸುತ್ತಾರೆ. ಹಸಿವಿನ ಬಗ್ಗೆ ಪಿಎಚ್.ಡಿ. ಅಧ್ಯಯನ ಮಾಡುವವರ ಸಂಖ್ಯೆ ಅತ್ಯಂತ ಕಡಿಮೆ. ಹಸಿವಿನಿಂದ ಸಾಯುವುದು ಕಾನೂನಿನ ದೃಷ್ಟಿಯಲ್ಲಿ ಅಪರಾಧವಾಗಿಲ್ಲ. ಬರದ ಸಮಸ್ಯೆಯು ಆಹಾರದ ಉತ್ಪಾದನೆಯ ಕೊರತೆಯಿಂದ ಬರುವುದಿಲ್ಲ. ಬರ ದೈವದ ಶಾಪವಲ್ಲ. ಸಮಾಜ, ಪ್ರತಿ ವ್ಯಕ್ತಿಗೆ ಬರದ ನಿರ್ವಹಣೆ ಕುರಿತು ಹೊಣೆಗಾರಿಕೆ ಇದೆ. ಅಂಬೇಡ್ಕರ್ ಹೇಳಿದಂತೆ ನಮಗೆ ಸಾಮಾಜಿಕ ಹಕ್ಕು ಬೇಕು. ರಾಜಕೀಯ ಸ್ವಾತಂತ್ರ್ಯ ಅಲ್ಲ ಎಂದು ನುಡಿದರು.
ಪ್ರಾಧ್ಯಾಪಕರಾದ ಡಾ. ಸಿ.ಜಿ. ಲಕ್ಷ್ಮಿಪತಿ ಅವರು ವಿಷಯ ವಿಸ್ತರಣೆ ಮಾಡುತ್ತ ಸೈದ್ಧಾಂತಿಕ ವಿಚಾರಗಳಿಗೆ ನಡೆಯುವ ಕೊಲೆಗಳು, ನಿರಾಶ್ರಿತ ಮಹಿಳೆಯರ ಸಮಸ್ಯೆ, ಕಾಣೆಯಾಗುವ ಮಹಿಳೆಯರ ಸಮಸ್ಯೆ, ಮಾರಾಟವಾಗುವ ಮಹಿಳೆಯರ ಸಮಸ್ಯೆ ಇವೆಲ್ಲ ನಾಗರಿಕ ಸಮಾಜದ ಜ್ವಲಂತ ಸಮಸ್ಯೆಗಳಾಗಿವೆ ಎಂದರು.
ಸಾಮಾಜಿಕ ಕಾರ್ಯಕರ್ತರಾದ ಶ್ರೀ ಜನಾರ್ದನ ಕೆಸರಗದ್ದೆ ಅವರು ವಿಷಯ ವಿಸ್ತರಣೆ ಮಾಡುತ್ತ ಲೆಟ್ ಅಜ್ ನಾಟ್ ಡಿಸ್ಟರ್ಬ್ ವಾಟರ್ ಸಿನೆಮಾ ಕುರಿತು ನೀರಿನ ಹಿನ್ನೆಲೆಯಲ್ಲಿ ವಿಶ್ಲೇಷಣೆ ಮಾಡುತ್ತ ೩೦ ವರ್ಷಗಳ ಹಿಂದೆ ನೀರಿನ ಸಮಸ್ಯೆ ಇರಲಿಲ್ಲ. ಇಂದು ನೀರಿನ ನಿರ್ವಹಣೆ ಮತ್ತು ಹಂಚಿಕೆ ಸಮರ್ಪಕವಾಗಿಲ್ಲ. ಜಲ ಸಂರಕ್ಷಣೆ, ಜಲ ಮರುಪೂರಣ, ಯಾವ ಕಾಲದಲ್ಲಿ ಎಂತಹ ಬೆಳೆ ಬೆಳೆಯಬೇಕು ಎಂಬ ಬಗ್ಗೆ ತಿಳುವಳಿಕೆಯ ಕೊರತೆ ಇದೆ ಎಂದರು.
ಅಧ್ಯಕ್ಷತೆ ವಹಿಸಿ ಮಾನ್ಯಕುಲಪತಿಯವರಾದ ಡಾ.ಮಲ್ಲಿಕಾ ಎಸ್. ಘಂಟಿ ಅವರು ವೇದಿಕೆಯಲ್ಲಿದ್ದ ಗಣ್ಯರನ್ನು ಗೌರವಿಸಿ ಮಾತನಾಡುತ್ತ ನಾವು ಗ್ರಾಮ ಸಂಸ್ಕೃತಿಯನ್ನು ಮರಳಿ ತರಬೇಕು. ಗ್ರಾಮ ಸಂಸ್ಕೃತಿಯಲ್ಲಿ ನೀರಿನ ಬಳಕೆಯಲ್ಲಿ ಮಿತವ್ಯಯವಿತ್ತು. ನೀರನ್ನು ದುಂದುಬಳಕೆ ಮಾಡುತ್ತಿರಲಿಲ್ಲ. ನಾವಿಂದು ನೀರಿನ ನಿರ್ವಹಣೆಯಲ್ಲಿ ಜೀವನ ಕ್ರಮ ಬದಲಾಯಿಸಿಕೊಳ್ಳಬೇಕಾಗಿದೆ. ಬಂಡವಾಳಶಾಹಿ ಸೃಷ್ಟಿಸಿದ ಭ್ರಮೆಗಳಿಗೆ ನಾವು ಮಾರುಹೋಗಿದ್ದೇವೆ ಎಂದು ನುಡಿದರು.
ವೇದಿಕೆಯಲ್ಲಿ ಕುಲಸಚಿವರಾದ ಡಾ.ಡಿ. ಪಾಂಡುರಂಗಬಾಬು ಅವರು ಉಪಸ್ಥಿತರಿದ್ದರು. ಡಾ.ವಿರೂಪಾಕ್ಷಿ ಪೂಜಾರಹಳ್ಳಿ ಅವರು ಸ್ವಾಗತಿಸಿದರು. ಡಾ.ರಮೇಶನಾಯಕ ಅವರು ಪ್ರಾಸ್ತಾವಿಕ ನುಡಿದರು. ಡಾ.ಎಸ್.ವೈ. ಸೋಮಶೇಖರ ಅವರು ನಿರೂಪಿಸಿದರು. ಡಾ. ವಿಠ್ಠಲರಾವ್ ಟಿ. ಗಾಯಕ್ವಾಡ್ ಅವರು ವಂದಿಸಿದರು. ಸಂಗೀತ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವಿಚಾರಸಂಕಿರಣದಲ್ಲಿ ವಿಶ್ವವಿದ್ಯಾಲಯದ ಡೀನರು, ಆಹ್ವಾನಿತ ಗಣ್ಯರು, ಬೋಧಕ ವೃಂದ, ಆಡಳಿತ ವೃಂದ, ವಿದ್ಯಾರ್ಥಿಗಳು, ನಾಗರೀಕರು ಆಸಕ್ತಿಯಿಂದ ಭಾಗವಹಿಸಿದರು.
ನಂತರ ಭುವನವಿಜಯದಲ್ಲಿ ಆರಂಭವಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಿರಿಯ ರಂಗಭೂಮಿ ಕಲಾವಿದರಾದ ಶ್ರೀಮತಿ ಸುಭದ್ರಮ್ಮ ಮನ್ಸೂರ್ ಅವರು ಉದ್ಘಾಟಿಸಿದರು. ಅನಂತರ ಶ್ರೀ ಬಸವರಾಜ ಸಿಗ್ಗಾಂವ ಮತ್ತು ತಂಡದವರಿಂದ ತತ್ತ್ವಪದಗಳ ಹಾಡುಗಾರಿಕೆ ನಡೆಯಿತು. ಬೆಂಗಳೂರು ಏಷಿಯನ್ ಥಿಯೇಟರ್ ತಂಡದಿಂದ ವರಾಹ ಪುರಾಣ ನಾಟಕ ಪ್ರದರ್ಶನವಾಯಿತು.

01 (3)06 (1)21728758_10208395449198865_1672892581388514385_o21729046_10208395450598900_8208955331775455028_o03 (3)07

ದಿನಾಂಕ 14.9.2017ರ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡುತ್ತಿರುವ ನಾಡೋಜ ಶ್ರೀಮತಿ ಸುಭದ್ರಮ್ಮ ಮನ್ಸೂರ್‍ ಅವರು,  ಶ್ರೀ ಬಸವರಾಜ ಸಿಗ್ಗಾಂವ ಮತ್ತು ತಂಡದಿಂದ ತತ್ತ್ವಪದಗಳ ಹಾಡುಗಾರಿಕೆ, ಹಾಗೂ   ಬೆಂಗಳೂರು ಏಷಿಯನ್‍ ಥಿಯೇಟರ್‍ ಅವರಿಂದ ವರಾಹ ಪುರಾಣ ನಾಟಕ ಪ್ರದರ್ಶನ

21752737_10208404796032530_3155355697834195689_o21740795_10208404797872576_8397206283962326928_o21762819_10208404769551868_4292304862471136829_o21740882_10208404769631870_3026300868264505885_o21458046_10208404769591869_6221419492016766709_o

 

 

ಕನ್ನಡ ವಿಶ್ವವಿದ್ಯಾಲಯದ ಬೆಳ್ಳಿಹಬ್ಬದ ಸಾಂಸ್ಕೃತಿಕ ಕಾ‍ರ್ಯಕ್ರಮಗಳು ಭುವನವಿಜಯದಲ್ಲಿ ಆರಂಭವಾದವು. 13.9.2017ರಂದು ಕಲಾಗಂಗೋತ್ರಿ ತಂಡವು ಪ್ರದರ್ಶಿಸಿದ ಮುಖ್ಯಮಂತ್ರಿ ನಾಟಕದ ಛಾಯಾಚಿತ್ರಗಳು

ಕನ್ನಡ ವಿಶ್ವವಿದ್ಯಾಲಯದ ಬೆಳ್ಳಿಹಬ್ಬ-೨೫ ಭವಿಷ್ಯದ ಕನ್ನಡ ವಿಶ್ವವಿದ್ಯಾಲಯ ವಿಚಾರಸಂಕಿರಣದ ಉದ್ಘಾಟನೆ

ಕನ್ನಡ ವಿಶ್ವವಿದ್ಯಾಲಯದ ಬೆಳ್ಳಿಹಬ್ಬ-೨೫
ಭವಿಷ್ಯದ ಕನ್ನಡ ವಿಶ್ವವಿದ್ಯಾಲಯ ವಿಚಾರಸಂಕಿರಣದ
ಉದ್ಘಾಟನೆಯ ಪತ್ರಿಕಾ ವರದಿ- ೧೩.೯.೨೦೧೭

ಇಂದಿನ ಮಾಹಿತಿ ಸ್ಪೋಟಕ ಯುಗದಲ್ಲಿ ಮಾಹಿತಿಗಳು ಸರಕಾಗಿವೆ. ಚಿಂತನೆ ಶೂನ್ಯವಾಗಿದೆ ಎಂದು ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಬಿ.ಎ. ವಿವೇಕ ರೈ ಅವರು ತಿಳಿಸಿದರು.
ಕನ್ನಡ ವಿಶ್ವವಿದ್ಯಾಲಯದ ಬೆಳ್ಳಿಹಬ್ಬ ೨೫ರ ಪ್ರಯುಕ್ತ ೧೩.೯.೨೦೧೭ರಂದು ಮಂಟಪ ಸಭಾಂಗಣದಲ್ಲಿ ಏರ್ಪಡಿಸಿದ್ದ ಭವಿಷ್ಯದ ಕನ್ನಡ ವಿಶ್ವವಿದ್ಯಾಲಯ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭವಿಷ್ಯದ ವಿಶ್ವವಿದ್ಯಾಲಯ ಎಂದರೆ ಕನ್ನಡ ವಿಶ್ವವಿದ್ಯಾಲಯಕ್ಕೆ ಪ್ರತ್ಯೇಕ ಕಾಯ್ದೆಯನ್ನು ಮಾಡಬೇಕು. ಕರ್ನಾಟಕದ ಉಳಿದೆಲ್ಲ ವಿಶ್ವವಿದ್ಯಾಲಯಗಳ ಜೊತೆ ಸೇರಿಸಬಾರದು. ಸೇರಿಸಿದರೆ ಇದೊಂದು ಸಾಮಾನ್ಯ ವಿಶ್ವವಿದ್ಯಾಲಯವಾಗುತ್ತದೆ. ಇದಕ್ಕೆ ಸ್ವಾಯತ್ತತೆ ಬೇಕು. ಕನ್ನಡ ವಿಶ್ವವಿದ್ಯಾಲಯದ ತನ್ನ ಸಿದ್ಧಾಂತಗಳನ್ನು ಆಚರಣೆಗೆ ತರಲು ಮತ್ತು ಪ್ರಸಾರಾಂಗದ ಪ್ರಕಟಣೆಗಳ ಕುರಿತು ಜನಸಾಮಾನ್ಯರೊಂದಿಗೆ ಸಂವಾದದ ಅಗತ್ಯವಿದೆ. ಕನ್ನಡ ವಿಶ್ವವಿದ್ಯಾಲಯದ ಅದ್ಭುತ ಕೆಲಸಗಳು ಕರ್ನಾಟಕದ ಹೊರಗೆ ತಲುಪಿಲ್ಲ. ಹೊರ ಜಗತ್ತಿಗೆ ಪಂಪನ ಬಗ್ಗೆ ಗೊತ್ತಿಲ್ಲ. ಕನ್ನಡ ಶಾಸ್ತ್ರೀಯ ಜಾನಪದ ಪಠ್ಯಗಳನ್ನು ಜಗತ್ತಿಗೆ ಪರಿಚಯಿಸಬೇಕು. ಜೊತೆಗೆ ಕನ್ನಡ ವಿಶ್ವವಿದ್ಯಾಲಯದ ಪಿಎಚ್.ಡಿ ಪ್ರಬಂಧಗಳನ್ನು ಒಳಗೊಂಡು ಬಹು ಮಾಧ್ಯಮಗಳ ಮೂಲಕ ಪ್ರಕಟಿಸಬೇಕು. ಇದಕ್ಕೆ ಪ್ರತ್ಯೇಕ ವೆಬ್‌ಸೈಟ್‌ನ ಅಗತ್ಯವಿದೆ. ವಿಜ್ಞಾನದಲ್ಲಿ ವಿಶ್ವವಿದ್ಯಾಲಯಗಳು ಪ್ರವರ್ಧಮಾನಕ್ಕೆ ಬಂದಂತೆ ಮಾನವೀಕ ಮತ್ತು ಸಾಮಾಜಿಕ ವಿಷಯಗಳ ವಿಶ್ವವಿದ್ಯಾಲಯಗಳು ಪ್ರವರ್ಧಮಾನಕ್ಕೆ ಬರುತ್ತಿಲ್ಲ. ಈ ಕುರಿತು ಕನ್ನಡ ವಿಶ್ವವಿದ್ಯಾಲಯ ಚಿಂತನೆ ಮಾಡುತ್ತಿದೆ ಎಂದರು.
ವಿಶ್ರಾಂತ ಕುಲಪತಿ ಡಾ. ಎ. ಮುರಿಗೆಪ್ಪ ಅವರು ವಿಷಯ ವಿಸ್ತರಣೆ ಮಾಡುತ್ತ ಕನ್ನಡ ಅಳಿವಿನ ಅಂಚಿನಲ್ಲಿರುವ ಭಾಷೆ ಅಲ್ಲ, ಅಳಿವಿನಂಚಿನಲ್ಲಿರುವ ಉಪಭಾಷೆಗಳನ್ನು ದಾಖಲೀಕರಣ ಮಾಡಬೇಕು. ವಿಶ್ವವಿದ್ಯಾಲಯದ ಎಲ್ಲ ಕೆಲಸ ಕಾರ್ಯ ಚಟುವಟಿಕೆಗಳನ್ನು ವೆಬ್‌ಸೈಟ್‌ಗೆ ಹಾಕುವ ಮೂಲಕ ವಿಸ್ತಾರಗೊಳಿಸಬೇಕು ಎಂದು ತಿಳಿಸಿದರು.
ವಿಶ್ರಾಂತ ಕುಲಪತಿಯವರಾದ ಡಾ.ಕೆ.ವಿ.ನಾರಾಯಣ ಅವರು ಮಾತನಾಡುತ್ತ ೨೫ ವರ್ಷಗಳಲ್ಲಿ ಕನ್ನಡ ವಿಶ್ವವಿದ್ಯಾಲಯ ಅದ್ಭುತವಾಗಿ ಬೌದ್ದಿಕವಾಗಿ ಬೆಳೆದಿದೆ. ಆರಂಭದಲ್ಲಿ ಕರ್ನಾಟಕದ ಯಾವ ವಿಶ್ವವಿದ್ಯಾಲಯಗಳಿಗೂ ಇಲ್ಲದ ಸವಾಲುಗಳು ಕನ್ನಡ ವಿಶ್ವವಿದ್ಯಾಲಯಕ್ಕೆ ಇದ್ದವು. ಈಗ ಕನ್ನಡ ವಿಶ್ವವಿದ್ಯಾಲಯವನ್ನು ಕರ್ನಾಟಕದ ಎಲ್ಲ ವಿಶ್ವವಿದ್ಯಾಲಯಗಳ ಪಟ್ಟಿಗೆ ಸೇರಿಸಲಾಗುತ್ತಿದೆ. ಇದರಿಂದ ಕನ್ನಡ ವಿಶ್ವವಿದ್ಯಾಲಯ ತನ್ನ ಚಹರೆ, ಪ್ರತ್ಯೇಕತೆ ಅನನ್ಯತೆಯನ್ನು ಉಳಿಸಿಕೊಳ್ಳಲು ಪ್ರಯತ್ನ ನಡೆಸಬೇಕಾಗುತ್ತದೆ. ಕನ್ನಡ ವಿಶ್ವವಿದ್ಯಾಲಯದ ಬಗ್ಗೆ ಇರುವ ಸದ್ಭಾವನೆಯನ್ನು ಪೋಷಿಸುವ ಗಟ್ಟಿಗೊಳಿಸುವ ಕೆಲಸ ಆಗಬೇಕಾಗಿದೆ. ಸದ್ಭಾವನೆಯನ್ನು ಸಾಮಾಜಿಕ ಸಮೀಕ್ಷೆಯಾಗಿ ಸಮಾಜಕ್ಕೆ ಉಪಯುಕ್ತವಾಗುವಂತೆ ಪರಿವರ್ತಿಸಿಕೊಳ್ಳಬೇಕು ಎಂದು ತಿಳಿಸುತ್ತ ಕನ್ನಡ ವಿಶ್ವವಿದ್ಯಾಲಯದಲ್ಲಿ ಇರುವ ಬಹಳ ದೊಡ್ಡ ದತ್ತಸಂಚಯವನ್ನು ಹೊರಜಗತ್ತಿಗೆ ಪರಿಚಯಿಸಬೇಕಾಗಿದೆ ಎಂದು ನುಡಿದರು.
ವಿಶ್ರಾಂತ ಕುಲಪತಿಯವರಾದ ಡಾ.ಹಿ.ಚಿ.ಬೋರಲಿಂಗಯ್ಯ ಅವರು ಮಾತನಾಡುತ್ತ ಅಧ್ಯಾಪಕರು ಹೊಸ ಕಾಲಕ್ಕೆ ಸಜ್ಜುಗೊಳ್ಳುವ ಮೂಲಕ ನಮ್ಮನ್ನು ನಾವು ಪರಿಶೀಲಿಸಿಕೊಳ್ಳಬೇಕಾಗಿದೆ. ಮಾನವೀಯ ಮೌಲ್ಯಗಳಿಗಿಂತ ಹಣವೇ ಪ್ರಧಾನವಾಗುತ್ತಿರುವ ಈ ಸಂದರ್ಭದಲ್ಲಿ ಕನ್ನಡ ಸಂವರ್ಧನೆ ಮಾಡುವ ಕೆಲಸವಾಗಬೇಕು. ಸಾಹಿತ್ಯ ಹೊರತುಪಡಿಸಿ ಮಾನವಿಕಗಳ ಕಡೆ ಗಮನಹರಿಸಬೇಕು ಎಂದು ನುಡಿದರು.
ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಡಾ.ಸರಜೂ ಕಾಟ್ಕರ್ ಅವರು ಮಾತನಾಡುತ್ತ ಶಾಂತಿನಿಕೇತನದ ರೀತಿ ಕನ್ನಡ ವಿಶ್ವವಿದ್ಯಾಲಯವನ್ನು ಕಟ್ಟುವ ಕನಸು ಕಂಬಾರರದಾಗಿತ್ತು. ಕನ್ನಡ ವಿಶ್ವವಿದ್ಯಾಲಯದಿಂದ ಪ್ರಕಟವಾಗಿರುವ ಪುಸ್ತಕಗಳಿಗೆ ಭವಿಷ್ಯದಲ್ಲಿ ಓದುಗರನ್ನು ತಯಾರು ಮಾಡಬೇಕಾಗಿದೆ. ಇಂಗ್ಲಿಷ್ ಹಿಂದಿ, ಸಂಸ್ಕೃತ, ಆಧುನಿಕ ಇತಿಹಾಸ ಕಲಿಸುವ ಕೆಲಸವಾಗಬೇಕಾಗಿದೆ. ಇಲ್ಲಿ ಆಕರಗಳು ನಿರ್ಮಾಣವಾಗಬೇಕು ಎಂದು ತಿಳಿಸಿದರು.
ಮಾನ್ಯಕುಲಪತಿಯವರಾದ ಡಾ.ಮಲ್ಲಿಕಾ ಎಸ್. ಘಂಟಿ ಅವರು ವೇದಿಕೆಯಲ್ಲಿದ್ದ ಗಣ್ಯರನ್ನು ಗೌರವಿಸಿ ಮಾತನಾಡುತ್ತ ಡಾ.ಚಂದ್ರಶೇಖರ ಕಂಬಾರ ಅವರು ಕುಲಪತಿಗಳಾಗಿದ್ದ ಸಂದರ್ಭದ ರಾಜಕೀಯ ಸಾಂಸ್ಕೃತಿಕ ಪರಿಸರಕ್ಕೂ ಇವತ್ತಿಗೂ ಬಹಳ ವ್ಯತ್ಯಾಸಗಳಿವೆ. ಎಲ್ಲ ವಿಶ್ವವಿದ್ಯಾಲಯಗಳ ಜೊತೆ ಕನ್ನಡ ವಿಶ್ವವಿದ್ಯಾಲಯವನ್ನು ಸೇರಿಸುತ್ತಿರುವ ಕಾಯ್ದೆಗೆ ಸಂಬಂಧಿಸಿದಂತೆ ವೇದಿಕೆಯಲ್ಲಿರುವ ಎಲ್ಲರೂ ಜವಾಬ್ದಾರಿ ಹೊರಬೇಕು ಎಂದು ಕೇಳಿಕೊಳ್ಳುತ್ತ, ಭವಿಷ್ಯದ ಕನ್ನಡ ವಿಶ್ವವಿದ್ಯಾಲಯದ ಕುರಿತು ನೀಡಿದ ಸಲಹೆಗಳನ್ನು ಸಾಕಾರಗೊಳಿಸಲು ಪ್ರಯತ್ನಿಸುವುದಾಗಿ ಹೇಳಿದರು.
ವಿಶ್ವವಿದ್ಯಾಲಯದ ಡೀನರಾದ ಡಾ. ಎ. ಮೋಹನ್ ಕುಂಟಾರ ಅವರು ಸ್ವಾಗತಿಸಿದರು. ಡಾ.ಎಫ್.ಟಿ.ಹಳ್ಳಿಕೇರಿ ಅವರು ಪ್ರಾಸ್ತಾವಿಕ ನುಡಿದರು. ಡಾ. ರವೀಂದ್ರನಾಥ ಅವರು ನಿರೂಪಿಸಿದರು. ಡಾ. ವಿಠ್ಠಲರಾವ್ ಟಿ. ಗಾಯಕ್ವಾಡ್ ಅವರು ವಂದಿಸಿದರು. ಸಂಗೀತ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.
ನಂತರ ಭುವನವಿಜಯದಲ್ಲಿ ಆರಂಭವಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಿರಿಯ ಸಾಹಿತಿಗಳು ಮತ್ತು ಚಿಂತಕರಾದ ಡಾ.ಕಾಳೇಗೌಡ ನಾಗವಾರ ಅವರು ಉದ್ಘಾಟಿಸಿದರು. ಅನಂತರ ಮೈಸೂರಿನ ಜನಮನ ತಂಡದಿಂದ ಜನಪದ ಮತ್ತು ತತ್ವಪದಗಳ ಗಾಯನ ನಡೆಯಿತು. ಬೆಂಗಳೂರು ಕಲಾ ಗಂಗೋತ್ರಿ ತಂಡದಿಂದ ಮುಖ್ಯಮಂತ್ರಿ ನಾಟಕ ಪ್ರದರ್ಶನವಾಯಿತು.